Rahu Shukra Conjunction 2024: 18 ವರ್ಷಗಳ ಬಳಿಕ ಪರಸ್ಪರ ಹತ್ತಿರಕ್ಕೆ ಬರಲಿದ್ದಾರೆ ರಾಹು-ಶುಕ್ರ, ಧನಕುಬೇರ ಕೃಪೆಯಿಂದ ಈ ಜನರಿಗೆ ಭಾರಿ ಧನಲಾಭ!

Rahu Shukra Yuti 2024: ವೈದಿಕ ಪಂಚಾಗದ ಪ್ರಕಾರ ಸುದೀರ್ಘ 18 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ತನ್ನ ಮಿತ್ರ ಗ್ರಹ ರಾಹುವಿನ ಜೊತೆಗೆ ಶುಕ್ರ ಮೈತ್ರಿಗೆ ಮುಂಡಗಳಿದ್ದಾನೆ. ಇದರಿಂದ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಉಂಟಾಗಲಿದೆ. ಯಾವ ರಾಶಿಗಳಿಗೆ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ (Spiritual News In Kannada)
 

Venus Rahu Conjunction In Pieces 2024: ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಭೌತಿಕ ಸುಖ, ಸಂಪತ್ತು ಹಾಗೂ ಕಲೆಯ ಕಾರಕ ಎಂದು ಭಾವಿಸಲಾಗುತ್ತದೆ. ಆತ ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಪರಿವರ್ತಿಸುತ್ತಾನೆ. ಹೀಗಿರುವಾಗ ದೈತ್ಯರ ಗುರು ಮಾರ್ಚ್ 31, 2024ಕ್ಕೆ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಆದರೆ, ಮೀನ ರಾಶಿಯಲ್ಲಿ ಈಗಾಗಲೇ ಆತನ ಮಿತ್ರ ರಾಹು ವಿರಾಜಮಾನನಾಗಿರುವ ಕಾರಣ ಇಬ್ಬರ ಮೈತ್ರಿ ಅಲ್ಲಿ ನೆರವೇರಲಿದೆ. ಈ ಮೈತ್ರಿ ಸುದೀರ್ಘ 18 ವರ್ಷಗಳ ಬಳಿಕ ನೆರವರುತ್ತಿದ್ದು, ಏಪ್ರಿಲ್ 23, 2024ರವರೆಗೆ ಶುಕ್ರ ಮೀನ ರಾಶಿಯಲ್ಲಿಯೇ ಇರಲಿದ್ದಾನೆ. ರಾಹು ಶುಕ್ರರ ಈ ಮೈತ್ರಿ ಯಾರಿಗೆ ಲಾಭವನ್ನು ತಂದು ಕೊಡಲಿದೆ ತಿಳಿದುಕೊಳ್ಳೋಣ ಬನ್ನಿ (Spiritual News In Kannada)

 

ಇದನ್ನೂ ಓದಿ-Navpancham Rajyog 2024: ಶೀಘ್ರದಲ್ಲೇ ಕೇತು-ಗುರುವಿನ ಕೃಪೆಯಿಂದ ನವಪಂಚಮ ಯೋಗ ರಚನೆ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

Rahu Shukra Yuti 2024: ವೈದಿಕ ಪಂಚಾಗದ ಪ್ರಕಾರ ಸುದೀರ್ಘ 18 ವರ್ಷಗಳ ಬಳಿಕ ಮೀನ ರಾಶಿಯಲ್ಲಿ ತನ್ನ ಮಿತ್ರ ಗ್ರಹ ರಾಹುವಿನ ಜೊತೆಗೆ ಶುಕ್ರ ಮೈತ್ರಿಗೆ ಮುಂಡಗಳಿದ್ದಾನೆ. ಇದರಿಂದ ಕೆಲ ರಾಶಿಗಳ ಜಾತಕದವರಿಗೆ ವಿಶೇಷ ಲಾಭ ಉಂಟಾಗಲಿದೆ. ಯಾವ ರಾಶಿಗಳಿಗೆ ಲಾಭ ಸಿಗಲಿದೆ ತಿಳಿದುಕೊಳ್ಳೋಣ ಬನ್ನಿ (Spiritual News In Kannada)  

