ಈ ಆಟಗಾರನಿಗೆ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಸಿಗದಿರುವುದಕ್ಕೆ ಶುರುವಾಗಿದೆ ಗಲಾಟೆ

ಟಿ20 ವಿಶ್ವಕಪ್‌ಗಾಗಿ ಭಾರತದ 15 ಆಟಗಾರರಿಗೆ ತಂಡದಲ್ಲಿ ಆಟಗಾರನಿಗೆ ಅವಕಾಶ ಸಿಗದಿರುವ ಬಗ್ಗೆ ಪ್ರಶ್ನೆಗಳ ಸುರಿ ಮಳೆ ಎದ್ದಿದೆ.

Written by - Channabasava A Kashinakunti | Last Updated : Sep 13, 2022, 11:30 AM IST
  • 2022 ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾವನ್ನು ನಿನ್ನೆ ಪ್ರಕಟಿಸಿದೆ
  • ಈ ಆಟಗಾರನಿಗೆ ಅವಕಾಶ ಸಿಗದಿರುವ ಬಗ್ಗೆ ಗಲಾಟೆ
  • ಆಕ್ರೋಶ ವ್ಯಕ್ತಪಡಿಸಿದ ಕೆ.ಶ್ರೀಕಾಂತ್
ಈ ಆಟಗಾರನಿಗೆ ಟಿ20 ವಿಶ್ವಕಪ್‌ನಲ್ಲಿ ಅವಕಾಶ ಸಿಗದಿರುವುದಕ್ಕೆ ಶುರುವಾಗಿದೆ ಗಲಾಟೆ title=

T20 World Cup : 2022 ರ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾವನ್ನು ನಿನ್ನೆ ಪ್ರಕಟಿಸಿದೆ, ಇದರಲ್ಲಿ ಆಯ್ಕೆದಾರರು ತಮ್ಮ ಕೆಲವು ನಿರ್ಧಾರಗಳಿಂದ ಗಲಾಟೆ ಸೃಷ್ಟಿಸಿಯಾಗಿವೆ. ಅಕ್ಟೋಬರ್ 16 ರಿಂದ ಟಿ20 ವಿಶ್ವಕಪ್ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿದೆ. ಟಿ20 ವಿಶ್ವಕಪ್‌ಗಾಗಿ ಭಾರತದ 15 ಆಟಗಾರರಿಗೆ ತಂಡದಲ್ಲಿ ಆಟಗಾರನಿಗೆ ಅವಕಾಶ ಸಿಗದಿರುವ ಬಗ್ಗೆ ಪ್ರಶ್ನೆಗಳ ಸುರಿ ಮಳೆ ಎದ್ದಿದೆ.

ಈ ಆಟಗಾರನಿಗೆ ಅವಕಾಶ ಸಿಗದಿರುವ ಬಗ್ಗೆ ಗಲಾಟೆ

ಈ ಬಗ್ಗೆ ಮಾತನಾಡಿದ ಟೀಂ ಇಂಡಿಯಾದ ಮಾಜಿ ಮುಖ್ಯ ಆಯ್ಕೆಗಾರ ಕೆ.ಶ್ರೀಕಾಂತ್, ಟಿ20 ವಿಶ್ವಕಪ್‌ಗಾಗಿನ ಭಾರತದ 15 ಆಟಗಾರರ ತಂಡದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಅವಕಾಶ ಸಿಗದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್‌ಗೆ ಮೊಹಮ್ಮದ್ ಶಮಿ ಬದಲಿಗೆ ವೇಗದ ಬೌಲರ್ ಹರ್ಷಲ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ, ಇದರಿಂದಾಗಿ ಕೆ. ಶ್ರೀಕಾಂತ್ ಗೆ ಕೋಪಗೊಂಡಿದ್ದಾರೆ.

ಇದನ್ನೂ ಓದಿ : ಟೀಂ ಇಂಡಿಯಾದಿಂದ ಜಡೇಜಾ ಔಟ್ : ಈ ಆಟಗಾರನಿಗೆ ಸಿಕ್ತು ಚಾನ್ಸ್!

'ನಾನು ಮುಖ್ಯ ಆಯ್ಕೆಗಾರನಾಗಿದ್ದರೆ...'

ಇನ್ನೂ ಮುಂದುವರೆದು ಮಾತನಾಡಿದ ಕೆ.ಶ್ರೀಕಾಂತ್. "ನಾನು ಪ್ರಸ್ತುತ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರೆ, ಶಮಿ ಖಂಡಿತವಾಗಿಯೂ ತಂಡದಲ್ಲಿರುತ್ತಿದ್ದರು" ಎಂದು 'ಸ್ಟಾರ್ ಸ್ಪೋರ್ಟ್ಸ್'ನ 'ಫಾಲೋ ದಿ ಬ್ಲೂಸ್' ಕಾರ್ಯಕ್ರಮದಲ್ಲಿ ಶ್ರೀಕಾಂತ್ ಹೇಳಿದರು.

ಆಕ್ರೋಶ ವ್ಯಕ್ತಪಡಿಸಿದ ಕೆ.ಶ್ರೀಕಾಂತ್

ಭಾರತದ ಮಾಜಿ ಆರಂಭಿಕ ಆಟಗಾರ ಕೆ. ಶ್ರೀಕಾಂತ್, 'ನಾವು ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಡುತ್ತೇವೆ, ಶಮಿ ವೇಗ ಮತ್ತು ಬೌನ್ಸ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಸ್ವಿಂಗ್ ಪಡೆಯುವ ಮೂಲಕ ಆರಂಭಿಕ ವಿಕೆಟ್ಗಳನ್ನು ಪಡೆಯಬಹುದು. ಹರ್ಷಲ್ ಪಟೇಲ್ ಬದಲಿಗೆ ಶಮಿ ಅವರನ್ನು ತಂಡದಲ್ಲಿ ಇರಿಸುತ್ತಿದ್ದೆ.ಹರ್ಷಲ್ ಪಟೇಲ್ ಉತ್ತಮ ಬೌಲರ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಆದರೆ ಪರಿಸ್ಥಿತಿಗೆ ಅನುಗುಣವಾಗಿ ಮೊಹಮ್ಮದ್ ಶಮಿ ಉತ್ತಮ ಆಟಗಾರ ಎಂದು ಹೇಳಿದ್ದಾರೆ.

ಇದನ್ನೂ ಓದಿ : Team India : ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ, ಈ ದಿಗ್ಗಜ ಆಟಗಾರರಿಗೆ ಅವಕಾಶ!

ಟಿ20 ವಿಶ್ವಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News