ಸೆಪ್ಟೆಂಬರ್ ತಿಂಗಳಿನಲ್ಲಿ ಸೂರ್ಯ ಸೇರಿದಂತೆ ಈ ಗ್ರಹಗಳು ಭಾರಿ ಹಲ್ಚಲ್ ಸೃಷ್ಟಿಸಲಿವೆ, 4 ರಾಶಿಗಳ ಜನರಿಗೆ ಭಾರಿ ಧನಲಾಭ!

September Month Planatary Transit: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ ತಿಂಗಳಿಂದಲ್ಲಿ ಬುಧ, ಮಂಗಳ ಗ್ರಹಗಳು ಅಸ್ತಮಿಸಲಿದ್ದು, ಸೂರ್ಯ ಮತ್ತೊಮ್ಮೆ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಗ್ರಹಗಳ ಈ ಭಾರಿ ಹಲ್ಚಲ್ ಯಾವ ರಾಶಿಗಳ ಜನರಿಗೆ ಲಾಭ ತಂದುಕೊಡಲಿದೆ ತಿಳಿದುಕೊಳ್ಳೋಣ ಬನ್ನಿ, 

ಬೆಂಗಳೂರು: ವೈದಿಕ ಪಂಚಾಂಗದ ಪ್ರಕಾರ ಸೆಪ್ಟೆಂಬರ್ ತಿಂಗಳು ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ಈ ತಿಂಗಳಿನಲ್ಲಿ ಹಲವು ದೊಡ್ಡ ಗ್ರಹಗಳು ತನ್ನ ರಾಶಿಯನ್ನು ಪರಿವರ್ತಿಸುವುದರ ಜೊತೆಗೆ ಸ್ಥಿತಿ ಪರಿವರ್ತನೆಗೂ ಕೂಡ ಒಳಗಾಗಲಿವೆ. ಒಂದೆಡೆ ಗ್ರಹಗಳ ರಾಜ ಸೂರ್ಯ ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾರೆ, ಮಂಗಳ, ಬುಧ ಹಾಗೂ ಶುಕ್ರರ ಸ್ಥಿತಿ ಪರಿವರ್ತನೆಯ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ಗೋಚರಿಸಲಿದೆ. ಹೀಗಿರುವಾಗ ಹಲವು ಜಾತಕದವರಿಗೆ ಇದರಿಂದ ಲಾಭ ಸಿಗಲಿದೆ. ಆದರೆ, ಕೆಲ ಜಾತಕದವರಿಗೆ ಎಚ್ಚರಿಕೆಯಿಂದ ಇರಬೇಕಾದ ಕಾಲ ಬರಲಿದೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ ತಿಂಗಳು ಕೆಲ ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ. ಹೀಗಿರುವಾಗ ಮುಂಬರುವ ತಿಂಗಳು ಯಾವ ರಾಶಿಗಳ ಪಾಲಿಗೆ ಶುಭವಾಗಿರಲಿದೆ ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-50 ವರ್ಷಗಳ ಬಳಿಕ 3 ರಾಶಿಗಳ ಗೋಚರ ಜಾತಕದಲ್ಲಿ ಡಬಲ್ ಅಖಂಡ ಸಾಮ್ರಾಜ್ಯ ಯೋಗ', ವರಮಹಾಲಕ್ಷ್ಮಿಯ ಕೃಪೆಯಿಂದ ಸಿಗಲಿದೆ ಅಪಾರ ಸಿರಿಸಂಪತ್ತು!

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಜೋತಿಷ್ಯ ಲೆಕ್ಕಾಚಾರದ ಪ್ರಕಾರ ಸೆಪ್ಟೆಂಬರ್ 4, 2023 ರಂದು ಸಂಜೆ 4 ಗಂಟೆ 58 ನಿಮಿಷಕ್ಕೆ ದೇವಗುರು ಬೃಹಸ್ಪತಿ ಮೇಷ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಅನುಸರಿಸಲಿದ್ದಾನೆ. ಇದಲ್ಲದೆ ಧನ ವೈಭವ ಕರುಣಿಸುವಾತ ಶುಕ್ರ ಕೂಡ ಬೆಳಗ್ಗೆ 6 ಗಂಟೆ 17 ನಿಮಿಷಕ್ಕೆ ಕರ್ಕ ರಾಶಿಯಲ್ಲಿ ತನ್ನ ನೆರನಡೆಯನ್ನು ಅನುಸರಿಸಲಿದ್ದಾನೆ. ಇನ್ನೊಂದೆಡೆ ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ಸೆಪ್ಟೆಂಬರ್ 16, 2023 ರಂದು 1ಗಂಟೆ 21 ನಿಮಿಷಕ್ಕೆ ಸಿಂಹರಾಶಿಯಲ್ಲಿ ತನ್ನ ನೆರನಡೆಯನ್ನು ಆರಂಭಿಸಲಿದ್ದಾನೆ. ಅದರ ಮಾರನೇ ದಿನ ಅಂದರೆ ಸೆಪ್ಟೆಂಬರ್ 17 ರಂದು ಮದ್ಯಾಹ್ನ 1 ಗಂಟೆ 20 ನಿಮಿಷಕ್ಕೆ ಸೂರ್ಯ ತನ್ನ ಸ್ವರಾಶಿಯಾಗಿರುವ ಸಿಂಹ ರಾಶಿಯಿಂದ ಹೊರಬಂದು ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಸೆಪ್ಟೆಂಬರ್ 24, 2023 ರಂದು ಸಂಜೆ 6 ಗಂಟೆ 26 ನಿಮಿಷಕ್ಕೆ ಮಂಗಳ ಕನ್ಯಾ ರಾಶಿಯಲ್ಲಿ ಅಸ್ತನಾಗಲಿದ್ದಾನೆ. ಈ ಎಲ್ಲಾ ಗ್ರಹಗಳ ಭಾರಿ ಹಲ್ಚಲ್ 4 ರಾಶಿಗಳ ಜಾತಕದವರಿಗೆ ಭಾರಿ ಧನಲಾಭ ಮತ್ತು ಭಾಗ್ಯೋದಯ ಯೋಗವನ್ನು ಕರುಣಿಸಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ,   

