Auspicious Plants: ಹಣಕಾಸಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಈ ಸಸ್ಯಗಳು, ಪಿತೃದೋಷದಿಂದಲೂ ಕೂಡ ಮುಕ್ತಿ ಸಿಗುತ್ತದೆ

Auspicious Plants - ಸಸ್ಯಗಳು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಇದರಿಂದ ಮನೆಯ ಪರಿಸರ ಚೆನ್ನಾಗಿರುವುದಲ್ಲದೆ, ವಾಸ್ತು (Vastu Shastra) ದೋಷಗಳೂ (Vastu Dosh) ಬರುವುದಿಲ್ಲ. ಈ ಕಾರಣಕ್ಕಾಗಿಯೇ ಇಂತಹ ಗಿಡಗಳನ್ನು ಮನೆ ಅಥವಾ ಸುತ್ತಮುತ್ತ ನೆಡಲಾಗುತ್ತದೆ.

Auspicious Plants - ಸಸ್ಯಗಳು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಇದರಿಂದ ಮನೆಯ ಪರಿಸರ ಚೆನ್ನಾಗಿರುವುದಲ್ಲದೆ, ವಾಸ್ತು (Vastu Shastra) ದೋಷಗಳೂ (Vastu Dosh) ಬರುವುದಿಲ್ಲ. ಈ ಕಾರಣಕ್ಕಾಗಿಯೇ ಇಂತಹ ಗಿಡಗಳನ್ನು (Auspicious Plants) ಮನೆ ಅಥವಾ ಸುತ್ತಮುತ್ತ ನೆಡಲಾಗುತ್ತದೆ. ಮನೆಯಲ್ಲಿ ಸಂತೋಷವನ್ನು ತರುವುದರ ಜೊತೆಗೆ ಕುಟುಂಬದ ಸದಸ್ಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಕೆಲವು ಸಸ್ಯಗಳಿವೆ. ಇದು ಪಿತೃ ದೋಷವನ್ನು(Pitru Dosh) ಸಹ ತೊಡೆದುಹಾಕುತ್ತದೆ.

 

ಇದನ್ನೂ ಓದಿ-Financial Crisis: ಆರ್ಥಿಕ ಬಿಕ್ಕಟ್ಟನ್ನು ಕೊನೆಗೊಳಿಸುತ್ತದೆ ವೀಳ್ಯದೆಲೆಯ ಒಂದು ಸಣ್ಣ ಪರಿಹಾರ

 

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಅಗಸ್ತ್ಯ ಸಸ್ಯ (Agastya Plant) - ಅಗಸ್ತ್ಯ ಸಸ್ಯ ಪಿತೃದೋಷ ನಾಶಕ. ಈ ಸಸ್ಯವನ್ನು ಸುಲಭವಾಗಿ ಕಂಡುಹಿಡಿಯಲಾಗುವುದಿಲ್ಲ. ಕಷ್ಟಪಟ್ಟು ಒಂದು ಎಲೆ ಈ ಸಸ್ಯ ನಿಮಗೆ ದೊರೆತರ, ಅದನ್ನು ಖಂಡಿತವಾಗಿಯೂ ಮನೆಯಲ್ಲಿ ನೆಡಬೇಕು. ಬಿಳಿ ಮತ್ತು ನಸುಗೆಂಪು ಬಣ್ಣದ ಅಗಸ್ತ್ಯ ಹೂವುಗಳು ನೋಡಲು ಚೆನ್ನಾಗಿರುವುದಲ್ಲದೆ, ಇವು ದೇವಿ ಲಕುಮಿಗೂ ಕೂಡ ಪ್ರಿಯವಾಗಿರುತ್ತವೆ. 

