ಪ್ರತಿದಿನ ಮುಂಜಾನೆ ಈ ಎಲೆಯನ್ನ ಚೆನ್ನಾಗಿ ಅಗಿಯಿರಿ; ಈ ಜನ್ಮದಲ್ಲಿ ನಿಮಗೆ ಮಧುಮೇಹ ಬರೋದಿಲ್ಲ!

Health Benefits of Curry Leaf: ನೀವೂ ಮಧುಮೇಹದಂತಹ ಸೈಲೆಂಟ್ ಕಿಲ್ಲರ್ ಕಾಯಿಲೆಗೆ ಬಲಿಯಾಗಿದ್ದರೆ, ಈ ಎಲೆಯನ್ನು ನಿಮ್ಮ ದೈನಂದಿನ ಆಹಾರದ ಭಾಗವಾಗಿಸಬೇಕು. ಪ್ರತಿದಿನ ಬೆಳಗ್ಗೆ ಈ ಎಲೆಯನ್ನು ಸೇವಿಸಬೇಕು. ಆಯುರ್ವೇದದ ಪ್ರಕಾರ ಈ ಎಲೆಯು ನಿಮ್ಮ ಆರೋಗ್ಯಕ್ಕೆ ವರದಾನವಾಗಿದೆ.

Written by - Puttaraj K Alur | Last Updated : Oct 10, 2024, 11:28 PM IST
  • ಬೆಳಗ್ಗೆ ಕೇವಲ 10 ಕರಿಬೇವಿನ ಎಲೆ ಅಗಿದರೆ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು
  • ಕರಿಬೇವಿನ ಎಲೆಗಳಲ್ಲಿರುವ ಪೋಷಕಾಂಶಗಳು ನಿಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ
  • ಒಂದು ಚಮಚ ಕರಿಬೇವಿನ ಎಲೆಯ ರಸ ಕುಡಿದ್ರೆ ಅಜೀರ್ಣ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು
ಪ್ರತಿದಿನ ಮುಂಜಾನೆ ಈ ಎಲೆಯನ್ನ ಚೆನ್ನಾಗಿ ಅಗಿಯಿರಿ; ಈ ಜನ್ಮದಲ್ಲಿ ನಿಮಗೆ ಮಧುಮೇಹ ಬರೋದಿಲ್ಲ!  title=
ಕರಿಬೇವಿನ ಪ್ರಯೋಜನಗಳು

Health Benefits of Curry Leaf: ರುಚಿಯಲ್ಲಿ ಕಹಿ ಇದ್ದರೂ ಸಿಹಿ ಬೇವು ಎಂದೂ ಕರೆಯಲ್ಪಡುವ ಈ ಎಲೆಯ ಬಗ್ಗೆ ನಿಮಗೆ ತಿಳಿದಿದೆಯೇ? ಈ ಎಲೆಯಲ್ಲಿ ಕಂಡುಬರುವ ಎಲ್ಲಾ ಪೋಷಕಾಂಶಗಳು ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ಇದುವೇ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ದೊರೆಯುವ ಕರಿಬೇವಿನ ಎಲೆ. ಕರಿಬೇವಿನ ಎಲೆಗಳನ್ನು ಆಹಾರದ ರುಚಿ ಹೆಚ್ಚಿಸಲು ಮಾತ್ರ ಬಳಸುತ್ತಾರೆಂದು ನೀವು ಭಾವಿಸಿದರೆ, ಅದು ನಿಮ್ಮ ತಪ್ಪು ತಿಳುವಳಿಕೆ. ಕರಿಬೇವಿನ ಎಲೆಗಳನ್ನು ಜಗಿಯುವುದರಿಂದ ಆಗುವ ಕೆಲವು ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ..

ಮಧುಮೇಹ ನಿರ್ವಹಣೆಗೆ ಸಹಕಾರಿ

ಬೆಳಗ್ಗೆ ಕೇವಲ 10 ಕರಿಬೇವಿನ ಎಲೆಗಳನ್ನು ಅಗಿಯಲು ಪ್ರಾರಂಭಿಸಿ. ಪ್ರತಿದಿನವೂ ಈ ನಿಯಮವನ್ನು ಅನುಸರಿಸಿದ್ರೆ ನೀವು ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು. ಇದಲ್ಲದೆ ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಅಂಶಗಳು ನಿಮ್ಮ ಕರುಳಿನ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ಅತಿಸಾರ ಮತ್ತು ವಾಂತಿ ತಡೆಯಲು ಕರಿಬೇವಿನ ಎಲೆಗಳನ್ನು ಬಳಸುವುದು ಸೂಕ್ತ.

ಇದನ್ನೂ ಓದಿ: ಮಧುಮೇಹಕ್ಕೆ ಮನೆ ಮದ್ದು: ಈ ಆರು ವಸ್ತುಗಳಿಂದ ಸಿಗಲಿದೆ ನಿಮ್ಮ ಕಾಯಿಲೆಗೆ ಮುಕ್ತಿ

ಬಾಯಿಯ ಆರೋಗ್ಯಕ್ಕೆ ಪ್ರಯೋಜನಕಾರಿ

ನೀವು ಬಾಯಿಯ ದುರ್ವಾಸನೆಯ ಸಮಸ್ಯೆಯನ್ನು ಹೋಗಲಾಡಿಸಲು ಬಯಸಿದರೆ, 2-4 ಕರಿಬೇವಿನ ಎಲೆಗಳನ್ನು ಅಗಿಯಲು ಪ್ರಾರಂಭಿಸಿ. ಅಷ್ಟೇ ಅಲ್ಲ ಕರಿಬೇವಿನ ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸುವುದರಿಂದ ನಿಮ್ಮ ಬಾಯಿಯ ಆರೋಗ್ಯವೂ ಸಾಕಷ್ಟು ಸುಧಾರಿಸುತ್ತದೆ. ಪ್ರತಿದಿನ ಬೆಳಗ್ಗೆ ಕೇವಲ ಒಂದು ಚಮಚ ಕರಿಬೇವಿನ ಎಲೆಯ ರಸವನ್ನು ಕುಡಿಯುವುದರಿಂದ ಅಜೀರ್ಣ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಪೋಷಕಾಂಶಗಳು

ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳು, ವಿಟಮಿನ್ C, ವಿಟಮಿನ್ A, ವಿಟಮಿನ್ B, ಕ್ಯಾಲ್ಸಿಯಂ, ಕಬ್ಬಿಣ ಮತ್ತು ರಂಜಕದಂತಹ ಉತ್ತಮ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದು ನಿಮ್ಮ ಆರೋಗ್ಯವನ್ನು ಬಲವಾಗಿಡುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಆದಾಗ್ಯೂ, ಉತ್ತಮ ಫಲಿತಾಂಶಗಳನ್ನು ಪಡೆಯಲು ಕರಿಬೇವಿನ ಎಲೆಗಳನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ.

ಇದನ್ನೂ ಓದಿ: ಈ ʼಕಾಯಿʼ ಮಧುಮೇಹಕ್ಕೆ ರಾಮಬಾಣ: ಊಟಕ್ಕೆ ಮುನ್ನ ಒಂದು ಪೀಸ್‌ ತಿಂದರೆ 45 ದಿನಗಳ ಕಾಲ ನಾರ್ಮಲ್‌ ಆಗಿರುತ್ತೆ ಬ್ಲಡ್‌ ಶುಗರ್!‌ ತೂಕ ಇಳಿಕೆಗೂ ಇದು ಸಹಾಯಕ

(ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News