Srirastu Shubamastu: ಹಿರಿಯ ನಟಿ ಸುಧಾರಾಣಿ ಗರ್ಭಿಣಿ? ಸುದ್ದಿ ಕೇಳಿ ಶಾಕ್ ಆದ ಫ್ಯಾನ್ಸ್!

Srirastu Shubamastu: ಸಿನಿಮಾದಿಂದ ಹಲವು ವರ್ಷಗಳಿಂದ ದೂರ ಉಳಿದಿದ್ದ ಸುಧಾರಾಣಿ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವಿಚಾರ ಗೊತ್ತೇ ಇದೆ. ಶ್ರೀರಸ್ತು ಶುಭಮಸ್ತು ಧಾರವಾಹಿಯ ಮೂಲಕ ನಟಿ ಎಲ್ಲರನ್ನೂ ರಂಜಿಸುತ್ತ ಕರುನಾಡ ಮನೆ ಮಂದಿಯ ಹೃದಯ ಗೆದ್ದಿದ್ದಾರೆ. ಇನ್ನೂ ಧಾರವಾಹಿಯ ಬಗ್ಗೆ ಕೇಳುವುದೇ ಬೇಡ, ಜನರನ್ನು ರಂಜಿಸುವುದು ಅಷ್ಟೇ ಅಲ್ಲ ಒಂದ್ ಒಳ್ಳೆ ಸಂದೇಶವನ್ನು ಸಹ ಜನರಿಗೆ ತಲುಪಿಸುತ್ತಿದೆ.

1 /7

ಸಿನಿಮಾದಿಂದ ಹಲವು ವರ್ಷಗಳಿಂದ ದೂರ ಉಳಿದಿದ್ದ ಸುಧಾರಾಣಿ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವಿಚಾರ ಗೊತ್ತೇ ಇದೆ. ಶ್ರೀರಸ್ತು ಶುಭಮಸ್ತು ಧಾರವಾಹಿಯ ಮೂಲಕ ನಟಿ ಎಲ್ಲರನ್ನೂ ರಂಜಿಸುತ್ತ ಕರುನಾಡ ಮನೆ ಮಂದಿಯ ಹೃದಯ ಗೆದ್ದಿದ್ದಾರೆ. ಇನ್ನೂ ಧಾರವಾಹಿಯ ಬಗ್ಗೆ ಕೇಳುವುದೇ ಬೇಡ, ಜನರನ್ನು ರಂಜಿಸುವುದು ಅಷ್ಟೇ ಅಲ್ಲ ಒಂದ್ ಒಳ್ಳೆ ಸಂದೇಶವನ್ನು ಸಹ ಜನರಿಗೆ ತಲುಪಿಸುತ್ತಿದೆ.

2 /7

ಶುರುವಿನಿಂದ ಇಂದಿನ ವರೆಗೂ ಒಂದಲ್ಲ ಒಂದು ಸಂದೇಶ ನೀಡುತ್ತಾ ಬಂದಿರುವ ಧಾರವಾಹಿ ಇದೀಗ ಸಡನ್ ಆಗಿ ಪ್ರೇಕ್ಷಕರಿಗೆ ಶಾಕ್ ಕೊಟ್ಟಿದೆ.

3 /7

ಹೌದು, ನಟಿ ಸುಧಾರಾಣಿ ಅವರದ್ದು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ, ಅತೀ ಚಿಕ್ಕ ವಯಸ್ಸಿನಲ್ಲಿ ಪತಿನ್ಯನ್ನು ಕಳೆದುಕೊಂಡ ಆಕೆ ಇಬ್ಬರು ಮಕ್ಕಳನ್ನು ಚೆನ್ನಾಗಿ ಬೆಳೆಸಿ ಮದುವೆ ಮಾಡುತ್ತಾಳೆ. ಇನ್ನೂ ಅಮ್ಮನ ಜೊತೆ ಮಗನ ಸಂಬಂಧ ಹೇಳಿಕೊಳ್ಳುವಂತೆ ಇಲ್ಲದೆ ಇದ್ದರೂ, ಸೊಸೆ ಹಾಗು ಮಾವ ಮಾತ್ರ ತುಳಸಿ ಅವರಿಗೆ ಸಖತ್ ಸಾಥ್ ಕೊಡುತ್ತಾರೆ. 