2 /7

ವೃಷಭ ರಾಶಿ: ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ರಾಹು ಶುಕ್ರರ ಯುತಿ ನೆರವೇರುತ್ತಿದೆ. ಇದರಿಂದ ನಿಮಗೆ ವಿಶೇಷ ಲಾಭ ಸಿಗಲಿದೆ. ಹೊಸದೆನಾದರೊಂದು ಕಲಿಯುವ ಅವಕಾಶ ಸಿಗಲಿದೆ. ನಿಮ್ಮಲ್ಲಿ ಒಂದು ಸಣ್ಣ ಬದಲಾವಣೆ ನಿಮಗೆ ಉತ್ತಮ ಅನುಭವ ನೀಡಲಿದೆ, ಕಾರ್ಯಕ್ಷೇತ್ರದ ಕುರಿತು ಹೇಳುವುದಾದರೆ, ಪ್ರಮೋಷನ್, ವೇತನ ವೃದ್ಧಿಯಿಂದ ನಿಮಗೆ ಅಪಾರ ಲಾಭ ಸಿಗಲಿದೆ. ನೀವು ನಿಮ್ಮ ಉದ್ದೇಶವನ್ನು ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ದೀರ್ಘಕಾಲದಿಂದ ನಡೆದುಕೊಂಡು ಬಂದ ಒತ್ತಡ ನಿವಾರಣೆಯಾಗಿ ಮಾನಸಿಕ ಶಾಂತಿ ನಿಮ್ಮದಾಗಲಿದೆ. ಕಾಯಿಲೆಗಳಿಂದಲೂ ಕೂಡ ನಿಮಗೆ ಮುಕ್ತಿ ಸಿಗಲಿದೆ. ಇದರಿಂದ ನಿಮ್ಮೊಳಗೆ ಹೊಸ ಚೈತನ್ಯ ತುಂಬಿರಲಿದೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳಿಗೂ ಕೂಡ ಶಿಕ್ಷಣದಲ್ಲಿ ಲಾಭ ಸಿಗಲಿದೆ.   

3 /7

ಮಿಥುನ ರಾಶಿ: ಈ ಮೈತ್ರಿ ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ನಿರ್ಮಾಣಗೊಳ್ಳುತ್ತಿದೆ. ಹೀಗಿರುವಾಗ ನಿಮಗೆ ಸುಖ-ಸಮೃದ್ಧಿ, ಧನ-ಸಂಪತ್ತು  ಪ್ರಾಪ್ತಿಯಾಗಲಿದೆ. ವಾಹನ ಮನೆ ಖರೀದಿಸುವ ನಿಮ್ಮ ಕನಸು ನನಸಾಗಲಿದೆ. ಇದರ ಜೊತೆಗೆ ಬಿಸ್ನೆಸ್ ಹಾಗೂ ನೌಕರಿಯಲ್ಲಿ ಲಾಭ ಸಿಗಲಿದೆ. ಹೊಸ ನೌಕರಿಯ ಹುಡುಕಾಟದಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಉನ್ನತ ಶಿಕ್ಷಣ ಪಡೆದುಕೊಳ್ಳುವ ನಿಮ್ಮ ಕನಸು ನನಸಾಗಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ನಿಮಗೆ ಸಿಗಲಿದೆ. ಮಾತಿನ ಕಾರಣ ನೀವು ಯಾರೊಬ್ಬರಿಗೆ ಪ್ರೇರಣೆಯಾಗುವಿರಿ. ನಿಮ್ಮ ರಚನಾತ್ಮಕ ಶೈಲಿ ಹಾಗೂ ಏಕಾಗ್ರತೆ ಹೆಚ್ಚಾಗಲಿದೆ. ಪ್ರತಿಭೆ ಹೊರಹೊಮ್ಮಲಿದೆ.   

