Operation Blue Star anniversary : ಗೋಲ್ಡನ್ ಟೆಂಪಲ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆ ಹೇಗಿತ್ತು? ಇಲ್ಲಿ ನೋಡಿ

1984 ರಲ್ಲಿ ಜೂನ್ 1 ರಿಂದ ಜೂನ್ 8 ರವರೆಗೆ, ಸಿಖ್ ಗೋಲ್ಡನ್ ಟೆಂಪಲ್‌ ನಿಂದ  ಉಗ್ರಗಾಮಿಗಳನ್ನು ಹೊರಹಾಕಲು ನಡೆಸಲಾದ ಕಾರ್ಯಾಚರಣೆಯನ್ನು 'ಆಪರೇಷನ್ ಬ್ಲೂ ಸ್ಟಾರ್' ಎಂದು ಕರೆದಿದ್ದಾರೆ.

ನವದೆಹಲಿ : 38 ವರ್ಷಗಳ ಹಿಂದೆ ಇದೇ ದಿನದಂದು, ಭಾರತದಲ್ಲಿನ ಅತಿದೊಡ್ಡ ಮತ್ತು ಅತ್ಯಂತ ವಿವಾದಾತ್ಮಕ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಒಂದಾದದ್ದು 'ಆಪರೇಷನ್ ಬ್ಲೂ ಸ್ಟಾರ್'. 1984 ರಲ್ಲಿ ಜೂನ್ 1 ರಿಂದ ಜೂನ್ 8 ರವರೆಗೆ, ಸಿಖ್ ಗೋಲ್ಡನ್ ಟೆಂಪಲ್‌ ನಿಂದ  ಉಗ್ರಗಾಮಿಗಳನ್ನು ಹೊರಹಾಕಲು ನಡೆಸಲಾದ ಕಾರ್ಯಾಚರಣೆಯನ್ನು 'ಆಪರೇಷನ್ ಬ್ಲೂ ಸ್ಟಾರ್' ಎಂದು ಕರೆದಿದ್ದಾರೆ.

ಈ ಕಾರ್ಯಾಚರಣೆಯನ್ನು ದೇಶದಾದ್ಯಂತ ಸಿಖ್ ಸಮುದಾಯವು ಖಂಡಿಸಿದೆ, ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ವಿರುದ್ಧ ಸಾಕಷ್ಟು ಟೀಕೆಗಳನ್ನು ಉಂಟುಮಾಡಿತು. 1984 ರ ಮಿಲಿಟರಿ ಕಾರ್ಯಾಚರಣೆಯು ನಂತರ ಗೋಲ್ಡನ್ ಟೆಂಪಲ್ ಅನ್ನು ಅಪವಿತ್ರಗೊಳಿಸಿತ್ತು ಎಂದು ಇಂದಿರಾ ಗಾಂಧಿಯವರ ಮೇಲೆ ಕೋಪಗೊಂಡ ಅವರ ಸಿಖ್ ಅಂಗರಕ್ಷಕರಿಂದ ಗಾಂಧಿಯವರ ಹತ್ಯೆಗೆ ಕಾರಣವಾಯಿತು.

ಆಪರೇಷನ್ ಬ್ಲೂ ಸ್ಟಾರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ -

1 /5

ಭಾರತದಲ್ಲಿ ಸಿಖ್ ವಿರೋಧಿ ದಂಗೆಗಳು : ಇಂದಿರಾ ಗಾಂಧಿಯವರ ಹತ್ಯೆಯು ಭಾರತದಲ್ಲಿ ಸಿಖ್ ವಿರೋಧಿ ದಂಗೆಗಳನ್ನು ಪ್ರಚೋದಿಸಿತು, ಈ ಅವಧಿಯಲ್ಲಿ ಸುಮಾರು 3,000 ಸಿಖ್ ವ್ಯಕ್ತಿಗಳು ಕೊಲ್ಲಲ್ಪಟ್ಟರು. ಸಿಖ್ ಪುರುಷರು ಮತ್ತು ಮಹಿಳೆಯರನ್ನು ಹತ್ಯೆ ಮಾಡಲು ಗುಂಪುಗಳನ್ನು ಒತ್ತಾಯಿಸಿದ ಕಾಂಗ್ರೆಸ್ ಪಕ್ಷವು ಗಲಭೆಗಳನ್ನು ಪ್ರಚೋದಿಸಿತು ಎಂದು ಹೇಳಲಾಗಿದೆ. ಸಮುದಾಯದ ಒಡೆತನದ ಅಂಗಡಿಗಳು ಮತ್ತು ಮನೆಗಳ ನಾಶಪಡಿಸಿದರುಮತ್ತು ಸಿಖ್ಖರನ್ನು ಜೀವಂತವಾಗಿ ಸುಟ್ಟುಹಾಕಲಾಗಿದೆ ಎಂದು ವರದಿಯಾಗಿದೆ, ಇದು 1984 ರ ಭೀಕರತೆಯನ್ನು ದೇಶದ ಹೆಚ್ಚಿನ ಭಾಗಕ್ಕೆ ಆಘಾತಕಾರಿಯಾಗಿದೆ.

