Lakshmi Narayan Yog: ದೀಪಾವಳಿ ಬಳಿಕ ಅಪಾರ ಹಣ ಗಳಿಸಲಿದ್ದಾರೆ ಈ ರಾಶಿಯವರು

Lakshmi Narayan Yog: ಜ್ಯೋತಿಷ್ಯದಲ್ಲಿ ಹಲವು ಮಂಗಳಕರ ಯೋಗಗಳನ್ನು ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಲಕ್ಷ್ಮೀ-ನಾರಾಯಣ ಯೋಗವೂ ಒಂದು. ಈ ಯೋಗವು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಕೆಲವು ರಾಶಿಯವರಿಗೆ ಇದರ ವಿಶೇಷ ಪ್ರಯೋಜನ ಲಭ್ಯವಾಗಲಿದೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Oct 20, 2022, 07:26 AM IST
  • ಲಕ್ಷ್ಮೀ ನಾರಾಯಣ ಯೋಗವು ಕೆಲವು ರಾಶಿಯವರಿಗೆ ತುಂಬಾ ಮಂಗಳಕರ ಎಂದು ಸಾಬೀತುಪಡಿಸಲಿದೆ.
  • ಈ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
  • ಯಾವ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗದ ವಿಶೇಷ ಲಾಭ ದೊರೆಯಲಿದೆ ತಿಳಿಯೋಣ...
Lakshmi Narayan Yog: ದೀಪಾವಳಿ ಬಳಿಕ ಅಪಾರ ಹಣ ಗಳಿಸಲಿದ್ದಾರೆ ಈ ರಾಶಿಯವರು  title=
Lakshmi Narayan Yog effect

Lakshmi Narayan Yog: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆಗೆ ಹೆಚ್ಚಿನ ಮಹತ್ವವಿದೆ. ಹಲವು ಸಂದರ್ಭಗಳಲ್ಲಿ ಗ್ರಹಗಳ ರಾಶಿ ಪರಿವರ್ತನೆಯೊಂದಿಗೆ ಹಲವು ವಿಶೇಷ ಯೋಗಗಳೂ ರೂಪುಗೊಳ್ಳುತ್ತವೆ. ಇವು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.  ವ್ಯಕ್ತಿಯ ಜೀವನದ ಮೇಲೆ ಅದರ ಪರಿಣಾಮವು ಶುಭ ಅಥವಾ ಅಶುಭವಾದ ಯಾವುದೇ ರೂಪದಲ್ಲಿ ಕಂಡುಬರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಟೋಬರ್ 26 ರಂದು, ಅಂತಹ ವಿಶೇಷ ಯೋಗವು ರೂಪುಗೊಳ್ಳಲಿದೆ, ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಜೀವನದ ಮೇಲೆ ಕಂಡುಬರುತ್ತದೆ. 

ಶುಕ್ರ ಗ್ರಹವು ಅಕ್ಟೋಬರ್ 18 ರಂದು ತುಲಾ ರಾಶಿಯನ್ನು ಪ್ರವೇಶಿಸಿದೆ.  ಇದೀಗ ದೀಪಾವಳಿಯ ಸಂದರ್ಭದಲ್ಲಿ ಅಕ್ಟೋಬರ್ 26 ರಂದು ಬುಧ ಗ್ರಹವು ಕನ್ಯಾರಾಶಿಗೆ ಪ್ರವೇಶಿಸಲಿದೆ. ಶುಕ್ರ ಮತ್ತು ಬುಧ ಸಂಯೋಗದಿಂದ ಲಕ್ಷ್ಮಿ-ನಾರಾಯಣ ಯೋಗವು ರೂಪುಗೊಳ್ಳುತ್ತಿದೆ. ಈ ಯೋಗದಿಂದ ಯಾವ ರಾಶಿಯವರಿಗೆ ಹೆಚ್ಚು ಲಾಭವಾಗಲಿದೆ ಎಂದು ತಿಳಿಯೋಣ. 

