ಮದುವೆಗೆ ಕಾರಣರಾದವರೇ ಗೈರು..! ಜೈಲಿಗೆ ಹೋಗಿ ದರ್ಶನ್‌ ಆಶೀರ್ವಾದ ಪಡೆಯುತ್ತಾರಾ ತರುಣ್‌-ಸೋನಲ್‌..?

Tharun Sudhir-Sonal Monteiro Marriage : ನಿರ್ದೇಶಕ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್‌ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನವ ಜೋಡಿ ಮದುವೆಗೆ ಸ್ಯಾಂಡಲ್‌ವುಡ್‌ ಸಾಕ್ಷಿಯಾಗಿತ್ತು. ಆದರೆ ಈ ವಿವಾಹ ಮಹೋತ್ಸವಕ್ಕೆ ಮುಖ್ಯ ಕಾರಣರಾಗಿದ್ದ ನಟ ದರ್ಶನ್‌ ಜೈಲಿನಲ್ಲಿದ್ದು, ಜೋಡಿ ಅವರ ಆಶೀರ್ವಾದ ಪಡೆಯುತ್ತಾರಾ..? ಎನ್ನುವ ಪ್ರಶ್ನೆ ಮೂಡಿದೆ.. 

1 /9

ಸ್ಯಾಂಡಲ್‌ವುಡ್‌ನ ಸ್ಟಾರ್‌ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ಇಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  

2 /9

ಬೆಂಗಳೂರಿನ ಪೂರ್ಣಿಮಾ ಪಾಲೇಸ್‌ನಲ್ಲಿಯೇ ಗುರು-ಹಿರಿಯರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿಯಿತು.   

3 /9

ಸ್ಯಾಂಡಲ್‌ವುಡ್‌ ತಾರೆಯರು, ಕುಟುಂಬದವರು, ಸೇರಿದಂತೆ ರಾಜಕಾರಣಿಗಳು ಈ ಅದ್ಧೂರಿ ಮದುವೆಗೆ ಸಾಕ್ಷಿಯಾಗಿದ್ದರು.  

4 /9

ವಿಪರ್ಯಾಸ ಅಂದ್ರೆ, ಈ ಮದುವೆಗೆ ಕಾರಣವಾಗಿದ್ದ ನಟ ದರ್ಶನ್‌ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದು, ಮುಂದೆ ನಿಂತು ಮದುವೆ ಮಾಡಬೇಕಾದವರೇ ಇಲ್ಲದಂತಾಗಿದೆ..  

5 /9

ತರುಣ್‌ ಅವರು ನಟ ದರ್ಶನ್‌ ಆಪ್ತ ಸ್ನೇಹಿತ ಕೂಡ. ಅಲ್ಲದೆ, ದಾಸ ತರುಣ್‌ ಹಾಗೂ ಸೋನಲ್ ಮದುವೆಯಾಗಲಿ ಅಂತ ತುಂಬಾ ಆಸೆ ಪಟ್ಟಿದ್ದರು.  

6 /9

ಆದರೆ, ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದ ಮೇಲೆ ನಟ ದರ್ಶನ್‌ ಜೈಲುಸೇರಿದ್ದಾರೆ. ಮದುವೆಗೂ ಮುನ್ನ ತರುಣ್‌ ಜೈಲಿನಲ್ಲಿ ನಟ ದರ್ಶನ್‌ ಅವರನ್ನು ಭೇಟಿಯಾಗಿ ವಿಚಾರ ತಿಳಿಸಿದ್ದರು.  

7 /9

ಇನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸೇರಿದಂತೆ ಹಲವು ರಾಜಕಾರಣಿಗಳು ತರುಣ್‌ ವಿವಾಹ ಮಹೋತ್ಸವಕ್ಕೆ ಹಾಜರಾಗಿದ್ದರು. ಸ್ಯಾಂಡಲ್‌ವುಡ್‌ ತಾರೆಯರು ಸಹ ಉಪಸ್ಥಿತರಿದ್ದರು.  

8 /9

ಆದರೆ ನಟ ದರ್ಶನ್‌‌ ತನ್ನ ಆಪ್ತನ ಮದುವೆಯಲ್ಲಿ ಕಾಣಲಿಲ್ಲ ಅನ್ನೋದೆ ಅವರ ಅಭಿಮಾನಿಗಳಿಗೆ ಬೇಸರ ತಂದಿದೆ..  

9 /9

ಮುಂದಿನ ದಿನಗಳಲ್ಲಿ ಈ ಜೋಡಿ ಜೈಲಿಗೆ ಭೇಟಿ ನೀಡಿ ನಟ ದರ್ಶನ್‌ ಆರ್ಶೀವಾದ ಪಡೆಯುತ್ತಾರಾ ಅಂತ ಕಾಯ್ದು ನೋಡಬೇಕಿದೆ..