Hanuman Jayanti 2022: ಹನುಮ ಜಯಂತಿಯ ದಿನ ಈ 5 ಕೆಲಸಗಳನ್ನು ಮಾಡಲು ಮರೆಯಬೇಡಿ, ಜೀವನದ ಎಲ್ಲಾ ಸಂಕಷ್ಟ ಪರಿಹಾರವಾಗುತ್ತದೆ

Hanuma Jayanti 2022 - ಚೈತ್ರ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನ ಹನುಮಾನ್ ಜಯಂತಿ ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಮಹಾಬಲಿ ಆಂಜನೇಯ ಜನಿಸಿದ್ದ ಎನ್ನಲಾಗುತ್ತದೆ.  

Hanuma Jayanti 2022 - ಚೈತ್ರ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನ ಹನುಮಾನ್ ಜಯಂತಿ ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಮಹಾಬಲಿ ಆಂಜನೇಯ ಜನಿಸಿದ್ದ ಎನ್ನಲಾಗುತ್ತದೆ.  ಈ ವರ್ಷ ಹನುಮ ಜಯಂತಿಯನ್ನು ಏಪ್ರಿಲ್ 16 ರಂದು ಆಚರಿಸಲಾಗುತ್ತಿದೆ. ಹನುಮಾನ್ ಜಯಂತಿಯ ದಿನದಂದು ಧಾರ್ಮಿಕ ವಿಧಿ-ವಿಧಾನಗಳಿಂದ ಶ್ರೀಆಂಜನೇಯನನ್ನು ಪೂಜಿಸಿದರೆ ಆಂಜನೇಯ ಪ್ರಸನ್ನನಾಗುತ್ತಾನೆ ಮತ್ತು ಜೀವನದ ಎಲ್ಲಾ ರೀತಿಯ ಸಂಕಷ್ಟಗಳನ್ನು ನಿವಾರಿಸುತ್ತಾನೆ ಎಂಬುದು ಧಾರ್ಮಿಕ ನಂಬಿಕೆ. ಹಾಗಾದರೆ ಹನುಮಾನ್ (Lord Hanuman) ಜಯಂತಿಯ ದಿನ ಏನನ್ನು ಮಾಡಿದರೆ ಶುಭಕರ ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ- Durga Ashtami 2022: ಅಷ್ಠಮಿಯ ಈ ಶುಭ ಮುಹೂರ್ತದಲ್ಲಿಯೇ ನೆರವೇರಿಸಿ ಕನ್ಯಾ ಪೂಜೆ

 


(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ನಕಾರಾತ್ಮಕ ಶಕ್ತಿ ತೊಲಗಿಸಲು ಏನು ಮಾಡಬೇಕು - ಧಾರ್ಮಿಕ ನಂಬಿಕೆಗಳ ಪ್ರಕಾರ ಹನುಮ ಜಯಂತಿಯ ದಿನ ಹನುಮಂತದ ದೋಹಾ ಪಠಿಸುವವರ ಹತ್ತಿರ ಭೂತ, ಪ್ರೇತ ಹಾಗೂ ನಕಾರಾತ್ಮಕ ಶಕ್ತಿಗಳು ಸುಳಿಯುವುದಿಲ್ಲ. ಹೀಗಾಗಿ 'ಬೂತ-ಪ್ರೇತ ನಿಕಟ ನಹಿ ಆವೆ, ಮಹಾವೀರ ಜಬ ನಾಮ ಸುನಾವೆ' ಪಠಿಸಿ.  

