ʼಹೆಣ್ಣುಮಕ್ಕಳನ್ನು ಹಿಂಗೇ ಬಟ್ಟೆ ಹಾಕಿ ಅಂತ ಹೇಳೋದಕ್ಕಿಂತʼ; ರೇಪಿಸ್ಟ್‌ಗಳ ವಿರುದ್ಧ ಖಾರವಾಗಿ ಗುಡುಗಿದ ಧ್ರುವ ಸರ್ಜಾ!

Actor Dhruva Sarja: ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದರೇ ತಪ್ಪಾಗುವುದಿಲ್ಲ.. ಒಂದಾದ ಮೇಲೋಂದರಂತೆ ಸಾಲು ಸಾಲು ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ.. ಇತ್ತೀಚೆಗಷ್ಟೇ ಕೋಲ್ಕತ್ತಾದ ಮೆಡಿಕಲ್ ವಿದ್ಯಾರ್ಥಿ ಮೇಲೆ ಅತ್ಯಾಚಾರ ಹಾಗೂ ಭೀಕರ ಹತ್ಯೆ ನಡೆದಿದ್ದು ಎಲ್ಲರನ್ನು ಕೆರಳಿಸಿದೆ.. ಇದೀಗ ಈ ವಿಚಾರವಾಗಿ ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಪ್ರತಿಕ್ರಿಯಿಸಿದ್ದಾರೆ.. 
 

1 /5

ಹೆಣ್ಣು ಸಮಾಜದ ಕಣ್ಣು ಎನ್ನುವ ಮಾತಿಗೆ ಕಿಂಚಿತ್ತು ಬೆಲೆ ಇಲ್ಲದಂತಾಗಿದೆ.. ಬರೀ ಅತ್ಯಾಚಾರ, ಶೋಷಣೆ, ಲೈಂಗಿಕ ಕಿರುಕುಳ ಹೀಗೆ ಒಂದಲ್ಲಾ ಒಂದು ರೀತಿಯಿಂದ ಮಹಿಳೆಯರಿಗೆ ಅಪಾಯಗಳು ಸಂಭವಿಸುತ್ತಿವೆ..  

2 /5

ಹೆಣ್ಣನ್ನು ಪೂಜಿಸುವ ನಾಡಿನಲ್ಲಿ ಈ ರೀತಿಯ ಭಯಾನಕ ಕೃತ್ಯ ನಡೆಯುತ್ತಿರುವುದು ದುರಾದೃಷ್ಟವೇ ಸರಿ.. ಇತ್ತೀಚೆಗಷ್ಟೇ ಕೋಲ್ಕತ್ತಾದ ಮೆಡಿಕಲ್ ವಿದ್ಯಾರ್ಥಿ ಮೇಲೆ ನಡೆದ ಅತ್ಯಾಚಾರ ಹಾಗೂ ಭೀಕರ ಹತ್ಯೆ ಎಲ್ಲರಿಗೂ ಶಾಕ್‌ ನೀಡಿದೆ..  

3 /5

ಈ ವಿಚಾರವಾಗಿ ಹಲವಾರು ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.. ಹೆಣ್ಣಿಗೆ ರಕ್ಷಣೆ ಇಲ್ಲದಿದ್ದರೇ ಏನಿದ್ದರೇನು ಎಂದು ಎಲ್ಲರೂ ಕಿಡಿಕಾರುತ್ತಿದ್ದಾರೆ.. ಅದೇ ರೀತಿ ಇದೀಗ ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಸಹ ಪ್ರತಿಕ್ರಿಯೆ ನೀಡಿದ್ದಾರೆ..   

4 /5

ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯೋ ಅತ್ಯಾಚಾರದ ವಿರುದ್ಧ ನಟ ಧ್ರುವ ಸರ್ಜಾ ಖಾರವಾಗಿಯೇ ಪೋಸ್ಟ್‌ ಮೂಲಕ ಗುಡುಗಿದ್ದಾರೆ..  

5 /5

ನಟ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ "ನಾನು ಇವತ್ತು ಮೌನ ಮುರಿಯುತ್ತೇನೆ ಅತ್ಯಾಚಾರ ಅನ್ನೋದು ಬರೀ ಕ್ರೈಂ ಅಲ್ಲ.. ಇದು ಜೀವನದ ಉದ್ದಕ್ಕೂ ಕಾಡೋ ನೋವು ಮತ್ತು ಭಯ.. ಯಾವುದೇ ಕಾರಣಕ್ಕೂ ಇದನ್ನ ಸಹಿಸೋಕೆ ಆಗೋದಿಲ್ಲ.. ಹೆಣ್ಣುಮಕ್ಕಳು ಯಾವುದೇ ಭಯವಿಲ್ಲದ ರೀತಿ ಓಡಾಡುವಂತೆ ಆಗಬೇಕು.. ಗಂಡು ಮಕ್ಕಳಿಗೆ ಸರಿಯಾದ ತಿಳುವಳಿಕೆ ನೀಡಿ" ಎಂದು ಬರೆದುಕೊಂಡು ಪೋಸ್ಟ್‌ ಮಾಡಿದ್ದಾರೆ..