4 /7

ಕರ್ಕ ರಾಶಿ: ನಿಮ್ಮ ಜಾತಕದ ನವಮ ಭಾವದಲ್ಲಿ ಈ ಮೈತ್ರಿ ರಚನೆಯಾಗುತ್ತಿದೆ. ಇದರಿಂದ ಈ ರಾಶಿಗಳ ಜಾತಕದವರಿಗೆ ಮಾನಸಿಕ, ಕೌಟುಂಬಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಲಾಭ ಸಿಗಲಿದೆ. ಹೊಸ ಸಂಪತ್ತು ಪಡೆಯುವ ಯೋಗ ರಚನೆಯಾಗುತ್ತಿದೆ. ಇದಕ್ಕಾಗಿ ಹಿರಿಯರ ಬೆಂಬಲ ನಿಮಗೆ ಸಿಗಲಿದೆ. ಇದರಿಂದ ಭವಿಷ್ಯದಲ್ಲಿ ನಿಮಗೆ ಲಾಭ ಸಿಗಲಿದೆ. ಕೆಲಸದ ನಿಮಿತ್ತ ಸಣ್ಣಪುಟ್ಟ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ತೀರ್ಥಯಾತ್ರೆಯನ್ನು ಕೂಡ ನೀವು ಕೈಗೊಳ್ಳುವ ಸಾಧ್ಯತೆ ಇದೆ. ನಿಮ್ಮೊಳಗೆ ಸಕಾರಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗಲಿದೆ.   

5 /7

ಕುಂಭ ರಾಶಿ: ಈ ಮೈತ್ರಿ ನಿಮ್ಮ ಗೋಚರ ಜಾತಕದ ಧನ ಹಾಗೂ ವಾಣಿಯ ಭಾವದಲ್ಲಿ ರಚನೆಯಾಗುತ್ತಿದೆ. ಇದರಿಂದ ನಿಮಗೆ ಈ ಅವಧಿಯಲ್ಲಿ ಆಕಸ್ಮಿಕ ಧನಲಾಭ ಉಂಟಾಗಲಿದೆ. ಈ ಅವಧಿಯಲ್ಲಿ ನಿಮಗೆ ವಿಭಿನ್ನ ಕ್ಷೇತ್ರಗಳಿಂದ ಲಾಭ ಸಿಗಲಿದೆ. ಹೊಸ ಸಂಪರ್ಕಗಳನ್ನು ನೀವು ಮಾಡಿಕೊಳ್ಳುವಿರಿ. ಆದಾಯದ ಮೂಲಗಳು ಹೆಚ್ಚಾಗಲಿವೆ. ನೀವು ಅಂದುಕೊಂಡ ಯೋಜನೆಗಳು ಯಶಸ್ವಿಯಾಗಲಿವೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ.   

6 /7

ಕನ್ಯಾ ರಾಶಿ: ಈ ಮೈತ್ರಿ ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ರಚನೆಯಾಗಲಿದೆ. ಹೀಗಾಗಿ ಈ ಅವಧಿಯಲ್ಲಿ ವಿವಾಹಿತರ ವೈವಾಹಿಕ ಜೀವನ ಅದ್ಭುತವಾಗಿರಲಿದೆ. ಸಂಗಾತಿಯ ಬೆಂಬಲ ನಿಮಗೆ ಸಿಗಲಿದೆ. ಪ್ರೇಮ ಸಂಬಂಧಗಳೂ ಕೂಡ ಅಧಿಕ ಗಟ್ಟಿಯಾಗಲಿವೆ. ಸಂಗಾತಿ ಜೊತೆಗೆ ಸುಮಧುರ ಕಾಲ ಕಳೆಯುವಿರಿ. ಪಾಟ್ನರ್ಶಿಪ್ ವ್ಯವಹಾರಗಳಲ್ಲಿಯೂ ಕೂಡ ಲಾಭ ನಿಮ್ಮದಾಗಲಿದೆ. ಶುಕ್ರನ ಕೃಪೆಯಿಂದ ಅವಿವಾಹಿಯರಿಗೆ ವಿವಾಹ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ. ಪ್ರಭಾವಶಾಲಿ ವ್ಯಕ್ತಿಗಳ ಜೊತೆಗಿನ ಒಡನಾಟದಿಂದ ನಿಮಗೆ ಆರ್ಥಿಕ ಲಾಭ ಸಿಗಲಿದೆ.   

7 /7

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)