Maha Shivratri 2022: ಮಹಾಶಿವರಾತ್ರಿ ದಿನ ಶಿವಲಿಂಗದ ಮೇಲೆ ತಪ್ಪಿಯೂ ಈ ವಸ್ತುಗಳನ್ನು ಅರ್ಪಿಸಬಾರದು

ಮಹಾಶಿವರಾತ್ರಿಯ ದಿನ ಭಕ್ತರು ಶಿವನ ದೇವಸ್ಥಾನಕ್ಕೆ ತೆರಳಿ ಜಲಾಭಿಷೇಕ ಮತ್ತು ರುದ್ರಾಭಿಷೇಕ ಮಾಡುತ್ತಾರೆ. ಇದರೊಂದಿಗೆ, ಶಿವಲಿಂಗದ ಮೇಲೆ  ಅನೇಕ ವಸ್ತುಗಳನ್ನು ಅರ್ಪಿಸಲಾಗುತ್ತದೆ.

ನವದೆಹಲಿ : ಮಹಾಶಿವರಾತ್ರಿಯ ಹಬ್ಬವನ್ನು ಮಾರ್ಚ್ 1, 2022 ರಂದು ಮಂಗಳವಾರ ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ, ಮಹಾಶಿವರಾತ್ರಿಯನ್ನು ಫಾಲ್ಗುಣ ಕೃಷ್ಣ ಚತುರ್ದಶಿಯಂದು ಆಚರಿಸಲಾಗುತ್ತದೆ. ಮಹಾಶಿವರಾತ್ರಿಯ ದಿನದಂದು ಶಿವ-ಪಾರ್ವತಿಯರ ವಿವಾಹ ನಡೆಯಿತು ಎನ್ನುವುದು ನಂಬಿಕೆ.  ಮಹಾಶಿವರಾತ್ರಿಯ ದಿನ ಭಕ್ತರು ಶಿವನ ದೇವಸ್ಥಾನಕ್ಕೆ ತೆರಳಿ ಜಲಾಭಿಷೇಕ ಮತ್ತು ರುದ್ರಾಭಿಷೇಕ ಮಾಡುತ್ತಾರೆ. ಇದರೊಂದಿಗೆ, ಶಿವಲಿಂಗದ ಮೇಲೆ  ಅನೇಕ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಆದರೆ, ಕೆಲವೊಂದು ವಸ್ತುಗಳನ್ನು ಶಿವಲಿಂಗದ ಮೇಲೆ ಅರ್ಪಿಸಬಾರದು. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಪ್ರಾಮುಖ್ಯತೆ ಇದೆ. ಶಿವನ ಆರಾಧನೆಯಲ್ಲಿ ಅದರ ಬಳಕೆಯನ್ನು ವಿಶೇಷವೆಂದು ಪರಿಗಣಿಸಲಾಗಿದೆ. ಶಿವನ ಪೂಜೆಯಲ್ಲಿ ತುಳಸಿಯನ್ನು ಬಳಸುವುದರಿಂದ ಇಷ್ಟಾರ್ಥ ಈಡೇರುವುದಿಲ್ಲ. 

2 /5

ಶಾಸ್ತ್ರಗಳ ಪ್ರಕಾರ ಎಳ್ಳನ್ನು ಶಿವನ ಆರಾಧನೆಯಲ್ಲಿ ಬಳಸುವಂತಿಲ್ಲ. ಎಳ್ಳು ವಿಷ್ಣುವಿನ ದೇಹದ ಕೊಳಕಿನಿಂದ ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ಶಿವನ ಪೂಜೆಯಲ್ಲಿ ಎಳ್ಳನ್ನು ಬಳಸದಿರುವುದು ಇದೇ ಕಾರಣಕ್ಕೆ.

3 /5

ಶಿವಲಿಂಗದ ಮೇಲೆ ಕುಂಕುಮ ಅಥವಾ ಸಿಂಧೂರವನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ. ಭೋಲೇನಾಥ್ ವೈರಾಗಿ. ಶಿವಲಿಂಗದ ಮೇಲೆ ಭಸ್ಮವನ್ನು ಅರ್ಪಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.

4 /5

ಶಾಸ್ತ್ರಗಳ ಪ್ರಕಾರ ಶಿವಲಿಂಗದ ಮೇಲೆ ತೆಂಗಿನ ನೀರಿನಿಂದ ಅಭಿಷೇಕ ಮಾಡಬಾರದು. ತೆಂಗಿನಕಾಯಿಯನ್ನು ಲಕ್ಷ್ಮೀ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ ಇದು ವಿಷ್ಣುವಿಗೆ ಸಂಬಂಧಿಸಿದ್ದಾಗಿದೆ. ಶಿವನ ಪೂಜೆಯಲ್ಲಿ ತೆಂಗಿನಕಾಯಿಯನ್ನು ಬಳಸಬಾರದು. 

5 /5

ಶಿವನನ್ನು ಕೇವಲ ಒಂದು ಲೋಟ ನೀರು, ಅಕ್ಷತೆ ಮತ್ತು ಬಿಲ್ವಪತ್ರೆ ಅರ್ಪಿಸಿ ಪೂಜಿಸಬಹುದು. ಶಿವ ಪುರಾಣದ ಪ್ರಕಾರ, ಶಿವನ ಪೂಜೆಯಲ್ಲಿ ಸಂಪಿಗೆ ಹೂವುಗಳನ್ನು ಬಳಸಬಾರದು.