See Photos: ಲಾಕ್‌ಡೌನ್‌ನಲ್ಲಿ ಸಪ್ತಪದಿ ತುಳಿದ 8 ಸ್ಟಾರ್ ಜೋಡಿಗಳು

ಕೋವಿಡ್ -19 ರ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಬಂಧಿಯಾದ 8 ಸ್ಟಾರ್ ಜೋಡಿಗಳ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

  • Aug 11, 2020, 12:00 PM IST

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕದಿಂದ ಉಂಟಾಗುವ ಲಾಕ್‌ಡೌನ್ ಹೊರತಾಗಿಯೂ, ಅನೇಕ ಸ್ಟಾರ್ ಜೋಡಿಗಳು ತಮ್ಮ ಸಂಗಾತಿಯನ್ನು ಆರಿಸಿಕೊಂಡಿದ್ದಾರೆ. ಕೋವಿಡ್ -19 ರ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಬಂಧಿಯಾದ 8 ಸ್ಟಾರ್ ಜೋಡಿಗಳ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

1 /8

'ಬಾಹುಬಲಿ' ತಾರೆ ಆಗಸ್ಟ್ 8 ರಂದು ಮಿಹಿಕಾ ಬಜಾಜ್ ಅವರನ್ನು ಆಪ್ತ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಈ ಮನಮೋಹಕ ಮೈತ್ರಿ ಹೈದರಾಬಾದ್‌ನ ರಮಾನೈಡು ಸ್ಟುಡಿಯೋದಲ್ಲಿ ನಡೆಯಿತು. ಮೇ ತಿಂಗಳ ಆರಂಭದಲ್ಲಿ ರಾಣಾ ಮಿಹಿಕಾ ಅವರೊಂದಿಗಿನ ಸಂಬಂಧವನ್ನು ಬಹಿರಂಗಪಡಿಸಿದರು.

2 /8

ನಟಿ ಪ್ರಾಚಿ ತೆಹ್ಲಾನ್ ದೆಹಲಿ ಉದ್ಯಮಿ ರೋಹಿತ್ ಸರೋಹಾ ಅವರನ್ನು ಆಗಸ್ಟ್ 7 ರಂದು ನವದೆಹಲಿಯಲ್ಲಿ ವಿವಾಹವಾದರು. ಸಮಾರಂಭದಲ್ಲಿ ಪ್ರತಿಯೊಂದು ಭದ್ರತಾ ಕ್ರಮಗಳನ್ನು ಖಚಿತಪಡಿಸಲಾಗಿದೆ ಎಂದು ಪ್ರಾಚಿ ಹೇಳಿದರು. 'ಮದುವೆಯಲ್ಲಿ ಪ್ರತಿಯೊಬ್ಬರ ಆರೋಗ್ಯ ಮತ್ತು ಸುರಕ್ಷತೆ ನನಗೆ ಬಹಳ ಮುಖ್ಯವಾಗಿತ್ತು. ಅದಕ್ಕಾಗಿಯೇ ನಾವು ಸಾಕಷ್ಟು ದೊಡ್ಡದಾದ ಸ್ಥಳವನ್ನು ಕಾಯ್ದಿರಿಸಿದ್ದೇವೆ. ಅತಿಥಿಗಳು ಪರಸ್ಪರ ಹತ್ತಿರವಾಗದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಇದನ್ನು ಮಾಡಲಾಗಿದೆ ಎಂದವರು ಹೇಳಿದರು.

3 /8

'ಸಸುರಲ್ ಸಿಮರ್ ಕಾ' ನಟ ಮನೀಶ್ ರೈಸಿಂಗ್ ಅವರು ಜೂನ್ 30 ರಂದು ತಮ್ಮ ಲೇಡಿ ಲವ್ ಸಂಗೀತ ಚೌಹಾಣ್ ಅವರೊಂದಿಗೆ ವಿವಾಹವಾದರು. ಮುಂಬೈನ ಗುರುದ್ವಾರದಲ್ಲಿ ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವಿವಾಹವಾದರು.

