ಮದರ್ ತೆರೇಸಾಗೂ ಚಿಕಿತ್ಸೆ ನೀಡಿದ್ದ ಇವರು ದೇಶದ ಶ್ರೀಮಂತ ವೈದ್ಯ! ಈ ಕನ್ನಡಿಗನ ಆಸ್ತಿ 9 ಸಾವಿರ ಕೋಟಿ-ಯಾರು ಗೊತ್ತಾ ವ್ಯಕ್ತಿ?

Richest Doctor of India Devi Shetty: ಭಾರತದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಕೈಗೆಟುಕುವಂತೆ ಲಭಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡಿದ್ದ ಮದರ್ ತೆರೇಸಾ ಎಂಬ ಅಪ್ರತಿಮ ಮಾನವತಾವಾದಿಗೆ ಚಿಕಿತ್ಸೆ ನೀಡಿದ್ದ ಡಾ ದೇವಿ ಶೆಟ್ಟಿ ಭಾರತದ ಅಗ್ರಗಣ್ಯ ವೈದ್ಯರಲ್ಲಿ ಒಬ್ಬರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಹೃದಯ ಶಸ್ತ್ರಚಿಕಿತ್ಸಕ, ಬಿಲಿಯನೇರ್ ಉದ್ಯಮಿ ಡಾ ದೇವಿ ಶೆಟ್ಟಿ ಅವರು 1984 ರಲ್ಲಿ ಮದರ್ ತೆರೇಸಾ ಅವರಿಗೆ ಹೃದಯಾಘಾತವಾದಾಗ ವೈಯಕ್ತಿಕ ವೈದ್ಯರಾಗಿ ಐದು ವರ್ಷಗಳ ಕಾಲ ಚಿಕಿತ್ಸೆ ನೀಡಿದ್ದರು.

2 /7

ಡಾ ಶೆಟ್ಟಿ ಅವರು ಒಮ್ಮೆ ಮದರ್ ತೆರೇಸಾ ಅವರು, ಬಡವರ ಜೀವನದಲ್ಲಿ ಬದಲಾವಣೆಯನ್ನು ತರಲು ಹೇಗೆ ಪ್ರೇರೇಪಿಸಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾ ಅಂಕಣವೊಂದನ್ನು ಬರೆದಿದ್ದಾರೆ.

3 /7

ಡಾ ದೇವಿ ಶೆಟ್ಟಿ ಅವರು 2001 ರಲ್ಲಿ ನಾರಾಯಣ ಹೃದಯಾಲಯವನ್ನು ಸ್ಥಾಪಿಸಿದರು. ಇದು ನಂತರ ನಾರಾಯಣ ಹೆಲ್ತ್ ಆಗಿ ಮಾರ್ಪಟ್ಟಿತು. ಇದು 47 ಆರೋಗ್ಯ ಕೇಂದ್ರಗಳನ್ನು ಹೊಂದಿದ್ದು, ಭಾರತದ ಅತೀ ದೊಡ್ಡ ಸಂಸ್ಥೆಯಾಗಿದೆ. ಇದರ ಮಾರುಕಟ್ಟೆ ಮೌಲ್ಯ 15,000 ಕೋಟಿ ರೂ. ಸುದೀರ್ಘ ವೃತ್ತಿಜೀವನದಲ್ಲಿ ಡಾ ದೇವಿ ಶೆಟ್ಟಿ ಅವರು ದೇಶದ ಆರೋಗ್ಯ ರಕ್ಷಣೆಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.

4 /7

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನಿಸಿದ ಡಾ ಶೆಟ್ಟಿ ಅವರು, ವಿಶ್ವದ ಮೊದಲ ಹೃದಯ ಕಸಿ ಶಸ್ತ್ರಚಿಕಿತ್ಸೆಯ ಬಗ್ಗೆ ಓದಿದ ನಂತರ ಬಾಲ್ಯದಲ್ಲಿಯೇ ಹೃದಯ ಶಸ್ತ್ರಚಿಕಿತ್ಸಕರಾಗಲು ನಿರ್ಧರಿಸಿದರು. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದ ಅವರು, ನಂತರ ಯುಕೆ ಮತ್ತು ಯುಎಸ್ಎಗಳಲ್ಲಿ ಹೃದಯ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡಿದರು.

5 /7

ಭಾರತಕ್ಕೆ ತಮ್ಮ ಜ್ಞಾನವನ್ನು ಮರಳಿ ತರುವ ಮೊದಲು ಅತ್ಯಾಧುನಿಕ ಆರೋಗ್ಯ ಪರಿಸರದಲ್ಲಿ ಅನುಭವವನ್ನು ಪಡೆದರು. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ಯುಕೆ ಮತ್ತು ಯುಎಸ್ಎಗಳಲ್ಲಿ ಹೃದಯ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡಿದರು.  

6 /7

ಭಾರತದಾದ್ಯಂತ 30 ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ 7,000 ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ನಾರಾಯಣ ಹೆಲ್ತ್ ಕೈಗೆಟುಕುವ ಬೆಲೆಯಲ್ಲಿ ಉತ್ತಮ-ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.

7 /7

ಡಾ ಶೆಟ್ಟಿ ಅವರು ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (2004) ಮತ್ತು ಪದ್ಮಭೂಷಣ (2012) ಸೇರಿದಂತೆ ಹಲವಾರು ಪುರಸ್ಕಾರಗಳೊಂದಿಗೆ ಗೌರವಿಸಲ್ಪಟ್ಟಿದ್ದಾರೆ. ಇನ್ನು ರೂ. 9,800 ಕೋಟಿ ($ 1.2 ಬಿಲಿಯನ್) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಇನ್ನು ಇವರನ್ನು ಭಾರತದ ಶ್ರೀಮಂತ ವೈದ್ಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.