ಅಯೋಧ್ಯೆ ವಿವಾದ: ಮಧ್ಯಸ್ಥಿಕೆ ಸಮಿತಿಯ ಪ್ರಕ್ರಿಯೆ ಮುಂದುವರಿಸಲು ಸುಪ್ರೀಂ ಅನುಮತಿ

ಅಯೋಧ್ಯೆ ಭೂ ವಿವಾದದ ಮಧ್ಯಸ್ಥಿಕೆ ಸಮಿತಿ ಪ್ರಕ್ರಿಯೆ ಮುಂದುವರೆಸಲು ಸುಪ್ರೀಂಕೋರ್ಟ್ ಗುರುವಾರದಂದು ಅನುಮತಿ ನೀಡಿದೆ. ಫಲಿತಾಂಶದ ಕುರಿತು ವರದಿ ಪಡೆಯಲು ಆಗಸ್ಟ್ 1 ರವರೆಗೆ ಸಮಯವನ್ನು ನೀಡಿತು. 

Last Updated : Jul 18, 2019, 01:19 PM IST
ಅಯೋಧ್ಯೆ ವಿವಾದ: ಮಧ್ಯಸ್ಥಿಕೆ ಸಮಿತಿಯ ಪ್ರಕ್ರಿಯೆ ಮುಂದುವರಿಸಲು ಸುಪ್ರೀಂ ಅನುಮತಿ  title=
file photo

ನವದೆಹಲಿ: ಅಯೋಧ್ಯೆ ಭೂ ವಿವಾದದ ಮಧ್ಯಸ್ಥಿಕೆ ಸಮಿತಿ ಪ್ರಕ್ರಿಯೆ ಮುಂದುವರೆಸಲು ಸುಪ್ರೀಂಕೋರ್ಟ್ ಗುರುವಾರದಂದು ಅನುಮತಿ ನೀಡಿದೆ. ಫಲಿತಾಂಶದ ಕುರಿತು ವರದಿ ಪಡೆಯಲು ಆಗಸ್ಟ್ 1 ರವರೆಗೆ ಸಮಯವನ್ನು ನೀಡಿತು. 

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಮುಂದಿನ ವಿಚಾರಣೆಯನ್ನು ಆಗಸ್ಟ್ 2 ರಂದು ನಿಗದಿಪಡಿಸಿ ಭವಿಷ್ಯದ ಕ್ರಮವನ್ನು ಮಧ್ಯಸ್ಥಿಕೆ ವರದಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಿತು ಎನ್ನಲಾಗಿದೆ. ಸುಪ್ರೀಂಕೋರ್ಟ್ ನ ನ್ಯಾಯಪೀಠವು ಜುಲೈ 11 ರಂದು ಈ ವಿಷಯದ ಬಗ್ಗೆ ವರದಿಯನ್ನು ಕೋರಿತ್ತು ಮತ್ತು ನ್ಯಾಯಾಲಯವು ಮಧ್ಯಸ್ಥಿಕೆ ವಿಚಾರಣೆಯನ್ನು ತೀರ್ಮಾನಿಸಲು ನಿರ್ಧರಿಸಿದರೆ ಜುಲೈ 25 ರಿಂದ ದಿನನಿತ್ಯದ ವಿಚಾರಣೆಯನ್ನು ಪ್ರಾರಂಭಿಸಬಹುದು ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ವರದಿಯ ವಿಷಯಗಳನ್ನು ಗೌಪ್ಯವಾಗಿಡಲಾಗುವುದು ಎಂದು ಅದು ಭರವಸೆ ನೀಡಿತ್ತು.

ಭೂ ವಿವಾದದ ಮಧ್ಯಸ್ಥಿಕೆಗಾಗಿ ಮುಸ್ಲಿಂ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿದರೆ ಹಿಂದೂ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದವು. ಅಯೋಧ್ಯೆಯಲ್ಲಿನ 2.77 ಎಕರೆ ಭೂಮಿಯನ್ನು ರಾಮ್ ಲಲ್ಲಾ, ಸುನ್ನಿ ವಕ್ಫ್ ಮಂಡಳಿ ಮತ್ತು ನಿರ್ಮೋಹಿ ಅಖರಾ ಎಂಬ ಮೂರು ಪಕ್ಷಗಳ ನಡುವೆ ಸಮಾನವಾಗಿ ವಿಭಜಿಸಬೇಕೆಂದು 2010 ರ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ನಾಲ್ಕು ಸಿವಿಲ್ ಮೊಕದ್ದಮೆಗಳಲ್ಲಿ ಹದಿನಾಲ್ಕು ಮೇಲ್ಮನವಿ ಸಲ್ಲಿಸಲಾಗಿದೆ. ಡಿಸೆಂಬರ್ 6, 1992 ರಂದು,16 ನೇ ಶತಮಾನದಲ್ಲಿ ಶಿಯಾ ಮುಸ್ಲಿಂ ಮಿರ್ ಬಾಕಿ ಅವರು ವಿವಾದಿತ ನಿರ್ಮಿಸಿದ ಬಾಬರಿ ಮಸೀದಿಯನ್ನು ನೆಲಸಮ ಮಾಡಲಾಯಿತು.

Trending News