Lockdownನಲ್ಲಿ Jobless ಆಗಿದ್ರೆ ಚಿಂತೆ ಬಿಡಿ, ಈ ಜ್ಯೋತಿಷ್ಯ ಉಪಾಯಗಳನ್ನು ಅನುಸರಿಸಿ

ಕರೋನವೈರಸ್  (Coronavirus)ಜನರ ಆರೋಗ್ಯದ ಜೊತೆಗೆ ಅವರ ಉದ್ಯೋಗದ (Employment) ಮೇಲೂ ಪರಿಣಾಮ ಬೀರಿದೆ. ಲಾಕ್‌ಡೌನ್‌ನಲ್ಲಿ (Lockdown)ಕೆಲಸ ಹುಡುಕುವಾಗ ನಿಮಗೆ ತೊಂದರೆಯಾಗಿದ್ದರೆ, ಇಂದು ನಾವು ನಿಮಗೆ ಕೆಲವು ಜ್ಯೋತಿಷ್ಯ ಪರಿಹಾರಗಳ ಸೂಚಿಸುತ್ತಿದ್ದೇವೆ. ಇವುಗಳನ್ನು ಅನುಸರಿಸಿದರೆ ನೌಕರಿಯೇ ನಿಮ್ಮನ್ನು ಆರಿಸಿ ಬರಲಿದೆ.

  • Dec 03, 2020, 17:29 PM IST

ನವದೆಹಲಿ: ಕೊರೊನಾ ವೈರಸ್ ವಿಶ್ವಾದ್ಯಂತ ಹಾಹಾಕಾರ ಸೃಷ್ಟಿಸಿದೆ. ಈ ಮಾರಣಾಂತಿಕ ಕಾಯಿಲೆ ಮುಂದೆ ಇಡೀ ದೇಶವೇ ಅಸಹಾಯಕ್ ಸ್ಥತಿಯಲ್ಲಿ ನಿಂತಿದೆ. ಈ ಮಾರಕ ವೈರಸ್ ಜನರ ಆರೋಗ್ಯದ ಜೊತೆಗೆ ಜನರ ಉದ್ಯೋಗದ ಮೇಲೂ ಕೂಡ ಭಾರಿ ಪರಿಣಾಮ ಬೀರಿದೆ. ಇದೆ ವರ್ಷದ ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಹಲವು ಜನರು ತಮ್ಮ ನೌಕರಿಯಿಂದ ಕೈತೊಳೆದುಕೊಂಡಿದ್ದಾರೆ (Jobless) ಹಾಗೂ ಇಂದಿಗೂ ಕೂಡ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಇದನ್ನು ಓದಿ- ಉದ್ಯೋಗ ರಹಿತ ಬೆಳವಣಿಗೆ ಯುವಜನರಲ್ಲಿ ಅಶಾಂತಿಯನ್ನು ಸೃಷ್ಟಿಸಿದೆ- ಮನಮೋಹನ್ ಸಿಂಗ್

ಒಂದು ವೇಳೆ ನೀವೂ ಕೂಡ ನಿಮ್ಮ ನೌಕರಿ ಕಳೆದುಕೊಂಡು ಹೊಸ ನೌಕರಿಗಾಗಿ ಹುಡುಕಾಟ ನಡೆಸುತ್ತಿದ್ದರೆ. ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿರುವ ಈ ಉಪಾಯಗಳನ್ನು ಅನುಸರಿಸಿ. 

1 /4

ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಶನಿ ದೇವ್ ಅನುಗ್ರಹ ತುಂಬಾ ಮಹತ್ವದ್ದಾಗಿದೆ.  ಆದ್ದರಿಂದ ಪ್ರತಿ ಶನಿವಾರ ನೀವು ಶನಿ ದೇವ್ ವಿಗ್ರಹಕ್ಕೆ ತೈಲ ಮತ್ತು ದೀಪಗಳನ್ನು ಅರ್ಪಿಸಬೇಕು. ಅಲ್ಲದೆ ಶನಿ ದೇವ್ ಅವರ ಆರತಿಯನ್ನು ಹೇಳಲು ಮರೆಯಬೇಡಿ. ಇದನ್ನು ಮಾಡುವುದರಿಂದ, ನಿಮ್ಮ ಉದ್ಯೋಗ ಸಮಸ್ಯೆ ಶೀಘ್ರದಲ್ಲೇ  ಅಂತ್ಯವಾಗಲಿದೆ.

2 /4

ವಾಯುಪುತ್ರ ಆಂಜನೇಯ ಸಂಕಷ್ಟ ಪರಿಹಾರಕನಾಗಿದ್ದಾನೆ. ಯಾರಾದರೂ ತೊಂದರೆಯಲ್ಲಿದ್ದಾಗ, ಪವನ್ ಸೂತ ಹನುಮನನ್ನು ನೆನಪಿಸಿಕೊಳ್ಳುತ್ತಾರೆ. ಆದ್ದರಿಂದ, ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿದ ನಂತರ, ಖಂಡಿತವಾಗಿಯೂ ಹನುಮಾನ್ ಚಾಲಿಸಾ ಓದಿ. ಮಂಗಳವಾರ ಶ್ರೀ ಆಂಜನೇಯ ಸ್ವಾಮಿಗೆ ಪ್ರಸಾದ ಆರೋಪ್ಸಿ. ಇದನ್ನು ಮಾಡುವುದರಿಂದ, ನಿಮ್ಮ ಕೆಲಸದ ಸಮಸ್ಯೆ ಶೀಘ್ರದಲ್ಲೇ ಮುಗಿಯುತ್ತದೆ.

3 /4

ನಿತ್ಯ ಬೆಳಗ್ಗೆ ಎದ್ದಾಕ್ಷಣ ಸ್ನಾನ ಮಾಡಿ ಕುಲದೇವ ಹಾಗೂ ಕುಲದೇವಿಯ ಪೂಜೆ ಸಲ್ಲಿಸಲು ಮರೆಯದಿರಿ. ಇದರಿಂದ ಶೀಘ್ರದಲ್ಲಿಯೇ ನಿಮಗೆ ಮಾನಸಿಕ ನೆಮ್ಮದಿ ಸಿಗಲಿದೆ.

4 /4

ಸಂದರ್ಶನಕ್ಕೆ ಹೋಗುವಾಗ ಮೊದಲು ಬಲ ಹೆಜ್ಜೆಯನ್ನು ಮನೆಯಿಂದ ಹೊರಗಿಡಿ. ಅಲ್ಲದೆ, ಸಿಹಿ ತಿಂದು ಮನೆಯಿಂದ ಹೊರಡಿ. ಇದನ್ನು ಮಾಡುವುದರಿಂದ ನಿಮಗೆ ನಿಶ್ಚಿತವಾಗಿ ಯಶಸ್ಸು ಸಿಗಲಿದೆ.