ಕೆಲವೇ ಗಂಟೆಗಳಲ್ಲಿ ಗುರುವಿನ ನೇರನಡೆ ಆರಂಭ, ಹೊಸ ವರುಷದಲ್ಲಿ ಈ ಜನರ ಮೇಲಿರಲಿದೆ ಧನ ಕುಬೇರನ ಅಪಾರ ಕೃಪೆ!

Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇನ್ನೂ ಕೆಲವೇ ಗಂಟೆಗಳಲ್ಲಿ ಅಂದರೆ ಡಿಸೆಂಬರ್ 31,2023 ರಂದು ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ನೇರನಡೆ ಆರಂಭಗೊಳ್ಳಲಿದೆ. ಇದರಿಂದ ಹೊಸ ವರ್ಷದಲ್ಲಿ ಕೆಲ ರಾಶಿಗಳ ಜನರ ಮೇಲೆ ಧನ ಕುಬೇರನ ಅಪಾರ ಕೃಪೆ ಇರಲಿದ್ದು, ಈ ಜನರಿಗೆ ಹೊಸ ವರ್ಷದಲ್ಲಿ ಅಪಾರ ಧನಸಪತ್ತು ಪ್ರಾಪ್ತಿಯಾಗಲಿದೆ. (Spiritual News In Kannada)

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ 31 ರಂದು ದೇವ ಗುರು ಬೃಹಸ್ಪತಿ ಮಂಗಳನ ಅಧಿಪತ್ಯದ ಮೇಷ ರಾಶಿಯಲ್ಲಿ ತನ್ನ ನೆರನಡೆಯನ್ನು ಅನುಸರಿಸಲಿದ್ದಾನೆ. ನಾಳೆ ಬೆಳಗ್ಗೆ 7 ಗಂಟೆ 8 ನಿಮಿಷಕ್ಕೆ ಮೇಷ ರಾಶಿಯಲ್ಲಿ ಗುರುವಿನ ಈ ನೇರನಡೆ ಆರಂಭಗೊಳ್ಳಲಿದೆ. ಇದರಿಂದ ಹಲವು ರಾಶಿಗಳ ಜನರಿಗೆ ಎಲ್ಲ ಅಡೆತಡೆ ಹಾಗೂ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಆಧ್ಯಾತ್ಮದತ್ತ ಒಲವು ಹೆಚ್ಚಾಗಲಿದೆ. ಬನ್ನಿ ಆ ಅದೃಸ್ತವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ. (Spiritual News In Kannada)

 

ಇದನ್ನೂ ಓದಿ-ಶನಿ-ಶುಕ್ರರ ಕೃಪೆಯಿಂದ 'ಕೇಂದ್ರ ರಾಜಯೋಗ' ರಚನೆ, ಹೊಸ ವರ್ಷದಲ್ಲಿ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇನ್ನೂ ಕೆಲವೇ ಗಂಟೆಗಳಲ್ಲಿ ಅಂದರೆ ಡಿಸೆಂಬರ್ 31,2023 ರಂದು ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿಯ ನೇರನಡೆ ಆರಂಭಗೊಳ್ಳಲಿದೆ. ಇದರಿಂದ ಹೊಸ ವರ್ಷದಲ್ಲಿ ಕೆಲ ರಾಶಿಗಳ ಜನರ ಮೇಲೆ ಧನ ಕುಬೇರನ ಅಪಾರ ಕೃಪೆ ಇರಲಿದ್ದು, ಈ ಜನರಿಗೆ ಹೊಸ ವರ್ಷದಲ್ಲಿ ಅಪಾರ ಧನಸಪತ್ತು ಪ್ರಾಪ್ತಿಯಾಗಲಿದೆ. (Spiritual News In Kannada)

2 /5

ಮೇಷ ರಾಶಿ: ನಿಮ್ಮ ಜಾತಕದ ಲಗ್ನ ಭಾವದಲ್ಲಿ ಗುರುವಿನ ಈ ನೇರನಡೆ ಆರಂಭಗೊಳ್ಳಲಿದೆ. ಇದು ನಿಮ ಪಾಲಿಗೆ ವರದಾನ ಎಂದರೆ ತಪ್ಪಾಗಲಾರದು. ಈ ಅವಧಿಯಲ್ಲಿ ನಿಮಗೆ ನಿಮ್ಮ ಅದುಷ್ಟದ ಸಂಪೂರ್ಣ ಬೆಂಬಲ ಸಿಗಲಿದ್ದು, ಇದರಿಂದ ಆದ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗಲಿವೆ. ಆದರೆ. ನಿರ್ಲಕ್ಷ ಧೋರಣೆ ಸಲ್ಲದು ಎಂಬುದನು ನೆನಪಿನಲ್ಲಿಡಿ. ವಿದ್ಯಾರ್ಥಿಗಳ ಪಾಲಿಗೆ ಗುರುವಿನ ಈ ನೇರನಡೆ ವಿಶೇಷವಾಗಿರಲಿದೆ. ಉನ್ನತ ವ್ಯಾಸಂಗ ಮಾಡುವ ಅವಕಾಶ ಒದಗಿಬರಲಿದೆ. ವಿವಾಹದಲ್ಲಿ ನಡೆದುಕೊಂಡು ಬಂದ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.   

3 /5

ವೃಷಭ ರಾಶಿ: ನಿಮ್ಮ ಗೋಚರ ಜಾತಕದ ದ್ವಾದಶ ಭಾವದಲ್ಲಿ ಗುರು ತನ್ನ ನೇರನಡೆಯನ್ನು ಅನುಸರಿಸಲಿದ್ದಾನೆ. ಹೀಗಿರುವಾಗ ಈ ರಾಶಿಯ ಜಾತಕದವರಿಗೆ ವಿದೇಶಿ ಕಂಪನಿಗಳಿಂದ ಲಾಭ ಸಿಗಲಿದೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಸಮಸ್ಯೆಯಗಳು ಇದ್ದರೂ ಕೂಡ ಹೊಸ ಮನೆ-ಸಂಪತ್ತು ಖರೀದಿಸುವ ನಿಮ್ಮ ಕನಸು ನನಸಾಗಲಿದೆ. ಮನೆ-ಕುಟುಂಬಸ್ಥರ ನಡುವಿನ ನಿಮ್ಮ ಬಂಧ ಗಟ್ಟಿಯಾಗಲಿದೆ. ಕ್ಲೇಶಗಳು ಮುಕ್ತಾಯಗೊಳ್ಳಲಿವೆ. ಉನ್ನತ ವ್ಯಾಸಂಗ ಮಾಡುವ ಅವಕಾಶ ಕೂಡ ಒದಗಿಬರಲಿದೆ.   

4 /5

ಸಿಂಹ ರಾಶಿ: ಮೇಷ ರಾಶಿಯಲ್ಲಿನ ಗುರುವಿನ ನೇರನಡೆ ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಇರಲಿದೆ. ಇದರಿಂದ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಅನಿಶ್ಚಿತತೆಗಳ ಜೊತೆಗಿನ ನಿಮ್ಮ ಹೋರಾಟದಿಂದ ನಿಮಗೆ ಮುಕ್ತಿ ಸಿಗಲಿದೆ. ಮಕ್ಕಳ ವ್ಯಾಸಂಗಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗಲಿವೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ. ಸಪ್ತಮ ದೃಷ್ಟಿ ನಿಮ್ಮ ಮೂರನೇ ಭಾವದ ಮೇಲಿರುವ ಕಾರಣ ಆತ್ಮವಿಶ್ವಾಸ-ಸಾಹಸ ಹೆಚ್ಚಾಗಲಿದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)