4 /8

ಟೆಲಿವಿಷನ್ ತಾರೆಗಳಾದ ಪೂಜಾ ಬ್ಯಾನರ್ಜಿ ಮತ್ತು ಕುನಾಲ್ ವರ್ಮಾ ಅವರು ಏಪ್ರಿಲ್‌ನಲ್ಲಿ ಅದ್ದೂರಿ ವಿವಾಹವನ್ನು ಯೋಜಿಸಿದ್ದರು, ಆದರೆ ಕರೋನ ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮುಂದೂಡಬೇಕಾಯಿತು. ಆದರೆ ಒಂದೂವರೆ ತಿಂಗಳ ಹಿಂದೆ ದಂಪತಿಗಳು ರಿಜಿಸ್ಟರ್ ಮದುವೆಯಾಗಿದ್ದರು ಎಂದು ಪೂಜಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದ್ದಾರೆ. ಅವರು ತಮ್ಮ ಮದುವೆಗೆ ನಿಗದಿಪಡಿಸಿದ ಮೊತ್ತವನ್ನು ದಾನ ಮಾಡಿದರು.

5 /8

ತೆಲುಗು ನಟ ನಿತಿನ್ ಜುಲೈನಲ್ಲಿ ಹೈದರಾಬಾದ್ನ ಫೈವ್ ಸ್ಟಾರ್ ಹೋಟೆಲ್ನಲ್ಲಿ ಶಾಲಿನಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

6 /8

'ಸಾಹೋ' ನಿರ್ದೇಶಕ ಸುಜಿತ್ ರೆಡ್ಡಿ ಆಗಸ್ಟ್ 2 ರಂದು ಹೈದರಾಬಾದ್‌ನಲ್ಲಿ ಪ್ರಾವಲ್ಲಿಕಾ ಅವರನ್ನು ವಿವಾಹವಾದರು. ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. 

7 /8

ತೆಲುಗು ನಟ ನಿಖಿಲ್ ಸಿದ್ಧಾರ್ಥ್ ತಮ್ಮ ದೀರ್ಘಕಾಲದ ಗೆಳತಿ ಪಲ್ಲವಿ ವರ್ಮಾ ಅವರನ್ನು ಮೇ ತಿಂಗಳಲ್ಲಿ ಹೈದರಾಬಾದ್‌ನ ತೋಟದ ಮನೆಯೊಂದರಲ್ಲಿ ವಿವಾಹವಾದರು. ಈ ದಂಪತಿಗಳು ಈ ಹಿಂದೆ ಏಪ್ರಿಲ್‌ನಲ್ಲಿ ಮದುವೆಯಾಗಲು ಯೋಜಿಸಿದ್ದರು, ಆದರೆ ಲಾಕ್‌ಡೌನ್ ಆಗಿದ್ದರಿಂದ ಮದುವೆಯನ್ನು ಮುಂದೂಡಬೇಕಾಯಿತು. ವಧು-ವರರ ಕುಟುಂಬದ ಕೆಲವೇ ಸದಸ್ಯರು ಮದುವೆಗೆ ಹಾಜರಾಗಿದ್ದರು.  

8 /8

ಕನ್ನಡ ನಟ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅವರು ಏಪ್ರಿಲ್‌ನಲ್ಲಿ ರಾಮನಾಗರ ಜಿಲ್ಲೆಯ ಬಿಡದಿ ಬಳಿಯ ತೋಟದ ಮನೆಯಲ್ಲಿ ಲಾಕ್‌ಡೌನ್ ಮಧ್ಯೆ ರೇವತಿಯನ್ನು ವಿವಾಹವಾದರು. (ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಿಂದ ತೆಗೆದುಕೊಳ್ಳಲಾಗಿದೆ) (ಐಎಎನ್‌ಎಸ್‌ನಿಂದ ಇನ್‌ಪುಟ್)