2 /5

ಇಂದಿರಾ ಗಾಂಧಿಯವರ ಹತ್ಯೆ : ಕಾರ್ಯಾಚರಣೆಯ ಕೆಲವೇ ತಿಂಗಳುಗಳ ನಂತರ, ಪ್ರಧಾನಿ ಇಂದಿರಾ ಗಾಂಧಿಯನ್ನು ಅವರ ಇಬ್ಬರು ಸಿಖ್ ಅಂಗರಕ್ಷಕರು ಹತ್ಯೆ ಮಾಡಿದರು. ಇಂದಿರಾ ಗಾಂಧಿಯವರಿಗೆ ಪಾಯಿಂಟ್-ಬ್ಲಾಂಕ್ ರೇಂಜ್‌ನಿಂದ ಗುಂಡು ಹಾರಿಸಲಾಯಿತು. ಅವರ ಹತ್ಯೆಯ ಹಿಂದಿನ ಕಾರಣವೆಂದರೆ ದಾಳಿಯನ್ನು ನಡೆಸಲು ಆದೇಶವನ್ನು ನೀಡುವುದಾಗಿದೆ, ಇದು ಗೋಲ್ಡನ್ ಟೆಂಪಲ್ ನಾಶಕ್ಕೆ ಕಾರಣವಾಯಿತು.

3 /5

ಕಾರ್ಯಾಚರಣೆಯ ಸಮಯದಲ್ಲಿ ಏನಾಯಿತು? : ಭಾರತೀಯ ಸೇನೆಯು ಗೋಲ್ಡನ್ ಟೆಂಪಲ್ ಆವರಣದ ಒಳಗೆ ನುಗ್ಗಿದ ನಂತರ, ಭಿಂದ್ರನ್‌ವಾಲೆ ಮತ್ತು ಅವರ ಸಹಾಯಕರನ್ನು ಭದ್ರತಾ ಪಡೆಗಳು ಕೊಂದರು. ಕಾರ್ಯಾಚರಣೆಯ ದುರಂತವೆಂದರೆ ಆಪರೇಷನ್ ಬ್ಲೂ ಸ್ಟಾರ್‌ನಿಂದಾಗಿ ಹಲವಾರು ನಾಗರಿಕರು ಸಾವನ್ನಪ್ಪಿದರು ಮತ್ತು ಗಾಯಗೊಂಡರು, ಗೋಲ್ಡನ್ ಟೆಂಪಲ್‌ನ ವಿಭಾಗಗಳು ನಾಶವಾದವು.

4 /5

ಆಪರೇಷನ್ ಬ್ಲೂ ಸ್ಟಾರ್ ಹಿಂದಿನ ಕಾರಣ : ಭಿಂದ್ರನ್‌ವಾಲೆ ಮತ್ತು ಕೆಲವು ಶಸ್ತ್ರಸಜ್ಜಿತ ಉಗ್ರಗಾಮಿಗಳು 1983 ರಲ್ಲಿ ಗೋಲ್ಡನ್ ಟೆಂಪಲ್ ಅನ್ನು ಪ್ರವೇಶಿಸಿ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದರು. ಅಲ್ಲದೆ, ಹರ್ಮಂದಿರ್ ಸಾಹಿಬ್ ಸಂಕೀರ್ಣವನ್ನು ಆಕ್ರಮಿಸಿಕೊಂಡಿದ್ದರು. ಉಗ್ರರ ಬಳಿ ಹೈ-ಪವರ್ ಮೆಷಿನ್ ಗನ್ ಮತ್ತು ಆರ್ ಪಿಜಿಯಂತಹ ಶಸ್ತ್ರಾಸ್ತ್ರಗಳಿವೆ ಎಂದು ವರದಿಯಾಗಿದೆ, ಇದು ಭಾರತೀಯ ಸೇನೆಯನ್ನು ಸಿಖ್ಖರ ಪವಿತ್ರ ಸ್ಥಳ ಅಂದರೆ ಗೋಲ್ಡನ್ ಟೆಂಪಲ್ ಒಳಗೆ ನುಗ್ಗಲು ಪ್ರೇರೇಪಿಸಿತು.

5 /5

ಆಪರೇಷನ್ ಬ್ಲೂ ಸ್ಟಾರ್ ಹೇಗೆ ಪ್ರಾರಂಭವಾಯಿತು : ಜೂನ್ 1 ರಂದು, ಭಾರತೀಯ ಸೇನೆಯು ಸಿಖ್ಖರ ಉಗ್ರಗಾಮಿ ಧಾರ್ಮಿಕ ನಾಯಕ 'ಸಂತ' ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಮತ್ತು ಹಲವಾರು ಇತರ ಉಗ್ರಗಾಮಿಗಳನ್ನು ಅಮೃತಸರ್ ನ ಗೋಲ್ಡನ್ ಟೆಂಪಲ್‌ನಲ್ಲಿ ಹೆಡೆಮುರಿ ಕಟ್ಟಲು ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.