ಇದನ್ನೂ ಓದಿ- ದೀಪಾವಳಿಯವರೆಗೂ ಮೌನವಾಗಿ ಪ್ರತಿದಿನ ತುಳಸಿಯ ಈ ವಿಶೇಷ ಪೂಜೆ ಮಾಡಿ: ಸಂಪತ್ತು ಓಡೋಡಿ ಬರುತ್ತೆ

ಈ ರಾಶಿಚಕ್ರದ ಚಿಹ್ನೆಗಳಿಗೆ ಅದ್ಭುತ ಪ್ರಯೋಜನಗಳನ್ನು ನೀಡಲಿದೆ ಲಕ್ಷ್ಮಿ-ನಾರಾಯಣ ಯೋಗ: 
ಕನ್ಯಾ ರಾಶಿ: 

ಅಕ್ಟೋಬರ್ 26 ರಂದು ಗ್ರಹಗಳ ರಾಜಕುಮಾರನಾದ ಬುಧ ಕನ್ಯಾ ರಾಶಿಯಲ್ಲಿ ಸಾಗಲಿದ್ದಾನೆ ಮತ್ತು ಈ ರಾಶಿಯವರಿಗೆ ಲಕ್ಷ್ಮಿ ನಾರಾಯಣ ಯೋಗದ ವಿಶೇಷ ಲಾಭಗಳು ಸಿಗುತ್ತವೆ. ಈ ಯೋಗದಿಂದ ಈ ರಾಶಿಯವರಿಗೆ ಶೀಘ್ರವೇ ಸಾಲದ ಬಾಧೆ ತಪ್ಪುತ್ತದೆ. ಅದೇ ಸಮಯದಲ್ಲಿ, ಬೇರೆಯವರಿಗೆ ನೀಡಿದ ಹಣ ಸಹ ಮತ್ತೆ ನಿಮ್ಮ ಕೈ ಸೇರಲಿದೆ. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಲಾಭವಾಗಲಿದೆ. ಅದೇ ಸಮಯದಲ್ಲಿ, ಉದ್ಯೋಗಿಗಳು ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. 

ಧನು ರಾಶಿ: 
ಲಕ್ಷ್ಮೀ ನಾರಾಯಣ ಯೋಗವು ಈ ಜನರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಇದರಿಂದ ಧನು ರಾಶಿಯವರ ಆದಾಯ ಹೆಚ್ಚುತ್ತದೆ. ಅಲ್ಲದೆ, ಒಳ್ಳೆಯ ಸುದ್ದಿ ಇರುತ್ತದೆ. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಸಹ ಯಶಸ್ಸನ್ನು ಪಡೆಯುತ್ತಾರೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ.

ಇದನ್ನೂ ಓದಿ- ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ: ಈ ಕೆಲಸ ಮಾಡಿದ್ರೆ ನಿಮಗೆ ಅಪಾರ ಸಂಪತ್ತು ದೊರೆಯಲಿದೆ!

ಮಕರ ರಾಶಿ: 
ಲಕ್ಷ್ಮೀ ನಾರಾಯಣ ಯೋಗವು ಈ ರಾಶಿಯವರಿಗೂ ಸಹ ತುಂಬಾ ಮಂಗಳಕರ ಎಂದು ಸಾಬೀತುಪಡಿಸಲಿದೆ. 
ಈ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇದರೊಂದಿಗೆ, ನೀವು ಪ್ರಗತಿಯನ್ನು ಸಹ ಪಡೆಯುತ್ತೀರಿ. ಈ ಸಮಯದಲ್ಲಿ, ಇಷ್ಟು ದಿನ ಬೇರೆಡೆ ಸಿಲುಕಿರುವ ಹಣವು ನಿಮ್ಮ ಕೈ ಸೇರಲಿದೆ. ಸಹೋದ್ಯೋಗಿಗಳೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ನಿಮ್ಮ ಹೊಸ ಯೋಜನೆಗಳಿಗೆ ಕುಟುಂಬದ ಬೆಂಬಲ ಸಿಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು  ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News