Diabetes Remedy: ಯಾವುದೇ ಔಷಧಿ ಬೇಡ..ಬೆಳಗ್ಗೆ ಎದ್ದ ಒಡನೆ ಈ ಜ್ಯೂಸ್‌ ಕುಡಿಯಿರಿ ಸಾಕು, ಶುಗರ್‌ ಎಷ್ಟೆ ಜಾಸ್ತಿ ಇದ್ದರು ತಕ್ಷಣ ನಾರ್ಮಲ್‌ ಆಗುತ್ತೆ!

Diabetes Remedy: ಮಧುಮೇಹವು ವೇಗವಾಗಿ ಬೆಳೆಯುತ್ತಿರುವ ದೀರ್ಘಕಾಲದ ಕಾಯಿಲೆಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜಿನ ಪ್ರಕಾರ, ವಿಶ್ವದ ಸುಮಾರು 422 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. 

1 /11

ಮಧುಮೇಹವು ವೇಗವಾಗಿ ಬೆಳೆಯುತ್ತಿರುವ ದೀರ್ಘಕಾಲದ ಕಾಯಿಲೆಗಳಲ್ಲಿ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜಿನ ಪ್ರಕಾರ, ವಿಶ್ವದ ಸುಮಾರು 422 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ.   

2 /11

ಸಕ್ಕರೆ ಕಾಯಿಲೆಯಿಂದ ಪ್ರತಿ ವರ್ಷ 1.5 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಧುಮೇಹ ಭಾರತ ಎದುರಿಸುತ್ತಿರುವ ಸವಾಲುಗಳಲ್ಲಿ ಒಂದಾಗಿದೆ.

3 /11

ನಮ್ಮ ದೇಶದಲ್ಲಿ, 20-70 ವರ್ಷ ವಯಸ್ಸಿನ ಜನಸಂಖ್ಯೆಯ 8.7% ಮಧುಮೇಹದಿಂದ ಬಳಲುತ್ತಿದ್ದಾರೆ. ಜೀವನಶೈಲಿ ಬದಲಾವಣೆ, ಕೆಟ್ಟ ಆಹಾರ ಪದ್ಧತಿ, ಒತ್ತಡ, ನಿದ್ರೆಯ ಕೊರತೆ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಮಧುಮೇಹ ಹೆಚ್ಚಾಗುತ್ತದೆ.

4 /11

ಕೆಲವು ಸಂದರ್ಭಗಳಲ್ಲಿ, ಮಧುಮೇಹದ ಲಕ್ಷಣಗಳು ತೀವ್ರ ಮಟ್ಟವನ್ನು ತಲುಪಿದ ನಂತರವೇ ಕಾಣಿಸಿಕೊಳ್ಳುತ್ತವೆ. ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಪದೇ ಪದೇ ಮೂತ್ರ ವಿಸರ್ಜನೆ, ವಿಪರೀತ ಬಾಯಾರಿಕೆ, ಹಸಿವು, ದೃಷ್ಟಿ ಮಂದವಾಗುವುದು, ಆಯಾಸ, ಸಿಡುಕುತನದಂತಹ  ದೀರ್ಘಕಾಲ ಲಕ್ಷಣಗಳು ಕಂಡುಬರುತ್ತವೆ.

5 /11

ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಳಿತದ ಕಾರಣ, ಮಧುಮೇಹ ರೋಗಿಗಳು ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಎದುರಿಸುತ್ತಾರೆ. ಮಧುಮೇಹವನ್ನು ನಿಯಂತ್ರಿಸದಿದ್ದರೆ, ಮೂತ್ರಪಿಂಡ, ಹೃದಯ, ಶ್ವಾಸಕೋಶ ಮತ್ತು ಕಣ್ಣಿನ ಸಮಸ್ಯೆಗಳು ಎದುರಾಗುತ್ತದೆ. 

6 /11

ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇನ್ಸುಲಿನ್ ಔಷಧಿಗಳನ್ನು ಪ್ರತಿದಿನ ಬಳಸಬೇಕು. ಕೆಲವು ಗಿಡಮೂಲಿಕೆಗಳು ನೈಸರ್ಗಿಕ ಇನ್ಸುಲಿನ್ ಆಗಿ ಕಾರ್ಯನಿರ್ವಹಿಸುತ್ತವೆ ಮತ್ತು ನಿಮ್ಮ ಆರೋಗ್ಯವನ್ನು ರಕ್ಷಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

7 /11

ಅಮೃತಬಳ್ಳಿ ಎಲೆ ಮಧುಮೇಹ ರೋಗಿಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ ಎನ್ನುತ್ತಾರೆ ತಜ್ಞರು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಆಂಟಿ-ಹೈಪರ್ಗ್ಲೈಸೆಮಿಕ್ ಗುಣಲಕ್ಷಣಗಳನ್ನು ಈ ಎಲೆಗಳು ಹೊಂದಿದ್ದು. ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಇವು ಸಹಾಯ ಮಾಡುತ್ತದೆ. ಪ್ರತಿದಿನ ಈ ಎಲೆಯ ರಸವನ್ನು ಕಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಶುಗರ್‌ ಕಂಟ್ರೋಲ್‌ನಲ್ಲಿರುತ್ತದೆ.

8 /11

ನುಗ್ಗೇಸೊಪ್ಪು ಕೂಡ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಈ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ನುಗ್ಗೆ ಎಲೆಗಳನ್ನು ಒಣಗಿಸಿ ಅದನ್ನು ಮಿಕ್ಸರ್‌ ಜಾರಿಗೆ ಹಾಕಿ ಪುಡಿ ಮಾಡಿ ಇಡಿ ಚಹಾಕ್ಕೆ ಈ ಪುಡಿಯನ್ನು ಬೆರಸಿ ಕುಡಿಯುವದರಿಂದ ನಿಮ್ಮ ಶುಗರ್‌ ಲೆವೆಲ್‌ ಕಂಟ್ರೋಲ್‌ನಲ್ಲಿರುತ್ತದೆ.

9 /11

ಬೇವಿನ ಎಲೆಗಳು ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಬೇವಿನ ಎಲೆಯು ಹೈಪೊಗ್ಲಿಸಿಮಿಕ್ ಆಗಿ ಕಾರ್ಯನಿರ್ವಹಿಸುತ್ತದೆ, ಈ ಕಾರಣದಿಂದಾಗಿ, ಬೇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೇವಿನ ಎಲೆ ಮಧುಮೇಹ ರೋಗಿಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಬೇವಿನ ಎಲೆಯ ರಸವನ್ನು ಕುಡಿಯುವುದರಿಂದ ಅಥವಾ ಬೇವಿನ ಎಲೆಯನ್ನು ಜಗಿಯುವುದರಿಂದ ಬ್ಲಡ್‌ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡಬಹುದು.

10 /11

ಅಲೋವೆರಾ ಮಧುಮೇಹ ರೋಗಿಗಳ ಆರೋಗ್ಯಕ್ಕೆ ಒಳ್ಳೆಯದು. ಅಲೋದಲ್ಲಿ ಅಸೆಮನ್ನನ್ ಎಂಬ ಅಂಶವಿದೆ. ಇದು ಹೈಪೊಗ್ಲಿಸಿಮಿಕ್ ಗ್ಲೂಕೋಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಮಧುಮೇಹಿಗಳು ಅಲೋವೆರಾ ಜ್ಯೂಸ್ ಕುಡಿಯುವುದು ಒಳ್ಳೆಯದು.

11 /11

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.