2 /5

2. ಮಯೂರ ಶಿಖಾ ಸಸ್ಯ (Mayurshikha Plant) - ವಾಸ್ತುವಿನ ದೃಷ್ಟಿಯಿಂದ ಮಯೂರ ಶಿಖಾ ಸಸ್ಯವನ್ನು ಉತ್ತಮವೆಂದು ಪರಿಗಣಿಸಲಾಗಿದೆ. ಈ ಸಸ್ಯವು ಸುಲಭವಾಗಿ ಸಿಗುತ್ತದೆ. ಈ ಸಸ್ಯದ ಪ್ರಭಾವದಿಂದ, ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯು ತೊಲಗುತ್ತದೆ. ಇದಲ್ಲದೆ, ಈ ಸಸ್ಯವನ್ನು ದುಷ್ಟಶಕ್ತಿಗಳ ನಾಶಕ ಎಂದೂ ಕರೆಯುತ್ತಾರೆ. ಈ ಸಸ್ಯದ ಹೂವುಗಳು ನವಿಲಿನ ತುರಾಯಿಯಂತೆ ಇರುತ್ತವೆ. ಪೀಕಾಕ್ ಕ್ರೆಸ್ಟ್ ಸಸ್ಯವನ್ನು ಒಳಾಂಗಣ ಮತ್ತು ಹೊರಾಂಗಣದಲ್ಲಿ ನೆಡಬಹುದು.

3 /5

3. ಪಿತೃದೋಷ ಪರಿಹಾರಕ (Plants Remove Pitru Dosh) - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪಿತೃದೋಷವನ್ನು ಮಹಾದೋಷ ಎಂದು ಪರಿಗಣಿಸಲಾಗಿದೆ. ಪಿತೃದೋಷ (Pitru Dosh Upay) ಪೀಡಿತ ಜಾತಕದ ವ್ಯಕ್ತಿಗಳಿಗೆ ಅಭಿವೃದ್ಧಿಯಲ್ಲಿ ಹಲವು ತೊಡಕುಗಳು ಎದುರಾಗುತ್ತವೆ. ಇದಲ್ಲದೆ ನೌಕರಿ ಹಾಗೂ ಕೆಲಸದಲ್ಲಿಯೂ ಕೂಡ ಪ್ರಗತಿ ಕುಂಠಿತಗೊಳ್ಳುತ್ತದೆ. ಹೀಗಿರುವಾಗ ಪಿತೃದೋಷದಿಂದ ಪಾರಾಗಲು ಈ ಸಸ್ಯಗಳನ್ನು ಮನೆಯ ಅಕ್ಕಪಕ್ಕದಲ್ಲಿ ನೆಡುವುದು ತುಂಬಾ ಸೂಕ್ತ.

4 /5

4. ಶಮಿಗಿಡ (Shami Plant) - ವಾಸ್ತು ದೋಷಗಳನ್ನು ನಿವಾರಣೆಗೆ ಶಮಿ ಗಿಡ ಬಹಳ ವಿಶೇಷವಾಗಿದೆ. ಶನಿ ದೇವ ಈ ಸಸ್ಯಕ್ಕೆ ಸಂಬಂಧಿಸಿದ್ದಾನೆ. ಈ ಗಿಡ ನೆಟ್ಟ ಮನೆಯಲ್ಲಿ ಯಾವುದೇ ರೀತಿಯ ಋಣಾತ್ಮಕ ಶಕ್ತಿಯ ಪ್ರವೇಶ ಇರುವುದಿಲ್ಲ. ಮನೆಯ ಮುಖ್ಯ ಬಾಗಿಲಿನ ಬಲಭಾಗದಲ್ಲಿ ಶಮಿ ಗಿಡವನ್ನು ಇಡುವುದು ತುಂಬಾ ಶುಭಕರ.

5 /5

5. ಸಸ್ಯವನ್ನು ನೆಡುವ ಸರಿಯಾದ ದಿಕ್ಕು - ವಾಸ್ತು (Vastu Tips) ಪ್ರಕಾರ ಮನೆಯ ಪೂರ್ವ, ಉತ್ತರ ದಿಕ್ಕಿನಲ್ಲಿ ಚಿಕ್ಕ ಚಿಕ್ಕ ಗಿಡಗಳನ್ನು ನೆಡುವುದು ಶುಭ. ಮತ್ತೊಂದೆಡೆ, ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ದೊಡ್ಡ ಗಿಡಗಳನ್ನು ನೆಡುವುದು ಯಾವಾಗಲೂ ಒಳ್ಳೆಯದು.