/kannada/photo-gallery/try-this-simple-trick-to-remove-cockroaches-in-every-corner-of-the-house-within-few-minutes-249320 ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಹಾಕಲು ಸಿಂಪಲ್ ಟ್ರಿಕ್ ಮನೆಯ ಮೂಲೆ ಮೂಲೆಯಲ್ಲಿ ಅವಿತಿರುವ ಜಿರಳೆಗಳನ್ನು 5 ನಿಮಿಷದಲ್ಲಿ ಹೊರಹಹಾಕಲು ಸಿಂಪಲ್ ಟ್ರಿಕ್ 249320

ಈ ತಿಂಗಳಲ್ಲಿ ಹುಟ್ಟಿದವರಿಗೆ ಸೋಲೆಂಬುದೇ ಇಲ್ಲ ! ಇವರು ಯಶಸ್ಸಿನ ಉತ್ತುಂಗಕ್ಕೆ ಏರುವುದು ಖಚಿತ

June Month Born People Personality: ಯಾವುದೇ ರೀತಿಯ ಅಪಾಯಕಾರಿ ಕೆಲಸಗಳಿಂದಲೂ ಹಿಂದೆ ಸರಿಯುವುದಿಲ್ಲ.ಕೆಲಸ ಎಷ್ಟೇ ಕಷ್ಟಕರವಾಗಿದ್ದರೂ ಒಂದಿಷ್ಟೂ ಹೆದರದೆ ಮುನ್ನುಗ್ಗುತ್ತಾರೆ. 

Written by - Ranjitha R K | Last Updated : Sep 2, 2023, 12:24 PM IST
  • ಬೇರೆ ಬೇರೆ ತಿಂಗಳಲ್ಲಿ ಹುಟ್ಟಿದವರ ಸ್ವಭಾವವೂ ವಿಭಿನ್ನವಾಗಿರುತ್ತದೆ.
  • ಈ ತಿಂಗಳಲ್ಲಿ ಜನಿಸಿದವರು ಧೈರ್ಯಶಾಲಿಗಳಾಗಿರುತ್ತಾರೆ
  • ಅಪಾಯಗಳನ್ನು ತೆಗೆದುಕೊಳ್ಳುವ ಧೈರ್ಯ ಇವರಲ್ಲಿರುತ್ತದೆ
ಈ ತಿಂಗಳಲ್ಲಿ ಹುಟ್ಟಿದವರಿಗೆ ಸೋಲೆಂಬುದೇ ಇಲ್ಲ ! ಇವರು ಯಶಸ್ಸಿನ ಉತ್ತುಂಗಕ್ಕೆ ಏರುವುದು ಖಚಿತ  title=

ಬೆಂಗಳೂರು : ಬೇರೆ ಬೇರೆ ತಿಂಗಳಲ್ಲಿ ಹುಟ್ಟಿದವರ ಸ್ವಭಾವವೂ ವಿಭಿನ್ನವಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇಂಗ್ಲಿಷ್ ತಿಂಗಳಲ್ಲಿ ಆರನೇ ತಿಂಗಳನ್ನು ಜೂನ್ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ಜನಿಸಿದವರು ಧೈರ್ಯಶಾಲಿ ಸ್ವಭಾವದವರಾಗಿರುತ್ತಾರೆ. ಯಾವುದೇ ರೀತಿಯ ಅಪಾಯಕಾರಿ ಕೆಲಸಗಳಿಂದಲೂ ಹಿಂದೆ ಸರಿಯುವುದಿಲ್ಲ.ಕೆಲಸ ಎಷ್ಟೇ ಕಷ್ಟಕರವಾಗಿದ್ದರೂ ಒಂದಿಷ್ಟೂ ಹೆದರದೆ ಮುನ್ನುಗ್ಗುತ್ತಾರೆ. 

