ಇವುಗಳಲ್ಲಿ ಯಾವುದಾದರೂ ಒಂದು ವಸ್ತು ನಿಮ್ಮ ಪರ್ಸ್‌ನಲ್ಲಿದ್ದರೆ ಎಂದಿಗೂ ಹಣಕಾಸಿನ ಸಮಸ್ಯೆ ಕಾಡುವುದಿಲ್ಲ!

                              

ಇಂದಿನ ಕಾಲದಲ್ಲಿ ಹಣ ಇಲ್ಲದೆ ಯಾವುದೇ ಕೆಲಸವೂ ಸಾಧ್ಯವಿಲ್ಲ. ಆದರೆ ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಅದಾಗ್ಯೂ, ಇಂದಿನ ಕಾಲದಲ್ಲಿ ನಿಮ್ಮ ಬಳಿ ಹಣ ಒಂದಿದ್ದರೆ, ಎಲ್ಲವೂ ಇದ್ದಂತೆಯೇ ಅರ್ಥ. ಹಣ ಇದ್ದರೆ ಜೀವನದ ಎಲ್ಲಾ ಐಷಾರಾಮಿಗಳನ್ನು ಖರೀದಿಸಬಹುದು. ನಿಮ್ಮ ಬಳಿ ಹಣವಿದ್ದರೆ, ನಿಮ್ಮ ಕುಟುಂಬವನ್ನು ಸಂತೋಷವಾಗಿಡಬಹುದು. ಇಂತಹ ಸನ್ನಿವೇಶದಲ್ಲಿ, ಇಂದು ನಾವು ನಿಮಗೆ ಅಂತಹ ಏಳು ವಿಷಯಗಳ ಬಗ್ಗೆ ಹೇಳಲಿದ್ದೇವೆ, ಅದರಲ್ಲಿ ಯಾವುದಾದರೂ ಒಂದು ವಸ್ತು ನಿಮ್ಮ ಪರ್ಸ್‌ನಲ್ಲಿದ್ದರೆ, ತಾಯಿ ಲಕ್ಷ್ಮೀದೇವಿಯ ಕೃಪೆ ಸದಾ ನಿಮ್ಮ ಮೇಲಿರುತ್ತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /7

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬರೂ ಲಕ್ಷ್ಮಿ ದೇವಿಯ ಕುಳಿತ ಭಂಗಿಯ ಚಿತ್ರವನ್ನು ತಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ, ನಿಮ್ಮ ಪರ್ಸ್‌ನಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ.

2 /7

ಒಂದು ಅರಳಿ ಎಲೆಯನ್ನು ಶುಭ ಸಮಯವನ್ನು ನೋಡಿ ಅದನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಇದನ್ನು ಮಾಡುವುದರಿಂದ ನೀವು ಜೀವನದಲ್ಲಿ ಎಂದಿಗೂ ಬಡತನವನ್ನು ಎದುರಿಸುವುದಿಲ್ಲ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

3 /7

ಕೆಂಪು ಬಣ್ಣದ ಕಾಗದದ ಮೇಲೆ ನಿಮ್ಮ ಇಚ್ಛೆಯನ್ನು ಬರೆಯುವ ಮೂಲಕ, ಕೆಂಪು ರೇಷ್ಮೆ ದಾರದಿಂದ ಗಂಟು ಕಟ್ಟಿ ಅದನ್ನು ಪರ್ಸ್‌ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಆಸೆ ಬೇಗನೆ ಈಡೇರುತ್ತದೆ  ಎಂದು ಹೇಳಲಾಗುತ್ತದೆ. ಇದನ್ನೂ ಓದಿ- Raksha Bandhan 2021: ರಕ್ಷಾಬಂಧನದಲ್ಲಿ ಸಹೋದರಿಯರು ರಾಶಿ ಪ್ರಕಾರ Rakhi ಕಟ್ಟಿದರೆ ಸಹೋದರನ ಅದೃಷ್ಟ ಬದಲಾಗುತ್ತಂತೆ!

