Tulsi Watering Niyam: ಲಕ್ಷ್ಮಿ ದಯೆಗಾಗಿ ತುಳಸಿಗೆ ನೀರುಣಿಸುವಾಗ ಈ ವಿಷಯಗಳು ನೆನಪಿರಲಿ

Tulsi Watering Niyam: ಬಹುತೇಕ ಪ್ರತಿ ಭಾರತೀಯರ ಮನೆಯಲ್ಲಿ ಪೂಜಿಸಲ್ಪಡುವ ತುಳಸಿ ಸಸ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಯಾವ ಮನೆಯಲ್ಲಿ ನಿತ್ಯ ನಿಯಮಾನುಸಾರ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆಯೋ ಅಂತಹ ಮನೆಯಲ್ಲಿ ಸದಾ ಭಗವಾನ್ ವಿಷ್ಣುವಿನ ಕೃಪೆ ಇರುತ್ತದೆ ಎಂದು ನಂಬಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ಅತ್ಯಂತ ಪವಿತ್ರ ಸಸ್ಯ ತುಳಸಿ. ಔಷಧೀಯ ಗುಣಗಳ ಆಗರವಾಗಿರುವ ತುಳಸಿ ಸಸ್ಯದಲ್ಲಿ ಸಂಪತ್ತಿನ ಅಧಿದೇವತೆಯಾದ ಮಾತೆ ಲಕ್ಷ್ಮಿ ನೆಲೆಸಿರುತ್ತಾಳೆ. ಮಾತ್ರವಲ್ಲ, ತುಳಸಿ ಮಾತೆಗೆ ನೀರುಣಿಸುವುದರಿಂದ ಭಗವಾನ್ ವಿಷ್ಣುವಿನ ಆಶೀರ್ವಾದಕ್ಕೆ ಪಾತ್ರರಾಗಬಹುದು ಎಂದು ನಂಬಲಾಗಿದೆ. ಲಕ್ಷ್ಮಿ ದೇವಿ ಮತ್ತು ಭಗವಾನ್ ವಿಷ್ಣುವಿನ ಆಶೀರ್ವಾದಕ್ಕಾಗಿ ತುಳಸಿಗೆ ನೀರುಣಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಕೂಡ ಬಹಳ ಮುಖ್ಯ. ಆ ನಿಯಮಗಳು ಯಾವುವು ತಿಳಿಯೋಣ. 

2 /8

ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಸಸ್ಯಕ್ಕೆ ನೀರುಣಿಸುವಾಗ ನೀವು ಶುಚಿಯಾಗಿರಬೇಕು. ಮಾತ್ರವಲ್ಲ, ಆಹಾರ ಸೇವಿಸಿರಬಾರದು. ತುಳಸಿ ಸಸ್ಯಕ್ಕೆ ನೀರುಣಿಸಿದ ಬಲಿಕವಷ್ಟೇ ಆಹಾರ ತೆಗೆದುಕೊಳ್ಳಿ. 

3 /8

ತುಳಸಿ ಸಸ್ಯಕ್ಕೆ ನೀರುಣಿಸಲು ಸರಿಯಾದ ಸಮಯ ಸೂರ್ಯೋದಯದಿಂದ 2-3 ಗಂಟೆಗಳ ನಂತರ. ಈ ಅವಧಿಯಲ್ಲಿ ಮಾತ್ರ ತುಳಸಿಗೆ ನೀರನ್ನು ಅರ್ಪಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ. 

4 /8

ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ಅಪ್ಪಿತಪ್ಪಿಯೂ  ನೀರುಣಿಸಬಾರದು. ಈ ದಿನಗಳಲ್ಲಿ ತುಳಸಿ ಭಗವಾನ್ ವಿಷ್ಣುವಿಗಾಗಿ ಉಪವಾಸ ಮಾಡುತ್ತಾಳೆ. ಹಾಗಾಗಿ, ಈ ದಿನ ನೀರು ಹಾಕುವುದರಿಂದ ತುಳಸಿಯ ಉಪವಾಸಕ್ಕೆ ಭಂಗ ತಂದಂತೆ ಎಂದು ಹೇಳಲಾಗುತ್ತದೆ. 

5 /8

ಸ್ನಾನ ಮಾಡುವ ಮೊದಲು ಅಥವಾ ಅಶುದ್ಧ ಸ್ಥಿತಿಯಲ್ಲಿ ಎಂದಿಗೂ ಕೂಡ ತುಳಸಿಗೆ ನೀರು ಹಾಕಬಾರದು. ಈ ರೀತಿ ಮಾಡುವುದರಿಂದ ಪೂಜೆಯ ಫಲ ಸಿಗುವುದಿಲ್ಲ.

6 /8

ನಂಬಿಕೆಗಳ ಪ್ರಕಾರ, ಮಹಿಳೆಯರು ತುಳಸಿಯನ್ನು ಪೂಜಿಸುವಾಗ ತಮ್ಮ ಕೂದಲನ್ನು ತೆರೆದಿಡಬಾರದು. ತುಳಸಿಗೆ ನೀರು ಹಾಕುವಾಗ, ಇಲ್ಲವೇ ಪೂಜೆ ಮಾಡುವಾಗ ಮಹಿಳೆಯರು ಕೂದಲನ್ನು ಕಟ್ಟಿ. 

7 /8

ತುಳಸಿಗೆ ನೀರು ಹಾಕುವಾಗ, ತುಳಸಿಯನ್ನು ಪೂಜಿಸುವಾಗ ತಪ್ಪದೆ ತುಳಸಿ ಮಂತ್ರ "ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ" ಎಂಬ ಮಂತ್ರವನ್ನು ಪಠಿಸಿ. ಇದರಿಂದ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ. 

8 /8

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.