ವ್ಯಕ್ತಿತ್ವ : 
ಅಪಾಯಗಳನ್ನು ತೆಗೆದುಕೊಳ್ಳುವ ಧೈರ್ಯದ ಜೊತೆಗೆ, ಇವರು ರಾಜತಾಂತ್ರಿಕ ಗುಣಗಳನ್ನು ಕೂಡಾ ಹೊಂದಿರುತ್ತಾರೆ. ಯಾರೊಂದಿಗೆ, ಯಾವಾಗ ಹೇಗೆ ಮಾತನಾಡಬೇಕು ಎನ್ನುವುದು ಇವರಿಗೆ ಚೆನ್ನಾಗಿ ತಿಳಿದಿರುತ್ತದೆ. ಆದ್ದರಿಂದಲೇ ಅವರು ತಮ್ಮ ಉದ್ದೇಶಗಳಲ್ಲಿ ಯಶಸ್ವಿಯಾಗುತ್ತಾರೆ.

ಇದನ್ನೂ ಓದಿ : ಮುಂದಿನ 72 ದಿನ ಜಯದ ಮಾರ್ಗದಲ್ಲಿಯೇ ಮುನ್ನಡೆಯುವರು ಈ ರಾಶಿಯವರು! ಸುಖ ಸಂಪತ್ತಿಗೆ ಕೊರತೆಯಿಲ್ಲದೆ ಕಾಯುವನು ಶನಿ ಮಹಾತ್ಮ

ಗುಣ ಹೇಗಿರುತ್ತದೆ  : 
ಜೂನ್ ತಿಂಗಳಲ್ಲಿ ಜನಿಸಿದವರಲ್ಲಿ ಹಲವು ಕಲಾತ್ಮಕ ಗುಣಗಳಿವೆ. ಅಡುಗೆ ಕಲೆಯಲ್ಲಿ ಇವರು ಪ್ರವೀಣರು. ರುಚಿಕರವಾದ ತಿನಿಸುಗಳನ್ನು ಮಾಡಿ ಎಲ್ಲರಿಗೂ ಉಣಬಡಿಸುವುದರಲ್ಲಿ ವಿಶೇಷ ಒಲವು ಹೊಂದಿರುತ್ತಾರೆ.

ರಾಜಕೀಯ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರೆ ಮೇಲುಗೈ ಸಾಧಿಸುವ ಶಕ್ತಿ ಅವರಲ್ಲಿದೆ. ರಾಜತಾಂತ್ರಿಕತೆಯು ಅವರನ್ನು ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಮುನ್ನಡೆಯಲು ಸಹಾಯ ಮಾಡುತ್ತದೆ. ತಮ್ಮ ಜೀವನದಲ್ಲಿ ಯಥೇಚ್ಛವಾಗಿ ಹೆಸರು-ಕೀರ್ತಿ-ಹಣ ಪಡೆಯುತ್ತಾರೆ. ಯಾರ ಬೆಂಬಲವೂ ಇಲ್ಲದೆ ಸಮಾಜದಲ್ಲಿ ಸ್ಥಾನಮಾನ ಪ್ರತಿಷ್ಠೆ ಗಳಿಸುತ್ತಾರೆ. 

ಇದನ್ನೂ ಓದಿ :ASTRO TIPS: ಶನಿವಾರ ಯಾವ ವಸ್ತುಗಳನ್ನು ಮನೆಗೆ ತರಬಾರದು..?

ಅವರ ಸ್ವಭಾವ : 
ಕೆಲವೊಮ್ಮೆ ಮೊಂಡುತನದ ಸ್ವಭಾವ ಹೊಂದಿರುತ್ತಾರೆ. ಈ ಮೊಂಡುತನದ ಸ್ವಭಾವದಿಂದಾಗಿ ತಮಗೇ  ನಷ್ಟವನ್ನು ಉಂಟು ಮಾಡಿಕೊಳ್ಳುತ್ತಾರೆ.  ಏನೇ ಬೇಸರವಾದರೂ ಎಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ. ತಮ್ಮ ಮನಸ್ಸಿನ ಭಾವನೆಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಿಲ್ಲ.   ತಮ್ಮ ಕಷ್ಟಕ್ಕೆ ತಾವೇ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಯೋಚನೆ ಇವರದ್ದು.  

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)  

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.