ಹೊಸ ವರ್ಷದಲ್ಲಿ ಈ ರಾಶಿಯವರ ಬಾಳಲ್ಲಿ ಸಂತೋಷದ ಹೊನಲು ಹರಿಸಲಿದ್ದಾರೆ ಗುರು, ಶನಿ, ರಾಹು- ಕೇತು

ರಾಹು ಮತ್ತು ಕೇತು 18 ತಿಂಗಳ ಬಳಿಕ, ಶನಿಯು ಎರಡೂವರೆ ವರ್ಷಗಳ ಬಳಿಕ ಮತ್ತು ಗುರು 12 ತಿಂಗಳ ಅವಧಿಯಲ್ಲಿ ರಾಶಿಯನ್ನು ಬದಲಾಯಿಸುತ್ತಾರೆ.ಈ ಗ್ರಹಗಳ ಸ್ಥಾನ ಪಲ್ಲಟನೆಯು ವ್ಯಕ್ತಿಯ ಜಾತಕದ ಮೇಲೆ ಪರಿಣಾಮ ಬೀರುತ್ತದೆ. 

Written by - Ranjitha R K | Last Updated : Dec 23, 2022, 01:02 PM IST
  • ಹೊಸ ವರ್ಷದಲ್ಲಿ ಅನೇಕ ಗ್ರಹಗಳು ತಮ್ಮ ಪಥವನ್ನು ಬದಲಿಸಲಿವೆ.
  • ಯಾವ ಗ್ರಹವು ಯಾವಾಗ ತನ್ನ ಪಥವನ್ನು ಬದಲಾಯಿಸಲಿದೆ
  • ಯಾರಿಗೆ ಲಾಭ ಕರುಣಿಸಲಿದ್ದಾರೆ ಶನಿ ರಾಹು ಕೇತು
ಹೊಸ ವರ್ಷದಲ್ಲಿ ಈ ರಾಶಿಯವರ ಬಾಳಲ್ಲಿ ಸಂತೋಷದ ಹೊನಲು ಹರಿಸಲಿದ್ದಾರೆ ಗುರು, ಶನಿ, ರಾಹು- ಕೇತು title=
Guru-Rahu-Ketu Gochar

ಬೆಂಗಳೂರು : ಹೊಸ ವರ್ಷದಲ್ಲಿ ಅನೇಕ ಗ್ರಹಗಳು ತಮ್ಮ ಪಥವನ್ನು ಬದಲಿಸಲಿವೆ. ಶನಿ ಮತ್ತು ಗುರು ಗ್ರಹ ವರ್ಷದ ಆರಂಭದಲ್ಲಿಯೇ ತಮ್ಮ ರಾಶಿಯನ್ನು ಬದಲಾಯಿಸಲಿವೆ. ಇದು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ.  ಅದರಲ್ಲೂ  ಶನಿ ಮತ್ತು ರಾಹು ತಮ್ಮ ರಾಶಿಯನ್ನು ಬದಲಾಯಿಸಿದಾಗ ವ್ಯಕ್ತಿಯ ಜಾತಕದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ರಾಹು ಮತ್ತು ಕೇತು 18 ತಿಂಗಳ ಬಳಿಕ, ಶನಿಯು ಎರಡೂವರೆ ವರ್ಷಗಳ ಬಳಿಕ ಮತ್ತು ಗುರು 12 ತಿಂಗಳ ಅವಧಿಯಲ್ಲಿ ರಾಶಿಯನ್ನು ಬದಲಾಯಿಸುತ್ತಾರೆ. .

ಯಾವ ಗ್ರಹವು ಯಾವಾಗ ತನ್ನ ಪಥವನ್ನು ಬದಲಾಯಿಸಲಿದೆ : 
2023 ರ ಏಪ್ರಿಲ್‌ನಲ್ಲಿ, ಗುರುವು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. 
ಜನವರಿ 17 ರಂದು ಶನಿಯು ರಾಶಿ ಬದಲಾಯಿಸುತ್ತಾನೆ.
ಅಕ್ಟೋಬರ್‌ನಲ್ಲಿ ರಾಹು ಮೀನ ರಾಶಿಗೆ ಪ್ರವೇಶಿಸುತ್ತಾನೆ. 
ಹಾಗೆಯೇ ಕೇತು ಕೂಡಾ ಅಕ್ಟೋಬರ್ 30 ರಂದು ಕನ್ಯಾರಾಶಿ ಪ್ರವೇಶಿಸುತ್ತಾನೆ. 

ಇದನ್ನೂ ಓದಿ : Paush Amavasya: ಪುಷ್ಯ ಅಮಾವಾಸ್ಯೆಯಂದು ಈ ಕೆಲಸ ಮಾಡಿದ್ರೆ ಎಲ್ಲಾ ನೋವು & ದುಃಖ ದೂರವಾಗುತ್ತವೆ

ಗುರು ಗೋಚಾರದಿಂದ ಯಾರಿಗೆ ಲಾಭ ? :
ಮೇಷ, ತುಲಾ ಮತ್ತು ಕರ್ಕಾಟಕ, ಕನ್ಯಾ ಮತ್ತು ಮೀನ ರಾಶಿಯವರಿಗೆ ಗುರು ಸಂಚಾರ ಲಾಭದಾಯಕವಾಗಿರುತ್ತದೆ.  ಮೇಷ ರಾಶಿಯವರಿಗೆ ಹೊಸ ಉದ್ಯೋಗಾವಕಾಶಗಳು ಸಿಗಲಿವೆ. ತುಲಾ ರಾಶಿಯವರ ಆದಾಯದ ಮೂಲ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ಸಮಯ ಉತ್ತಮವಾಗಿರುತ್ತದೆ. 

ಕರ್ಕ ರಾಶಿಯವರು  ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಅದೃಷ್ಟ ಕೈ ಹಿಡಿಯಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.   ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಕನ್ಯಾ ರಾಶಿಯವರು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಪಡೆಯುತ್ತಾರೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ಹಣಕಾಸಿನ ಪ್ರಯೋಜನವೂ ಆಗಲಿದೆ. ಮೀನ ರಾಶಿಯವರ ಜೀವನದಲ್ಲಿಯೂ ಒಳ್ಳೆಯ ಸುದ್ದಿ ಕೇಳಿ ಬರಲಿದೆ.  ಕಚೇರಿಯಲ್ಲಿ ಹೊಸ ಜವಾಬ್ದಾರಿ ಹೆಗಲೇರಬಹುದು. ವ್ಯಾಪಾರದಲ್ಲಿ ಲಾಭ ಇರುತ್ತದೆ. 

ಇದನ್ನೂ ಓದಿ : Shani Dev: ಶನಿವಾರದಂದು ಈ ಮಾಂತ್ರಿಕ ತಂತ್ರ ಮಾಡಿ, ಶನಿದೇವನ ಕೃಪೆಗೆ ಪಾತ್ರರಾಗಿ

ಯಾರ ಮೇಲೆ ಶನಿಯ ಕೃಪಾ ಕಟಾಕ್ಷ : 
ವೃಷಭ, ಮಿಥುನ, ತುಲಾ ಮತ್ತು ಧನು ರಾಶಿಯವರಿಗೆ ಶನಿ ಸಂಚಾರದ ಲಾಭ ಸಿಗಲಿದೆ. ವೃಷಭ ರಾಶಿಯವರು ಕಡಿಮೆ ಶ್ರಮದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಹಳೆಯ ಸಮಸ್ಯೆಗಳು ದೂರವಾಗುತ್ತವೆ. ಮಿಥುನ ರಾಶಿಯವರ ಶನಿದೆಸೆ ಕೊನೆಯಾಗಲಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಹಳೆಯ ರೋಗದಿಂದ ಮುಕ್ತಿ ದೊರೆಯುತ್ತದೆ. ಮತ್ತೊಂದೆಡೆ, ತುಲಾ ರಾಶಿಯವರಿಗೆ ಬಡ್ತಿ ಸಿಕ್ಕಿ ಗೌರವ ಹೆಚ್ಚಾಗುತ್ತದೆ. ಇವರು ಕೂಡಾ ಎರಡೂವರೆ ಶನಿ ದೆಸೆಯಿಂದ ಮುಕ್ತಿ ಪಡೆಯಲಿದ್ದಾರೆ. ಇನ್ನು ಸಾಡೇಸಾತಿಯಿಂದ ಪರಿಹಾರ ಪಡೆಯುವ ಧನು ರಾಶಿಯವರಿಗೆ ಧನಲಾಭದ ಸಾಧ್ಯತೆಗಳಿವೆ. 

ಈ ರಾಶಿಯವರಿಗೆ ಅದೃಷ್ಟ ತರಲಿದ್ದಾನೆ ರಾಹು :  
ವೃಷಭ, ತುಲಾ ಮತ್ತು ಮಕರ ರಾಶಿಯವರಿಗೆ ರಾಹು ಸಂಚಾರದಿಂದ ಲಾಭವಾಗಲಿದೆ. ವೃಷಭ ರಾಶಿಯವರು ಮಾಡುವ ಕೆಲಸಕ್ಕೆ ಸ್ನೇಹಿತರು ಮತ್ತು ಸಹೋದರರ ಸಹಾಯ ಸಿಗಲಿದೆ. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಲಾಭವಾಗಲಿದೆ. ರಾಹು ಸಂಕ್ರಮಣವು ತುಲಾ ರಾಶಿಯವರಿಗೆ ಅಗಾಧವಾದ ಲಾಭಗಳನ್ನು ನೀಡುತ್ತದೆ. ದೊಡ್ಡ ಉದ್ಯೋಗಾವಕಾಶ ಸಿಗಲಿದೆ. ವಿದೇಶಕ್ಕೆ ಹೋಗುವ ಕನಸು ಕೂಡ ನನಸಾಗಬಹುದು. ಮಕರ ರಾಶಿಯ ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಇದನ್ನೂ ಓದಿ : Astro tips: ಈ ಮರದ ಎಲೆಯ ಪರಿಹಾರ ಆರ್ಥಿಕ ಮುಗ್ಗಟ್ಟನ್ನು ದೂರ ಮಾಡುತ್ತೆ

ಕೇತು ಸಂಚಾರದಿಂದ ಯಾರ ಅದೃಷ್ಟ ಬೆಳಗುತ್ತದೆ ? :
ವೃಷಭ, ಸಿಂಹ, ಧನು ಮತ್ತು ಮಕರ ರಾಶಿಯವರಿಗೆ ಕೇತು ಸಂಚಾರದಿಂದ ಲಾಭವಾಗಲಿದೆ. ವೃಷಭ ರಾಶಿಯವರ ಆರೋಗ್ಯ ಸುಧಾರಿಸುತ್ತದೆ. ಅವರು ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಹೂಡಿಕೆಗೆ ಉತ್ತಮ ಸಮಯ. ಪಾಲುದಾರಿಕೆಯಲ್ಲಿ ಲಾಭ ಇರುತ್ತದೆ. ಸಿಂಹ ರಾಶಿಯವರ  ಕುಟುಂಬ ಸಂಬಂಧಗಳು ಸುಧಾರಿಸುತ್ತವೆ. ಕಠಿಣ ಪರಿಶ್ರಮವು ವ್ಯವಹಾರದಲ್ಲಿ ಯಶಸ್ಸನ್ನು ತರುತ್ತದೆ. ಹೂಡಿಕೆಗೆ ಉತ್ತಮ ಸಮಯ. ಧನು ರಾಶಿಯವರ ವೃತ್ತಿ ಜೀವನಕ್ಕೆ ಹೊರ ತಿರುವು  ಸಿಗಬಹುದು. ಹಳೆಯ ರೋಗದಿಂದ ಮುಕ್ತಿ ಸಿಗಲಿದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವಗಾಲಿದೆ. ಮಕರ ರಾಶಿಯವರು ಒಂದಕ್ಕಿಂತ ಹೆಚ್ಚು ಮೂಲಗಳಿಂದ ಹಣ ಗಳಿಸುವುದು ಸಾಧ್ಯವಾಗುತ್ತದೆ.  ಸ್ನೇಹಿತರೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News