ಹನುಮಾನ್ ಸಂಭ್ರಮ: ವಿದ್ಯುದೀಪಗಳಿಂದ ಅಲಂಕಾರಗೊಂಡ ಅಂಜನಾದ್ರಿ

ಡಿಸೆಂಬರ್ 23 ಮತ್ತು ಡಿಸೆಂಬರ್ 24 ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಅಕ್ಷರಶಃ ಹಬ್ಬದ ಸಂಭ್ರಮ ಮನೆ ಮಾಡಿದ

ಹಿಂದೆಂದಿಗಿಂತಲೂ ಈ ಭಾರಿ ಹೆಚ್ಚಿನ ರೀತಿಯಲ್ಲಿ ಅಂಜನಾದ್ರಿಯಲ್ಲಿ ಹಬ್ಬದ ಸಂಭ್ರಮ ಕಾಣಬೇಕು.

1 /7

ಡಿಸೆಂಬರ್ 23 ಮತ್ತು ಡಿಸೆಂಬರ್ 24ರಂದು ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಸರ್ಪಗಾವಲಿಟ್ಟಿದೆ.

2 /7

2 ಎಎಸ್‌ಪಿ, 6 ಡಿಎಸ್‌ಪಿ, 26 ಸಿಪಿಐ, 62 ಪಿಎಸ್‌ಐ, 94 ಎಎಸ್‌ಐ, 967 ಹೆಡ್ ಕಾನ್‌ಸ್ಟೇಬಲ್ ಪೊಲೀಸ್ ಕಾನ್‌ಸ್ಟೇಬಲ್ ಮಹಿಳಾ ಪೊಲೀಸ್, 500 ಗೃಹರಕ್ಷಕ ದಳ, 12 ಡಿಎಆರ್, 5 ಐಆರ್‌ಬಿ ಮತ್ತು ಕೆಎಸ್‌ಆರ್‌ಪಿ ತುಕುಡಿ ಸೇರಿದಂತೆ 1657 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಗೃಹರಕ್ಷಕ ದಳದವರನ್ನು ಕಾರ್ಯಕ್ರಮಕ್ಕೆ ನಿಯೋಹಿಸಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.

3 /7

ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿವಿಧೆಡೆ ಡೈವರ್ಸನ್ ಪಾಯಿಂಟ್‌ಗಳನ್ನು ತೆರೆಯಲಾಗಿದೆ. ಐಸ್‌ಲ್ಯಾಂಡ್, ಸಿ.ಬಿ. ಸರ್ಕಲ್., ರಾಯಚೂರು ಸರ್ಕಲ್., ಜುಲೈ ನಗರ ಕ್ರಾಸ್., ಜಂಗಮರ ಕಲ್ಗುಡಿ ಕ್ರಾಸ್., ಹೊಸಳ್ಳಿ ಕ್ರಾಸ್., ಕಡೇಬಾಗಿಲು ಕ್ರಾಸ್., ಸಣಾಪೂರ ಕ್ರಾಸ್ ಮತ್ತು ಶಿವಪುರ ಕ್ರಾಸ್ ಸೇರಿದಂತೆ 9 ಕಡೆಗಳಲ್ಲಿ ಡಿವರ್ಸನ್ ಪಾಯಿಂಟ್ ತೆರೆಯಲಾಗಿದೆ.

4 /7

ಅಲಂಕಾರಕ್ಕೆ ಮೆಚ್ಚುಗೆ: ಡಿಸೆಂಬರ್ 22ರಂದು ಅಂಜನಾದ್ರಿಗೆ ಭೇಟಿ ನೀಡಿದ ವೇಳೆ ಬಗೆಬಗೆಯ ವಿದ್ಯುದೀಪಗಳಿಂದ ಅಲಂಕೃತಗೊಂಡು ಬಹುಚೆಂದವಾಗಿ ಕಂಡ ಅಂಜನಾದ್ರಿ ಬೆಟ್ಟದ ಸೊಬಗನ್ನು ಕಂಡು ಸಂಬಂಧಿಸಿದ ಅಧಿಕಾರಿಗಳ ಕಾರ್ಯವೈಖರಿಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

5 /7

ಹನುಮಮಾಲಾ ಕಾರ್ಯಕ್ರಮದ ಮುನ್ನಾ ದಿನವಾದ ಡಿಸೆಂಬರ್ 22ರಂದು ಅಂಜನಾದ್ರಿಯ ಬೆಟ್ಟವು ಬಗೆಬಗೆಯ ಬಣ್ಣದ ವಿದ್ಯೂದೀಪಗಳಿಂದ ಅಲಂಕಾರಗೊಂಡು ಜನಮನ ಸೆಳೆಯುತ್ತಿದೆ.  

6 /7

ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಅಲಂಕಾರ ಸಮಿತಿಯನ್ನು ರಚಿಸಿ ಬೆಟ್ಟದ ಅಲಂಕಾರಕ್ಕು ಸಹ ಅಷ್ಟೇ ಆದ್ಯತೆ ನೀಡಬೇಕು ಎಂದು ಸಂಬಂಧಿಸಿದ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಮೇಲಿಂದ ಮೇಲೆ ನಿರ್ದೇಶನ ನೀಡಿ ಮಾರ್ಗದರ್ಶನ ಮಾಡಿದ್ದರು.  

7 /7

ಜನರಿಗೆ ಉತ್ತಮ ಸಂದೇಶ ಹೋಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಅಧಿಕಾರಿಗಳಿಗೆ ಹಲವಾರು ಬಾರಿ ಸಭೆಯಲ್ಲಿ ಸೂಚನೆ ನೀಡಿದ್ದರು.