ಈ ರಾಶಿಯವರ ಮೇಲೆ ಸದಾ ಇರುತ್ತದೆ ಆಂಜನೇಯನ ಕೃಪೆ.!

ಆಂಜನೇಯ ಸ್ವಾಮಿ ತನ್ನ ಭಕ್ತ ಮೇಲೆ ಯಾವ ಸಂಕಟವನ್ನು ಬಾರದಂತೆ ನೋಡಿಕೊಳ್ಳುತ್ತಾನೆ ಎನ್ನುವುದು ನಂಬಿಕೆ. ಜ್ಯೋತಿಷ್ಯದಲ್ಲಿ ಆಂಜನೇಯನ ಕೃಪೆಗೆ ಪಾತ್ರರಾಗುವ ನಾಲ್ಕು ರಾಶಿಗಳ ಬಗ್ಗೆ ಹೇಳಲಾಗಿದೆ. 

ಬೆಂಗಳೂರು : 12 ರಾಶಿಚಕ್ರದ ಚಿಹ್ನೆಗಳ ಪೈಕಿ ಕೆಲವು ರಾಶಿಗಳ ಮೇಲೆ ಆಂಜನೇಯನ ಕೃಪೆ ಬಹಳವಾಗಿರುತ್ತದೆ ಎಂದು ಜ್ಯೋತಿಷ್ಯದಲ್ಲಿ,  ಹೇಳಲಾಗಿದೆ. ಇನ್ನು ವಾರದ ಏಳು ದಿನಗಳನ್ನು ಯಾವುದಾದರೊಂದು ದೇವರಿಗೆ ಸಮರ್ಪಿಸಲಾಗಿದೆ. ಅದೇ ರೀತಿ ಮಂಗಳವಾರ  ಆಂಜನೇಯನಿಗೆ ಅರ್ಪಿಸಲಾಗಿದೆ. ಈ ದಿನ ಆಂಜನೇಯನನ್ನು ಪೂಜಿಸುವುದರಿಂದ ವಿಶೇಷ ಆಶೀರ್ವಾದ ಸಿಗುತ್ತದೆ. ಆಂಜನೇಯ ಸ್ವಾಮಿ ತನ್ನ ಭಕ್ತ ಮೇಲೆ ಯಾವ ಸಂಕಟವನ್ನು ಬಾರದಂತೆ ನೋಡಿಕೊಳ್ಳುತ್ತಾನೆ ಎನ್ನುವುದು ನಂಬಿಕೆ. ಜ್ಯೋತಿಷ್ಯದಲ್ಲಿ  ಆಂಜನೇಯನ ಕೃಪೆಗೆ ಪಾತ್ರರಾಗುವ ನಾಲ್ಕು ರಾಶಿಗಳ ಬಗ್ಗೆ ಹೇಳಲಾಗಿದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಕುಂಭ ರಾಶಿ :ಜ್ಯೋತಿಷಿಗಳ ಪ್ರಕಾರ, ಕುಂಭ ರಾಶಿಯವರ ಮೇಲೆ ಆಂಜನೇಯ ಸ್ವಾಮಿ   ಕರುಣಾಮಯಿಯಾಗಿರುತ್ತಾನೆ. ಹನುಮಂತನ ಕೃಪೆಯಿಂದ ಕುಂಭ ರಾಶಿಯವರಿಗೆ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ.  ಆರ್ಥಿಕ ಸಂಕಷ್ಟ ಎದುರಾಗಲು ಬಿಡುವುದಿಲ್ಲ. ಆಂಜನೇಯನ ಕೃಪೆಯಿಂದ ಈ ರಾಶಿಯವರ ಜೀವನವು ಸಂತೋಷ ಮತ್ತು ಸಮೃದ್ಧಿಯಿಂದ ಕೂಡಿರುತ್ತದೆ. 

2 /4

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ ಜನರ ಮೇಲೆ ಹನುಮಂತನ ವಿಶೇಷ ಆಶೀರ್ವಾದ  ಮಂಗಳವಾರದಂದು ಭಜರಂಗಬಲಿಯನ್ನು ಪೂಜಿಸುವುದರಿಂದ ವ್ಯಕ್ತಿಯು ತನ್ನ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತಾನೆ. ಅಷ್ಟೇ ಅಲ್ಲ ಅವರ ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದೇ ಇಲ್ಲ. 

3 /4

ಸಿಂಹ ರಾಶಿ : ಜ್ಯೋತಿಷ್ಯದ ಪ್ರಕಾರ,  ಆಂಜನೇಯನ ನೆಚ್ಚಿನ ರಾಶಿಗಳಲ್ಲಿ ಸಿಂಹ ರಾಶಿ ಕೂಡಾ ಒಂದು.  ಈ ರಾಶಿಯವರ ಮೇಲೆ ಹನುಮಂತನ ಆಶೀರ್ವಾದ ಸದಾ ಇರುತ್ತದೆ. ಸಿಂಹ ರಾಶಿಯವರು ಮಂಗಳವಾರದಂದು ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ, ಎಂದಿಗೂ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ. 

4 /4

ಮೇಷ ರಾಶಿ : ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿ  ಆಂಜನೇಯನ ನೆಚ್ಚಿನ ರಾಶಿಗಳಲ್ಲಿ ಒಂದು. ಆಂಜನೇಯ ಸ್ವಾಮಿಯು ಈ ರಾಶಿಯವರ ಮೇಲೆ ವಿಶೇಷ ದಯೆ ತೋರುತ್ತಾನೆ. ಮೇಷ ರಾಶಿಯ ಜನರು ಮಂಗಳವಾರ ಹನುಮಾನ್ ದೇವರನ್ನು ಪೂಜಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ.