"ಭಾರತೀಯ ಸೇನೆಯನ್ನು ಟೆರರಿಸ್ಟ್‌ ಗುಂಪಿನಂತೆ...." ಸಂದರ್ಶನದಲ್ಲಿ ನಟಿ ಸಾಯಿ ಪಲ್ಲವಿ ಶಾಕಿಂಗ್‌ ಹೇಳಿಕೆ

Sai Pallavi Statement About Pakistan: ಜನವರಿ 2022 ರಲ್ಲಿ ಚಿತ್ರೀಕರಿಸಲಾದ ಕ್ಲಿಪ್‌ನಲ್ಲಿ, ಹಿಂಸಾಚಾರದ ದೃಷ್ಟಿಕೋನಗಳು ಒಬ್ಬರ ರಾಷ್ಟ್ರೀಯ ಗುರುತನ್ನು ಆಧರಿಸಿ ಗಮನಾರ್ಹವಾಗಿ ಭಿನ್ನವಾಗಿರುತ್ತವೆ ಎಂದು ಪಲ್ಲವಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Written by - Bhavishya Shetty | Last Updated : Oct 27, 2024, 02:56 PM IST
    • ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ 'ರಾಮಾಯಣ'ದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳಲಿರುವ ನಟಿ ಸಾಯಿ ಪಲ್ಲವಿ
    • ಹಳೆಯ ಸಂದರ್ಶನದ ತುಣುಕು ಈಗ ಭಾರೀ ಸದ್ದು ಮಾಡುತ್ತಿದೆ.
    • ಪಾಕಿಸ್ತಾನದ ಜನರು ಭಾರತೀಯ ಸೇನೆಯನ್ನು ಯಾವ ರೀತಿ ನೋಡುತ್ತಾರೆ ಎಂಬುದರ ಬಗ್ಗೆ ಚರ್ಚೆ
"ಭಾರತೀಯ ಸೇನೆಯನ್ನು ಟೆರರಿಸ್ಟ್‌ ಗುಂಪಿನಂತೆ...." ಸಂದರ್ಶನದಲ್ಲಿ ನಟಿ ಸಾಯಿ ಪಲ್ಲವಿ ಶಾಕಿಂಗ್‌ ಹೇಳಿಕೆ title=
File Photo

Sai Pallavi Statement About Pakistan: ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ 'ರಾಮಾಯಣ'ದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳಲಿರುವ ನಟಿ ಸಾಯಿ ಪಲ್ಲವಿ, ಹಳೆಯ ಸಂದರ್ಶನದ ತುಣುಕು ಈಗ ಭಾರೀ ಸದ್ದು ಮಾಡುತ್ತಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಸಾಯಿ ಪಲ್ಲವಿ ಅವರು, ಪಾಕಿಸ್ತಾನದ ಜನರು ಭಾರತೀಯ ಸೇನೆಯನ್ನು ಯಾವ ರೀತಿ ನೋಡುತ್ತಾರೆ ಎಂಬುದರ ಬಗ್ಗೆ ಚರ್ಚಿಸಿದ್ದಾರೆ. ಅಲ್ಲಿನ ಅನೇಕ ಜನರು ಭಾರತೀಯ ಸೇನೆಯನ್ನು "ಭಯೋತ್ಪಾದಕ ಗುಂಪು" ಎಂದು ನೋಡುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾಕಿಂಗ್‌ ಎಲಿಮಿನೇಷನ್.. ಬಿಗ್‌ ಬಾಸ್‌ ನಲ್ಲಿ ಫಿನಾಲೆಗೆ ಬರ್ತಾರೆ ಎಂದುಕೊಂಡ ಈ ಸ್ಪರ್ಧಿಯೇ ಔಟ್!‌