2 /5

2. ಮೇಷ ರಾಶಿ: ಮೇಷ ರಾಶಿಯ ಜಾತಕದವರಿಗೆ ಸೆಪ್ಟೆಂಬರ್ ತಿಂಗಳು ತುಂಬಾ ವಿಶೇಷವಾಗಿರಲಿದೆ. ಏಕೆಂದರೆ ನಿಮ್ಮ ಜಾತಕದಲ್ಲಿ ದೇವಗುರು ಬೃಹಸ್ಪತಿ ತನ್ನ ವಕ್ರನಡೆಯನ್ನು ಅನುಸರಿಸಲಿದ್ದಾನೆ. ಹೀಗಿರುವಾಗ ಈ ಜಾತಕದ ಜನರಿಗೆ ನೌಕರಿ, ಬಿಸ್ನೆಸ್ ನಲ್ಲಿ ಅಪಾರ ಲಾಭ ಸಿಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಧನ-ಧಾನ್ಯದಲ್ಲಿ ವೃದ್ಧಿಯ ಜೊತೆಗೆ ಆದಾಯದ ಹೊಸ ಮಾರ್ಗಗಳು ಕೂಡ ತೆರೆದುಕೊಳ್ಳಲಿವೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ.   

3 /5

3. ಮಿಥುನ ರಾಶಿ: ಮಿಥುನ ಜಾತಕದವರ ಪಾಲಿಗೂ ಕೂಡ ಸೆಪ್ಟೆಂಬರ್ ತಿಂಗಳು ಅತ್ಯದ್ಭುತ ಸಾಬೀತಾಗಲಿದೆ. ಶೈಕ್ಷಣಿಕ ದೃಷ್ಟಿಯಿಂದ ಈ ತಿಂಗಳು ನಿಮಗೆ ತುಂಬಾ ಉಪಯುಕ್ತ ಸಾಬೀತಾಗಲಿದೆ. ಕೌಟುಂಬಿಕ ಕಲಹಗಳಿಂದ ನಿಮಗೆ ಮುಕ್ತಿ ಸಿಗಲಿದೆ. ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ. ಇದರ ಜೊತೆಗೆ ಆರ್ಥಿಕ ಸ್ಥಿತಿ ಕೂಡ ಸಾಕಷ್ಟು ಬಲಿಷ್ಠವಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಕೂಡ ತಿಂಗಳು ಉತ್ತಮವಾಗಿದೆ.   

4 /5

4. ತುಲಾ ರಾಶಿ: ತುಲಾ ರಾಶಿಯ ಜನರ ಪಾಲಿಗೂ ಕೂಡ ಸೆಪ್ಟೆಂಬರ್ ತಿಂಗಳು ಅತ್ಯುತ್ತಮವಾಗಿವೆ. ಈ ರಾಶಿಯ ಜನರಿಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಹೀಗಿರುವಾಗ ಧನ-ಧಾನ್ಯದಲ್ಲಿ ವೃದ್ಧಿಯ ಜೊತೆಗೆ ಸೌಭಾಗ್ಯ ಪ್ರಾಪ್ತಿಯಾಗಲಿದೆ. ಬಿಸ್ನೆಸ್ ನಲ್ಲಿ ತೊಡಗಿಸಿಕೊಂಡವರಿಗೆ ಆಕಸ್ಮಿಕ ಧನಲಾಭ ಉಂಟಾಗಲಿದೆ. ನೌಕರಿಯಲ್ಲಿರುವವರಿಗೆ ಪದೋನ್ನತಿ ಭಾಗ್ಯದ ಜೊತೆಗೆ ಇಂಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ.   

5 /5

5. ಸಿಂಹ ರಾಶಿ: ಸೆಪ್ಟೆಂಬರ್ ತಿಂಗಳು ಸಿಂಹ ರಾಶಿಯ ಜನರ ಪಾಲಿಗೂ ಕೂಡ ಶುಭ ಸಿದ್ಧ ಸಾಬೀತಾಗಲಿದೆ. ನೌಕರಿಯಲ್ಲಿ ಪ್ರಮೋಷನ್ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇದಲ್ಲದೆ ಬಿಸ್ನೆಸ್ ಮಾಡುವವರಿಗೂ ಕೂಡ ಅಪಾರ ಯಶಸ್ಸು ಪ್ರಾಪ್ತಿಯಾಗುವುದರ ಜೊತೆಗೆ ಧನಲಾಭದ ಸಾಧ್ಯತೆ ಇದೆ. ಕುಟುಂಬದಲ್ಲಿ ಅಪಾರ ಖುಷಿಗಳ ಆಗಮನವಾಗಲಿದೆ. ವೈವಾಹಿಕ ಜೀವನ ಸುಖಮಯವಾಗಿರಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)