ಗಣೇಶನ ನೆಚ್ಚಿನ ರಾಶಿಗಳಿವು ! ಈ ರಾಶಿಯವರ ಬಳಿ ಸಂಕಟ ಸುಳಿಯಲೂ ಬಿಡುವುದಿಲ್ಲ ವಿಘ್ನ ವಿನಾಶಕ

 ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವೊಂದು ರಾಶಿ ಯವರ ಮೇಲೆ ವಿಘ್ನವಿನಾಶಕನ ದಯೆ ಜಾಸ್ತಿಯೇ ಇರುತ್ತದೆ. ಇವರು ಮಾಡುವ ಪ್ರತಿಯೊಂದು ಕೆಲಸಗಳನ್ನು ಕೂಡಾ ಗಣೇಶ ಹರಸುತ್ತಾನೆ ಎಂದು ಹೇಳಲಾಗುತ್ತದೆ. 

ಬೆಂಗಳೂರು : ಭಕ್ತರ ಭಕ್ತಿಗೆ ಬಲು ಬೇಗ ಒಲಿಯುವ ದೇವರು ಎಂದರೆ ಗಣೇಶ ಎಂದು ಹೇಳಲಾಗುತ್ತದೆ. ಗಣೇಶನನ್ನು ನಿತ್ಯ ಪೂಜಿಸಿದರೆ ಬೇಗನೇ ಸಂತುಷ್ಟನಾಗುತ್ತಾನೆ. ಮಾತ್ರವಲ್ಲ ಭಕ್ತರನ್ನು ಹರಸುತ್ತಾನೆ. ಗಣಪತಿ  ಆಶೀರ್ವಾದವಿದ್ದರೆ ಪ್ರತಿಯೊಂದು ಕೆಲಸದಲ್ಲಿಯೂ ಭಕ್ತರು ಯಶಸ್ಸನ್ನು ಕಾಣುತ್ತಾರೆ. ಇವರ ಜೀವನದ ಎಲ್ಲಾ ದುಃಖ ದುಮ್ಮಾನಗಳು  ದೂರವಾಗುತ್ತವೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವೊಂದು ರಾಶಿ ಯವರ ಮೇಲೆ ವಿಘ್ನವಿನಾಶಕನ ದಯೆ ಜಾಸ್ತಿಯೇ ಇರುತ್ತದೆ. ಇವರು ಮಾಡುವ ಪ್ರತಿಯೊಂದು ಕೆಲಸಗಳನ್ನು ಕೂಡಾ ಗಣೇಶ ಹರಸುತ್ತಾನೆ ಎಂದು ಹೇಳಲಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಮಕರ ರಾಶಿ : ಮಕರ ರಾಶಿಯವರ ಮೇಲೆ ಗಣೇಶನಿಗೆ ವಿಶೇಷ ಅನುಗ್ರಹವಿರುತ್ತದೆ. ಗಣೇಶನ ಕೃಪೆಯಿಂದ ಈ ರಾಶಿಯವರು ಬುದ್ದಿಯಲ್ಲಿಯೂ ತೀಕ್ಷ್ಣವಾಗಿರುತ್ತಾರೆ. ಈ  ರಾಶಿಯವರು ಕಠಿಣ ಪರಿಶ್ರಮದ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾರೆ. 

2 /3

ಮಿಥುನ ರಾಶಿ : ಗಣಪತಿಯ ವಿಶೇಷ ಆಶೀರ್ವಾದವು ಮಿಥುನ ರಾಶಿಯ ಜನರ ಮೇಲೆ ಸದಾ ಇರುತ್ತದೆ. ಈ ರಾಶಿಯವರು ಕೂಡಾ ತೀಕ್ಷ್ಣ ಬುದ್ದಿ ಹೊಂದಿರುತ್ತಾರೆ.  ಓದು ಬರಹದಲ್ಲಿಯೂ ಮುಂದಿರುತ್ತಾರೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಆ ಕೆಲಸದಲ್ಲಿ ಯಶಸ್ಸು ಗಳಿಸುತ್ತಾರೆ. 

3 /3

ಮೇಷ ರಾಶಿ : ಮೇಷ ರಾಶಿಯವರ ಮೇಲೆ ಗಣೇಶನ ವಿಶೇಷ ಕೃಪೆ ಇರುತ್ತದೆ. ಈ ಕಾರಣದಿಂದಲೇ ಮೇಷ ರಾಶಿಯ ಜನರು ಹೆಚ್ಚು ಕೌಶಲ್ಯ ಮತ್ತು ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಯಾವುದೇ ಕಷ್ಟಕರವಾದ ಕೆಲಸವನ್ನು ಬಹಳ ಸುಲಭವಾಗಿ ಮಾಡಿ ಮುಗಿಸುತ್ತಾರೆ. ಗಣೇಶನ ಆಶೀರ್ವಾದದಿಂದ ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸನ್ನು ಪಡೆಯುತ್ತಾರೆ.