ಹೈದರಾಬಾದ್: ಕೇರಳ, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದ ಹಾದಿಯನ್ನು ಅನುಸರಿಸಿದ ತೆಲಂಗಾಣ ಸರ್ಕಾರವು ತಿದ್ದುಪಡಿ ಮಾಡಿದ ಪೌರತ್ವ ಕಾಯ್ದೆ (ಸಿಎಎ) ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲು ನಿರ್ಧರಿಸಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಧರ್ಮದ ಆಧಾರದ ಮೇಲೆ ಜನರನ್ನು ತಾರತಮ್ಯ ಮಾಡದಂತೆ ಮನವಿ ಮಾಡಿರುವ ಕೆಸಿಆರ್ ಸರ್ಕಾರ ಈ ಕಾನೂನನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅದರ ಪ್ರಸ್ತಾಪವನ್ನು ಅಂಗೀಕರಿಸಿದ ತಕ್ಷಣ, ಸಿಎಎ ವಿರೋಧಿ ಪ್ರಸ್ತಾವನೆಯನ್ನು ಅಂಗೀಕರಿಸುವ ರಾಜ್ಯಗಳ ವರ್ಗಕ್ಕೂ ತೆಲಂಗಾಣ ಸೇರಲಿದೆ.
ಕ್ಯಾಬಿನೆಟ್ ಸಭೆಯ ನಂತರ ಹೊರಡಿಸಿದ ಹೇಳಿಕೆಯಲ್ಲಿ, 'ನೆರೆಯ ರಾಷ್ಟ್ರಗಳ ನಾಗರಿಕರಿಗೆ ಪೌರತ್ವ ನೀಡಲು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡದಂತೆ ರಾಜ್ಯ ಸಚಿವ ಸಂಪುಟ ಕೇಂದ್ರ ಸರ್ಕಾರಕ್ಕೆ ಮನವಿ' ಮಾಡಿದೆ. ಇದರೊಂದಿಗೆ ಪೌರತ್ವ ನೀಡಬೇಕಾದರೆ ಎಲ್ಲ ಧರ್ಮದ ಜನರನ್ನು ಅದರಲ್ಲಿ ಸೇರಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕೇಂದ್ರ ಸರ್ಕಾರವು ತಂದ ಈ ಪೌರತ್ವ ಕಾನೂನು ಧರ್ಮದ ಆಧಾರದ ಮೇಲೆ ತಾರತಮ್ಯವನ್ನುಂಟುಮಾಡುತ್ತದೆ, ಇದು ಸಂವಿಧಾನದಲ್ಲಿ ರೂಪಿಸಿರುವ ಜಾತ್ಯತೀತತೆಯನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಮುಖ್ಯಮಂತ್ರಿ ರಾವ್ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿಗಳ ಸಭೆ?
'2019 ರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಕ್ಯಾಬಿನೆಟ್ ಕೋರಿದೆ. ಈ ಕಾನೂನು ಇತರ ಜನರಿಗೆ ಪೌರತ್ವ ನೀಡುವಾಗ ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ಮಾಡುತ್ತದೆ, ಇದು ಸಂವಿಧಾನದಲ್ಲಿ ರೂಪಿಸಿರುವ ಜಾತ್ಯತೀತತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿಕೆ ನೀಡಲಾಗಿದೆ.
Telangana Chief Minister's Office (CMO): State Cabinet decided to pass resolution to this effect in the State Assembly the way states of Kerala, Punjab, Rajasthan, and West Bengal did. https://t.co/AomZEa3tRH
— ANI (@ANI) February 16, 2020
ಇದರೊಂದಿಗೆ ಕೇರಳ, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಅಂಗೀಕರಿಸಿದ ನಿರ್ಣಯದ ಪ್ರಕಾರ ರಾಜ್ಯ ವಿಧಾನಸಭೆಯಲ್ಲಿ ಸಿಎಎ ವಿರೋಧಿ ನಿರ್ಣಯವನ್ನು ಅಂಗೀಕರಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಈ ಹಿಂದೆ ಮುಖ್ಯಮಂತ್ರಿ ರಾವ್ ಅವರು ಸಿಎಎಯನ್ನು ವಿರೋಧಿಸಿದ್ದರು ಮತ್ತು ಅದರ ವಿರುದ್ಧ ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬಹುದು ಎಂದು ಹೇಳಿದರು.
ತೆಲಂಗಾಣ ಐದನೇ ರಾಜ್ಯವಾಗಲಿದೆ!
ತಿದ್ದುಪಡಿ ಮಾಡಿದ ಪೌರತ್ವ ಕಾನೂನು ಜಾರಿಗೆ ಬಂದಾಗಿನಿಂದ, ನಾಲ್ಕು ರಾಜ್ಯಗಳು ಜನವರಿಯಿಂದ ಸಿಎಎ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದೆ. ಇವುಗಳಲ್ಲಿ ಕೇರಳ, ಪಂಜಾಬ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಸೇರಿವೆ. ಸಿಎಎ ರದ್ದುಗೊಳಿಸುವಂತೆ ಒತ್ತಾಯಿಸಿದ ಮೊದಲ ರಾಜ್ಯ ಕೇರಳ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರದ್ದುಗೊಳಿಸುವಂತೆ ಕೋರಿ ಕೇರಳ ವಿಧಾನಸಭೆ ಡಿಸೆಂಬರ್ ಅಂತ್ಯದಲ್ಲಿ ನಿರ್ಣಯವನ್ನು ಅಂಗೀಕರಿಸಿತು. ಕೇರಳದ ನಂತರ, ಇತರ ಮೂರು ರಾಜ್ಯಗಳು ಸಿಎಎ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದವು.