Vastu Tips For New Year 2021: ನೂತನ ವರ್ಷದಲ್ಲಿ ಮನೆಗೆ ಈ 10 ವಸ್ತುಗಳನ್ನು ಮನೆಗೆ ತನ್ನಿ, ಧನ ಲಾಭವಾಗಲಿದೆ

ವರ್ಷ 2021 ರ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಬರುತ್ತಿರುವ ನೂತನ ವರ್ಷ ತಮ್ಮ ಪಾಲಿಗೆ ಹೊಸ ಆಸೆ ಆಕಾಂಕ್ಷೆಗಳನ್ನು ತಮ್ಮ ಪಾಲಿಗೆ ಹೊತ್ತು ತರಲಿ ಎಂಬುದು ಎಲ್ಲರ ಬಯಕೆಯಾಗಿರುತ್ತದೆ. ವಾಸ್ತುಶಾಸ್ತ್ರದಲ್ಲಿ ಸೂಚಿಸಲಾಗಿರುವ ಈ 10 ಶುಭ ವಸ್ತುಗಳನ್ನು ನೀವೂ ಕೂಡ ಮನೆಗೆ ತಂದರೆ, ನೂತನ ವರ್ಷದಲ್ಲಿ ದೇವಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲಿದೆ ಎನ್ನಲಾಗುತ್ತದೆ.

  • Dec 08, 2020, 19:55 PM IST

ನವದೆಹಲಿ: 2021 ಅಂದರೆ ನೂತನ ವರ್ಷ (New Year 2021)ದ ಆಗಮನಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಪ್ರತಿಯೊಬ್ಬರೂ ನೂತನ ವರ್ಷಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಈ ಅವಧಿಯಲ್ಲಿ ಎಲ್ಲರಲ್ಲೂ ಹೊಸ ಜೋಶ್ ತುಂಬಿರುತ್ತದೆ. ನೂತನ ವರ್ಷದಲ್ಲಿ ಜನರು ತಮ್ಮ ಕೆಟ್ಟ ಚಟಗಳನ್ನು ತ್ಯಜಿಸುವ ಸಂಕಲ್ಪ ಮಾಡುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ವಾಸ್ತುಶಾಸ್ತ್ರ ತನ್ನದೇ ಆದ ಮಹತ್ವ ಹೊಂದಿದೆ. ವಾಸ್ತುಶಾಸ್ತ್ರದಲ್ಲಿ ಇಂತಹ ಹಲವು ವಸ್ತುಗಳ ಕುರಿತು ಉಲ್ಲೇಖವಿದ್ದು, ಇವು ಮನೆಯಲ್ಲಿ ಶುಭ-ಅಶುಭಗಳಿಗೆ ಕಾರಣವಾಗುತ್ತವೆ. ಇಂದು ನಾವು ಅಂತಹುದೇ 10 ಶುಭ ಸಂಗತಿಗಳ ಕುರಿತು ನಿಮಗೆ ಹೇಳಲಿದ್ದೇವೆ. ನೂತನ ವರ್ಷದಲ್ಲಿ ಇವುಗಳನ್ನು ಮನೆಗೆ ತಂದು ಇಡುವುದರಿಂದ ಸುಖ-ಸಮೃದ್ಧಿ ನಿಮ್ಮ ಮನೆಯಲ್ಲಿ ನೆಲೆಸುತ್ತದೆ.

 

ಇದನ್ನು ಓದಿ- ಬೆಂಗಳೂರಿಗರಿಗೆ ಬಿಗ್ ಶಾಕ್: ‘ನ್ಯೂ ಇಯರ್’ ಮೋಜು ಮಸ್ತಿಗೆ BBMP ಬ್ರೇಕ್..!

1 /10

ವಾಸ್ತು ಶಾಸ್ತ್ರದಲ್ಲಿ ಲೋಹದ ಆಮೆ ​​ಮನೆಯಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗಿದೆ. ಆಮೆ ಬೆಳ್ಳಿ, ಹಿತ್ತಾಳೆ ಅಥವಾ ಕಂಚಿನಿಂದ ತಯಾರಾಗಿರಬೇಕು. ಮಿಶ್ರ ಆಮೆ ಉತ್ತರ ದಿಕ್ಕಿನಲ್ಲಿ ಮಾತ್ರ ಇರಿಸಿ. ಇದೇ ವೇಳೆ ನಿಮ್ಮ ಮನೆಯಲ್ಲಿ ಮರದ ಅಥವಾ ಮಣ್ಣಿನ ಆಮೆ ಇದ್ದರೆ, ತಕ್ಷಣ ಅದನ್ನು ಮನೆಯಿಂದ ಹೊರಹಾಕಿ. ಲೋಹದ ಆಮೆ ​​ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಹಣಕಾಸಿನ ಬಿಕ್ಕಟ್ಟು ನಿವಾರಣೆಯಾಗುತ್ತದೆ.

2 /10

ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣ ದಿಕ್ಕಿನ ಶಂಖ ಮತ್ತು ಮುತ್ತು ಚಿಪ್ಪನ್ನು ಇರಿಸುವುದು ಬಹಳ ಶುಭವಾಗಿದೆ. ಈ ಶಂಖವನ್ನುಪೂಜಿಸಿ ಬೀರು ಅಥವಾ ತಿಜೋರಿಯಲ್ಲಿ ಹಣವನ್ನು ಇಡುವ ಜಾಗದಲ್ಲಿ ಇರಿಸಿ. ಇದು ಆರ್ಥಿಕ ವೃದ್ಧಿಗೆ ಕಾರಣವಾಗುತ್ತದೆ.

