Shani Jayanti 2024: ಶನಿ ಕಾಟದಿಂದ ಪರಿಹಾರಕ್ಕಾಗಿ ಶನಿ ಜಯಂತಿಯಂದು ಈ ಕೆಲಸಗಳನ್ನು ಮಾಡಿ

Shani Jayanti 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದಾಗ ವ್ಯಕ್ತಿಯು ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಶನಿ ಜಯಂತಿಯ ದಿನ ಕೆಲವು ಪರಿಹಾರಗಳನ್ನು ಕೈಗೊಳ್ಳುವುದರಿಂದ ಇದರಿಂದ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /9

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯು ಶನಿ ಸಾಡೇಸಾತಿ-ಶನಿ ಧೈಯಾ ಪ್ರಭಾವಕ್ಕೆ ಒಳಗಾಗಿರುವಾಗ ಜೀವನದ ಪ್ರತಿ ಹಂತದಲ್ಲೂ ಹಲವು ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಬೇಕಾಗುತ್ತದೆ. ಆದರೆ, ಕೆಲವು ಉಪಾಯಗಳನ್ನು ಮಾಡುವುದರಿಂದ ಇದರಿಂದ ಪರಿಹಾರ ಪಡೆಯಬಹುದು. ಇದಕ್ಕೆ ಶನಿ ಜಯಂತಿ ತುಂಬಾ ಪ್ರಾಶಸ್ತ್ಯವಾದ ದಿನ ಎನ್ನಲಾಗುತ್ತದೆ. 

2 /9

ಜ್ಯೇಷ್ಠ ಅಮಾವಾಸ್ಯೆಯ ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ  6 ಜೂನ್ 2024, ಗುರುವಾರ ಶನಿ ಜಯಂತಿ ಆಚರಣೆ ಇರಲಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಇದನ್ನು ಶನಿ ದೇವನ ಜನ್ಮ ದಿನ ಎನ್ನಲಾಗುತ್ತದೆ. 

3 /9

ಶನಿ ಜಯಂತಿಯಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಶನಿ ಸಾಡೇಸಾತಿ-ಶನಿ ಧೈಯಾ ಪ್ರಭಾವ ಕಡಿಮೆ ಆಗಿ, ಶನಿ ಕಾಟದಿಂದ ಮುಕ್ತಿ ದೊರೆಯಲಿದೆ ಎನ್ನಲಾಗುತ್ತದೆ. ಅಂತಹ ಕೆಲವು ಉಪಾಯಗಳೆಂದರೆ... 

4 /9

ಶನಿ ಜಯಂತಿಯಂದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ನಿಯಮಾನುಸಾರ ಶನಿದೇವನಿಗೆ ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳಿನಿಂದ ಅಭಿಷೇಕ ಮಾಡಿ ಪೂಜಿಸಿದರೆ ಶುಭವಾಗುತ್ತದೆ. 

5 /9

ಶನಿ ಜಯಂತಿಯಂದು ಶನಿಮಹಾತ್ಮನ ದೇವಸ್ಥಾನಕ್ಕೆ ಹೋಗಿ ಅರಳಿ ಮರಕ್ಕೆ ನೀರು ಅರ್ಪಿಸಿ. ಶನಿ ದೇವನ ಮಂತ್ರಗಳನ್ನು ಪಠಿಸಿದರೆ ಶನಿ ಸಾಡೇಸಾತಿ-ಧೈಯಾ ಪ್ರಭಾವ ಕಡಿಮೆಯಾಗುತ್ತದೆ.   

6 /9

ಶನಿ ಜಯಂತಿಯಂದು ನೀವು ಸಾಸಿವೆ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ಕಪ್ಪು ನಾಯಿಗೆ ನೀಡಿ. ಸಾಧ್ಯವಾದರೆ, ಕಾಗೆಗಳಿಗೂ ಈ ದಿನ ಆಹಾರ ನೀಡಿ. ಇದರಿಂದ ಶನಿ ದೋಷ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. 

7 /9

ಶನಿ ದೇವ ಹನುಮನ ಭಕ್ತರಿಗೆ ಎಂದಿಗೂ ತೊಂದರೆ ನೀಡುವುದಿಲ್ಲ ಎಂದು ನಂಬಲಾಗಿದೆ. ಹಾಗಾಗಿ, ಶನಿ ಜಯಂತಿಯಂದು ಹನುಮಾನ್ ಚಾಲೀಸಾ ಅಥವಾ ಸುಂದರಕಾಂಡವನ್ನು ಪಠಿಸುವುದರಿಂದ ಶನಿ ದೋಷ ಕಡಿಮೆಯಾಗುತ್ತದೆ. 

8 /9

ಶನಿ ಜಯಂತಿಯಂದು ಬಡವರ ಸೇವೆ, ನಿಮ್ಮ ಕೈಲಾದದನ್ನು ದಾನ ಮಾಡುವುದರಿಂದಲೂ ಶನಿ ಕಾಟ ತಪ್ಪಿ, ಸಂಕಷ್ಟಗಳಿಂದ ಪರಿಹಾರ ಪಡೆಯಬಹುದು. 

9 /9

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.