4 /7

ಇನ್ನೊಂದೆಡೆ, ಮಾಧವ ಅವರ ಜೀವನದಲ್ಲಿಯೂ ಅದೇ ಕಥೆ, ಹೆಂಡತಿಯನ್ನು ಕಳೆದುಕೊಂಡ ನಂತರ ಮಾಧವ ಒಂಟಿಯಾಗಿ ಫೀಲ್ ಮಾಡುತ್ತಿರುತ್ತಾರೆ, ಅವರಿಗೆ ಆಗುವ ಭಾವನೆಗಳನ್ನು ಎಲ್ಲರ ಬಳಿ ಹೇಳಿಕೊಳ್ಳಬೇಕು ಎನ್ನುವುದು ಅವರ ಆಸೆ ಆದರೆ ಅವರ ಭಾವನೆಗಳಿಗೆ ಅವರ ಮಕ್ಕಳು ಕಿವಿಕೊಡುವುದಿಲ್ಲ. ಈ ಸಮಯದಲ್ಲಿ ಅವರು ತುಳಸಿ ಅವರನ್ನು ಬೇಟಿಯಾಗೂತ್ತಾರೆ. ಇಬ್ಬರ ನಡುವೆ ಸ್ನೇಹ ಬೆಳೆಯುತ್ತೆ, ಸ್ನೇಹ ಪ್ರೀತಿಗೆ ತಿರುಗುತ್ತೆ, ಮಕ್ಕಳ ವಿರೋಧದ ನಡುವೆ ಇಬ್ಬರ ಸೊಸೆಯಂದಿರು ಮುಂದೆ ನಿಂತು ತುಳಸಿ ಹಾಗು ಮಧವಾಗೆ ಮದುವೆ ಮಾಡಿಸುತ್ತಾರೆ.

5 /7

ಹೀಗೆ ಸಖತ್ ಮೆಸೇಗ್ ಜೊತೆ ಸಾಗುತಿದೆ ಕಹನಿಗೆ ಇದೀಗ ಸಡನ್ ಟ್ವಿಸ್ಟ್ ಕೊಟ್ಟಿದೆ ಧಾರವಾಹಿ ತಂಡ. ದ್ವೇಷದಿಂದ ತುಳಸಿಯನ್ನು ನೋಡುತ್ತಿದ್ದ ಮಕ್ಕಳು ಈಗಷ್ಟೇ ಅವರನ್ನು ಪ್ರೀತಿಯೊಂದಿಗೆ ನೋಡುತ್ತಿದ್ದಾರೆ, ನಿಧಾನವಾಗಿ ಅಮ್ಮನ ಪ್ರೀತಿಯ ಕಡೆಗೆ ವಾಲುತ್ತಿದ್ದಾರೆ, ಅಷ್ಟರಲ್ಲೇ ತುಳಸಿ ಅವರಿಗೆ ತಾನು ಗರ್ಭಿಣಿ ಎನ್ನುವುದು ಗೊತ್ತಾಗಿದೆ. ಈ ವಿಷಯವನ್ನು ಯಾರ ಬಳಿ ಹೇಳಿಕೊಳ್ಳಲಾಗದೆ ನಟಿ ಮುಜುಗರಕ್ಕಿಡಾಗಿದ್ದಾರೆ.

6 /7

ಈ ನಡುವೆ ಅಷ್ಟೇ ಪ್ರೀತಿಯೊಂದಿಗೆ ತನ್ನೊಂದಿಗೆ ಮಾತನಾಡುತ್ತಿದ್ದ ಮಕ್ಕಳು ತುಳಸಿ ಗರ್ಭಿಣಿ ಅಂಥ ಗೊತ್ತಾದ್ರೆ ಅವರೊಂದಿಗೆ ಮಾತನಡುತ್ತಾರಾ? ಇಲ್ಲವೇ ಮನೆಯಿಂದ ಹೊರ ಹಾಕ್ತರ ಎನ್ನುವ ಪ್ರಶ್ನೆ ಒಂದೆಡೆ ಹುಟ್ಟಿಕೊಂಡಿದೆ.

7 /7

ಇನ್ನೊಂದೆಡೆ , ಧಾರವಾಹಿ ಚೆನ್ನಾಗಿಯೇ ಒಗ್ತಿತು, ಈ ರೀತಿ ಪ್ರೆಗ್ನೆಂಟ್ ಎನ್ನುವ ಕಾನ್ಸೆಪ್ಟ್ ತಂದು ಸಂಬದಕ್ಕೆ ಧಕ್ಕೆ ತರಬೇಡಿ ಸ್ಟೋರಿ ಚೇಂಜ್ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದರೆ, ಇನ್ನು ಕೆಲವರು ಇದು ಕೂಡ ಮೆಸೇಜ್ ಚೆನ್ನಾಗಿದೆ, ಲೇಟ್ ಪ್ರೆಗ್ನೆಂಸಿ ಬಗ್ಗೆ ಅರಿವು ಬಹಳ ಮುಖ್ಯ ಎಂದು ಹೇಳುತ್ತಿದ್ದಾರೆ. ಇನ್ನೂ ಧಾರಾವಾಹಿಯಲ್ಲಿ ಏನೆಲ್ಲಾ ಬೆಳವಣಿಗೆಯಗಳಿದೆ ಎಂಬುದನ್ನು ಇನ್ನು ಮುಂದಷ್ಟೇ ಕಾದು ನೋಡಬೇಕಿದೆ, ಆದ್ರೆ ಏನೇ ಆಗಲಿ ಧಾರವಾಹಿ ದಿನೇ ದಿನೇ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಿಸುತ್ತಿರುವುದಂತು ನಿಜ.