3 /10

ವಾಸ್ತು ಶಾಸ್ತ್ರದಲ್ಲಿ, ಘನ ಬೆಳ್ಳಿ ಆನೆಯ ಮಹತ್ವವನ್ನು ತಿಳಿಸಲಾಗಿದೆ. ಬೆಳ್ಳಿ ಆನೆಯನ್ನು ಮನೆಯಲ್ಲಿ ಇಡುವುದು ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡುತ್ತದೆ ಮತ್ತು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ದಾರಿಗಳನ್ನು ತೆರೆಯುತ್ತದೆ.

4 /10

ವಾಸ್ತು ಶಾಸ್ತ್ರದ ಪ್ರಕಾರ, ಗಿಳಿಯನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಗಿಳಿಯ ಚಿತ್ರ ಅಥವಾ ಪ್ರತಿಮೆಯನ್ನು ಮನೆಯಲ್ಲಿ ಇರಿಸಿ. ಗಿಳಿಯ ಚಿತ್ರ ಅಥವಾ ಪ್ರತಿಮೆಯನ್ನು ಅನ್ವಯಿಸುವುದರಿಂದ ಮನೆಯಿಂದ ಅನಾರೋಗ್ಯ, ಹತಾಶೆ ಮತ್ತು ಬಡತನವನ್ನು ದೂರಗೊಳಿಸುತ್ತದೆ.

5 /10

ವಾಸ್ತು ಶಾಸ್ತ್ರದಲ್ಲಿ, ನವಿಲು ಗರಿಯನ್ನು  ಅದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ನವಿಲು ಗರಿಗಳನ್ನು ಮನೆಯಲ್ಲಿ ಇಡುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಯಾವಾಗಲೂ 2-3 ನವಿಲು ಗರಿಗಳನ್ನು  ಮನೆಯಲ್ಲಿ ಇರಿಸಿ.

6 /10

ಸ್ವಸ್ತಿಕವನ್ನು ಶ್ರೀಗಣೇಶನ ಪ್ರತೀಕ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಹಾಗೂ ಧಾರ್ಮಿಕ ಮಾನ್ಯತೆಗಳ ಅನುಸಾರ ಮನೆಯಲ್ಲಿ ಸ್ವಸ್ತಿಕದ ಚಿತ್ರ ಇರಿಸುವುದರಿಂದ ಎಲ್ಲಾ ಇಚ್ಛೆಗಳು ಪೂರ್ಣಗೊಳ್ಳುತ್ತವೆ ಹಾಗೂ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.

7 /10

ವಾಸ್ತುಶಾಸ್ತ್ರದಲ್ಲಿ ಕಮಲಾಗಟ್ಟೆಗೆ ಭಾರಿ ಮಹತ್ವವಿದೆ. ಇದನ್ನು ಮನೆಯಲ್ಲಿ ಇರಿಸುವುದರಿಂದ ದೇವಿ ಲಕ್ಷ್ಮಿ ಪ್ರಸನ್ನಲಾಗುತ್ತಾಳೆ ಹಾಗೂ ಧನವೃಷ್ಟಿಯಾಗುತ್ತದೆ. ಮನೆಯ ಪೂಜಾ ಕೊಠಡಿಯಲ್ಲಿ ಕಮಲಗಟ್ಟೆಯ ಮಾಲೆಯನ್ನಿರಿಸಿ.

8 /10

ವಾಸ್ತುಶಾಸ್ತ್ರದ ಪ್ರಕಾರ ಲಘು ತೆಂಗಿನಕಾಯಿಯನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿರಿಸಿದರೆ ಧನವೃದ್ಧಿ ಮತ್ತು ಸುಖ-ಸಮೃದ್ಧಿ ಮನೆಯಲ್ಲಿ ನೆಲೆಸುತ್ತವೆ. ಜೊತೆಗೆ ಇತರೆ ಸಮಸ್ಯೆಗಳೂ ಕೂಡ ನಿವಾರಣೆಯಾಗುತ್ತವೆ.

9 /10

ಗೋಮತಿ ಚಕ್ರ ಗೋಮತಿ ನದಿಯಲ್ಲಿ ಸಿಗುತ್ತವೆ. ವಾಸ್ತುಶಾಸ್ತ್ರದಲ್ಲಿ ಇದನ್ನು ತುಂಬಾ ಶುಭಕಾರಿ ಎಂದು ಹೇಳಲಾಗಿದೆ. ಮನೆಯಲ್ಲಿ ಗೋಮತಿ ಚಕ್ರ ಇಡುವುದರಿಂದ ಶತ್ರುಗಳಿಂದ ಮುಕ್ತಿ ಸಿಗುತ್ತದೆ ಎನ್ನಲಾಗುತ್ತದೆ. ಈ ಚಕ್ರವನ್ನು ಹಳದಿ ಬಣ್ಣದ ವಸ್ತ್ರದಲ್ಲಿ ಕಟ್ಟಿ ಬೀರು ಅಥವಾ ತಿಜೋರಿಯಲ್ಲಿಟ್ಟರೆ ಮನೆಯಲ್ಲಿ ಧನವೃದ್ಧಿಯಾಗುತ್ತದೆ.

10 /10

ವಾಸ್ತುಶಾಸ್ತ್ರದ ಪ್ರಕಾರ ಪಿರಮಿಡ್ ಅನ್ನು ಮನೆಯಲ್ಲಿರಿಸುವುದು ಲಾಭಕಾರಿಯಾಗಿದೆ. ಮನೆಯಲ್ಲಿ ಇದನ್ನು ಇರಿಸುವುದರಿಂದ ನಕಾರಾತ್ಮಕ ಶಕ್ತಿ ಮನೆಪ್ರವೇಶಿಸುವುದಿಲ್ಲ. ಇದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.