2 /5

2. ಭಯವನ್ನು ದೂರಗೊಳಿಸಲು ಈ ಕೆಲಸ ಮಾಡಿ - ಹಲವು ಬಾರಿ ಜನರಿಗೆ ಕೆಲ ಸಂಗತಿಗಳ ಭಯ ಕಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹನುಮ ಜಯಂತಿಯ ದಿನ ಬೆಳಗ್ಗೆ ಆಂಜನೇಯ ಸ್ವಾವಿ ದೇವಸ್ಥಾನಕ್ಕೆ ತೆರಳಿ 1100 ಬಾರಿ ಈ ಕೆಳಗೆ ನೀಡಲಾಗಿರುವ ಮಂತ್ರವನ್ನು ಜಪಿಸಿ. ಜಪಕ್ಕೆ ರುದ್ರಾಕ್ಷ ಮಾಲೆಯನ್ನು ಉಪಯೋಗಿಸಿ. ಹೀಗೆ ಮಾಡುವುದರಿಂದ ಎಲ್ಲಾ ರೀತಿಯ ಅಡೆತಡೆಗಳು ನಿವಾರಣೆಯಾಗುತ್ತವೆ. ಮಂತ್ರ - ಓಂ ಹಂ ಹನುಮಂತಯೇನಮಃ   

3 /5

3. ರೋಗಗಳಿಂದ ಮುಕ್ತಿಪಡೆಯಲು - ಕೆಲ ಜನರಿಗೆ ಪದೇ ಪದೇ ಅನಾರೋಗ್ಯ ಕಾಡುತ್ತದೆ. ಹೀಗಿರುವಾಗ ಹನುಮ ಜಯಂತಿಯ ದಿನ ಈ ಕೆಳಗೆ ನೀಡಲಾಗಿರುವ ಚೌಪಾಯಿಯನ್ನು ಪಠಿಸಿ. ಇದಲ್ಲದೆ ನಿಯಮಿತವಾಗಿ ಈ ಚೌಪಾಯಿಯನ್ನು ಪಠಿಸುವವರ ಮೇಲೆ ಹನುಮನ ವಿಶೇಷ ಕೃಪೆ ಇರುತ್ತದೆ. ಚೌಪಾಯಿ - 'ನಾಸೌ ರೋಗ ಹರೈ ಸಬ್ ಪೀರಾ, ಜಪತ್ ನಿರಂತರ ಹನುಮತ ಬೀರಾ'  

4 /5

4. ಇಷ್ಟಾರ್ಥ ಸಿದ್ಧಿಗಾಗಿ ಈ ಕೆಲಸ ಮಾಡಿ -  ಯಾವುದೇ ಒಂದು ವಿಶಿಷ್ಟ ಮನೋಕಾಮನೆ ಪೂರ್ತಿಗಾಗಿ ಹನುಮಾನ ಜಯಂತಿಯ ದಿನ 'ಓಂ ಮಹಾಬಲಾಯ ವಿರಾಯ ಚೀರಂಜೀವಿನ ಉದ್ದತೆ, ಹರಿಣೆ ವಜ್ರ ದೇಹಾಯ ಚೋಲಾಂಗ್ಧಿತ್ ಮಹಾವ್ಯಯೇ' ಈ ಮಂತ್ರವನ್ನು 108 ಬಾರಿ ಜಪಿಸಿ.

5 /5

5. ವಿದ್ಯೆ ಹಾಗೂ ಜ್ಞಾನ ಪ್ರಾಪ್ತಿಗಾಗಿ ಈ ಕೆಲಸ ಮಾಡಿ -ವಿದ್ಯಾರ್ಥಿಗಳು ಶ್ರೀ ಆಂಜನೇಯನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲು ಹನುಮಾನ ಜಯಂತಿಯ ದಿನ ಹನುಮಾನ್ ಚಾಲಿಸಾ ಪಠಿಸಬೇಕು. ನಂಬಿಕೆಗಳ ಪ್ರಕಾರ, ಈ ರೀತಿ ಮಾಡುವುದರಿಂದ ಸ್ಮರಣಶಕ್ತಿ ಹೆಚ್ಚಾಗುತ್ತದೆ ಹಾಗೂ ಶಿಕ್ಷಣದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಮಂತ್ರ - ವಿದ್ಯಾವಾನ ಗುಣಿ ಅತಿ ಚತುರ ರಾಮ ಕಾಜ ಕರಿಬೇಕೋ ಆತುರ'