ನಟ ದರ್ಶನ್ ಅರೆಸ್ಟ್‌ ಕೇಸ್: ಕೊಲೆಯಾದ ದುರ್ದೈವಿ ರೇಣುಕಾ ಸ್ವಾಮಿ ಯಾರು? ಪತ್ನಿ 8 ತಿಂಗಳ ಗರ್ಭಿಣಿ

Actor Darshan Arrest Case: ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.. ಮಾಹಿತಿ ಪ್ರಕಾರ ಮೃತ ವ್ಯಕ್ತಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 
 

1 /5

ಕೊಲೆ ಪ್ರಕರಣದಲ್ಲಿ ಕನ್ನಡದ ಖ್ಯಾತ ನಟ ದರ್ಶನ್‌ ಅವರನ್ನು ಬೆಂಗಳೂರು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ ಮಾಹಿತಿ ಲಭ್ಯವಾಗಿದೆ. ಇವರ ಅರೆಸ್ಟ್‌ ಸುದ್ದಿಯಿಂದ ಇಡೀ ಸ್ಯಾಂಡಲ್‌ವುಡ್‌ ಬೆಚ್ಚಿಬಿದ್ದಿದೆ.   

2 /5

ಮಾಹಿತಿಯ ಪ್ರಕಾರ ಕೊಲೆಯಾದ ದುರ್ದೈವಿ ಹೆಸರು ರೇಣುಕಾಸ್ವಾಮಿ.. ಮೂಲತಃ ಚಿತ್ರದುರ್ಗ ನಗರದ VRS ಬಡಾವಣೆಯವರಾದ ಇವರು 1 ವರ್ಷದ ಹಿಂದಷ್ಟೇ ಮದುವೆಯಾಗಿ, 3-4 ವರ್ಷಗಳಿಂದ ಖಾಸಗಿ ಔಷಧ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.. ಇವರ ಪತ್ನಿ ಸಹನಾ.. ಇವರು 8 ತಿಂಗಳ ಗರ್ಭಿಣಿಯಾಗಿದ್ದು, ರೇಣುಕಾ ಸ್ವಾಮಿ ಕೊಲೆಯಾದ ವಿಚಾರ ಇವರಿಗೆ ಇನ್ನೂ ತಿಳಿದಿಲ್ಲ.. 

3 /5

ಶನಿವಾರ ಮುಂಜಾನೆ 10 ಗಂಟೆಗೆ ಚಿತ್ರದುರ್ಗದಿಂದ ತೆರಳಿದ್ದ ರೇಣುಕಾಸ್ವಾಮಿ ಬೈಕ್‌ ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಬಾಲಾಜಿ ಬಾರ್ ಬಳಿ ಪತ್ತೆಯಾಗಿದೆ.. ನಿನ್ನೆ ಕಾಮಾಕ್ಷಿಪಾಳ್ಯ ಪೊಲೀಸರು ಅವರ ಪೋಷಕರಿಗೆ ಕರೆ ಮಾಡಿದ್ದಾರೆ..   

4 /5

ವರದಿಯ ಪ್ರಕಾರ ಮೃತವ್ಯಕ್ತಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದು, ಆ ಬಳಿಕ ಮೃತದೇಹವನ್ನು ಕಾಮಾಕ್ಷಿಪಾಳ್ಯದ ಮೋರಿಗೆ ಎಸೆಯಲಾಗಿದೆ.. ನಿನ್ನೆ ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ತನಿಖೆ ಆರಂಭಿಸಿದ್ದರು..   

5 /5

ಆರಂಭದಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರದ್ದು ಆತ್ಮಹತ್ಯೆ ಎನ್ನಲಾಗಿತ್ತು.. ನಂತರ ತನಿಖೆ ವೇಳೆ ಅದು ಕೊಲೆ ಎಂದು ತಿಳಿದುಬಂದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್‌ ಇದರ ಹಿಂದೆ ಇರುವವರನ್ನು ಪತ್ತೆ ಮಾಡಿದ್ದಾರೆ.