4 /7

ಹಿಂದೂ ಧರ್ಮದಲ್ಲಿ ಅಕ್ಕಿ ಧಾನ್ಯಗಳಿಗೆ ವಿಶೇಷ ಮಹತ್ವವಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ನಿಮ್ಮ ಪರ್ಸ್‌ನಲ್ಲಿ ಒಂದು ಚಿಟಿಕೆ ಅಕ್ಕಿ ಧಾನ್ಯಗಳನ್ನು ಇಟ್ಟುಕೊಂಡರೆ, ನಿಮ್ಮ ಪರ್ಸ್‌ನಿಂದ ಅನಗತ್ಯವಾಗಿ ಹಣ ಖರ್ಚಾಗುವುದಿಲ್ಲ ಎಂದು ಹೇಳಲಾಗುತ್ತದೆ. 

5 /7

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ನಿಮ್ಮ ಹೆತ್ತವರಿಂದ ಅಥವಾ ಹಿರಿಯರಿಂದ ಆಶೀರ್ವಾದ ಪಡೆದು ಹಣ ಸ್ವೀಕರಿಸಿದ್ದರೆ, ಆ ನೋಟಿಗೆ ಕುಂಕುಮ ಮತ್ತು ಅರಿಶಿನ ತಿಲಕವನ್ನು ಹಚ್ಚುವ ಮೂಲಕ ನೀವು ಅದನ್ನು ಯಾವಾಗಲೂ ನಿಮ್ಮ ಪರ್ಸ್‌ನಲ್ಲಿ (Purse) ಇಟ್ಟುಕೊಳ್ಳಬೇಕು. ಹಿರಿಯರ ಆಶೀರ್ವಾದದಿಂದ ನಿಮ್ಮ ಪರ್ಸ್ ಎಂದಿಗೂ ಖಾಲಿಯಾಗುವುದಿಲ್ಲ. ಇದನ್ನೂ ಓದಿ-  Vastu: ಮನೆಯಲ್ಲಿ ಗಾಜು ಒಡೆಯುವುದು ಶುಭವೋ? ಅಶುಭವೋ?

6 /7

ಹಣದ ಜೊತೆಯಲ್ಲಿ, ನೀವು ನಿಮ್ಮ ಪರ್ಸ್‌ನಲ್ಲಿ ಕೌರಿ ಅಥವಾ ಗೋಮತಿ ಚಕ್ರವನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಎಂತಹದ್ದೇ ಆರ್ಥಿಕ ಸಮಸ್ಯೆಯಿದ್ದರೂ ನಿವಾರಣೆಯಾಗುತ್ತದೆ.

7 /7

ಲಕ್ಷ್ಮೀ ದೇವಿಗೆ ಸಂಬಂಧಿಸಿದ ಗೋಮತಿ ಚಕ್ರ, ಸಮುದ್ರ ಕೌರಿ, ಲೋಟಸ್ ಗಟ್ಟೆ, ಬೆಳ್ಳಿ ನಾಣ್ಯ ಇತ್ಯಾದಿಗಳನ್ನು ಸಹ ನೀವು ನಿಮ್ಮ ಪರ್ಸ್‌ನಲ್ಲಿ ಇರಿಸಿಕೊಳ್ಳಬಹುದು. ಈ ಯಾವುದೇ ವಸ್ತುಗಳನ್ನು ಪರ್ಸ್‌ನಲ್ಲಿ ಇಡುವ ಮೊದಲು ಅವುಗಳನ್ನು ಲಕ್ಷ್ಮಿ ದೇವಿಯ ಪಾದಗಳ ಮೇಲೆ ಇರಿಸಿ. ನಂತರ ನಿಮ್ಮ ಪರ್ಸ್‌ನಲ್ಲಿ ಇಡಿ. ಹೀಗೆ ಮಾಡುವುದರಿಂದ ಎಂದಿಗೂ ಹಣದ ಕೊರತೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ. (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)