ವಿಡಿಯೋದಲ್ಲಿ ಸಾಯಿ ಪಲ್ಲವಿ ಹೇಳಿದ್ದೇನು?
ಜನವರಿ 2022 ರಲ್ಲಿ ಚಿತ್ರೀಕರಿಸಲಾದ ಕ್ಲಿಪ್‌ನಲ್ಲಿ, ಹಿಂಸಾಚಾರದ ದೃಷ್ಟಿಕೋನಗಳು ಒಬ್ಬರ ರಾಷ್ಟ್ರೀಯ ಗುರುತನ್ನು ಆಧರಿಸಿ ಗಮನಾರ್ಹವಾಗಿ ಭಿನ್ನವಾಗಿರುತ್ತವೆ ಎಂದು ಪಲ್ಲವಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಪಾಕಿಸ್ತಾನದ ಜನರು ನಮ್ಮ ಸೇನೆಯನ್ನು ಭಯೋತ್ಪಾದಕ ಗುಂಪು ಎಂದು ಪರಿಗಣಿಸುತ್ತಾರೆ. ಆದರೆ ನಮಗೆ, ಅವರೇ ಭಯೋತ್ಪಾದಕರು. ಇಲ್ಲಿ ದೃಷ್ಟಿಕೋನವು ಬದಲಾಗುತ್ತದೆ" ಎಂದಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಅನೇಕರು ಆಕೆಯ ಪದಗಳ ಆಯ್ಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಒಬ್ಬ ಬಳಕೆದಾರರು ವ್ಯಂಗ್ಯವಾಡಿದ್ದು, “ಇತಿಹಾಸಗಾರ್ತಿ ಸಾಯಿ ಪಲ್ಲವಿ ಹಿಂತಿರುಗಿದ್ದಾರೆ. ಕಾಶ್ಮೀರಿ ಹಿಂದೂ ನರಮೇಧವನ್ನು ದನದ ಕಳ್ಳಸಾಗಣೆಗೆ ಹೋಲಿಸುವುದು- ಉತ್ತಮ ಒಳನೋಟ, ಅಲ್ಲವೇ? ಈಗ ಅವಳು ಮಾತೆ ಸೀತೆಯಾಗಿ ನಟಿಸುವಳೇ?" ಎಂದು ವ್ಯಂಗ್ಯವಾಡಿದ್ದಾರೆ.

ಮತ್ತೊಬ್ಬ ಬಳಕೆದಾರ, "ಇಂಡಿಯನ್ ಆರ್ಮಿ ಮತ್ತು ಪಾಕಿಸ್ತಾನ್ ಆರ್ಮಿ- ಎರಡೂ ಒಂದೇ...!? ಸಾಯಿ ಪಲ್ಲವಿ ಮುಂಬರುವ ಬಾಲಿವುಡ್ ಚಲನಚಿತ್ರದಲ್ಲಿ ಮಾತೆ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರು ಒಮ್ಮೆ ಕಾಶ್ಮೀರಿ ಹಿಂದೂಗಳ ನರಮೇಧವನ್ನು ದನ ಕಳ್ಳಸಾಗಣೆದಾರರ ಹತ್ಯೆಗೆ ಹೋಲಿಸಿದ್ದಾರೆ. ಆಕೆಯ ಯಾವುದೇ ಚಲನಚಿತ್ರವನ್ನು ನೋಡಬೇಡಿ" ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಏನೇ ಕಷ್ಟಬಂದರೂ ಮನೆಯಲ್ಲಿ ಈ 4 ವಸ್ತುಗಳು ಖಾಲಿಯಾಗಲು ಬಿಡಬೇಡಿ: ಅಪ್ಪಿತಪ್ಪಿ ಆದರಂತೂ ದುರಾದೃಷ್ಟ ಬೆನ್ನಿಗೆ ಬೀಳುವುದು; ಬಡತನ ಹೆಚ್ಚಾಗುತ್ತೆ!

ಮುಂಬರುವ 'ರಾಮಾಯಣ'ದಲ್ಲಿ, ಸಾಯಿಪಲ್ಲವಿ ರಣಬೀರ್ ಕಪೂರ್ ಅವರೊಂದಿಗೆ ಪರದೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿಯೇ ರಾಕಿಂಗ್‌ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ ಮತ್ತು ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News