“ನಾನು ಆಮೆಯೇ ಹೊರತು ಮೊಲವಲ್ಲ..”: Team India ಸೋಲಿನ ಬಳಿಕ ಪಾಂಡ್ಯ ಹೀಗಂದಿದ್ದೇಕೆ?

India vs West Indies 2nd ODI: ಎರಡನೇ ಏಕದಿನ ಪಂದ್ಯದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟ್ಸ್ ಮನ್ ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Written by - Bhavishya Shetty | Last Updated : Jul 30, 2023, 11:13 AM IST
    • ಈ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದರು
    • ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವದ ಅವಕಾಶ ಸಿಕ್ಕಿತ್ತು.
    • ಹೀನಾಯ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಕೋಪದಿಂದ ಹೇಳಿಕೆಯನ್ನು ನೀಡಿದ್ದಾರೆ.
“ನಾನು ಆಮೆಯೇ ಹೊರತು ಮೊಲವಲ್ಲ..”: Team India ಸೋಲಿನ ಬಳಿಕ ಪಾಂಡ್ಯ ಹೀಗಂದಿದ್ದೇಕೆ? title=
Hardik Pandya

India vs West Indies 2nd ODI: ಕೆರಿಬಿಯನ್ ತಂಡ ಎರಡನೇ ODI ನಲ್ಲಿ ಭಾರತವನ್ನು 6 ವಿಕೆಟ್‌ ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ನಿಯಮಿತ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವದ ಅವಕಾಶ ಸಿಕ್ಕಿತ್ತು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದರು. ತಂಡದ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ನಿರಾಸೆ ಮೂಡಿಸಿದ್ದರು. ಜೊತೆಗೆ ಬೌಲಿಂಗ್‌’ನಲ್ಲೂ ಶಾರ್ದೂಲ್ ಠಾಕೂರ್ ಹೊರತುಪಡಿಸಿ ಬೇರಾವುದೇ ಆಟಗಾರ ಹೆಚ್ಚು ಛಾಪು ಮೂಡಿಸಲ ಸಾಧ್ಯವಾಗಲಿಲ್ಲ. ಈ ಹೀನಾಯ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಕೋಪದಿಂದ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: IND vs WI: 2ನೇ ODI ಪಂದ್ಯದಲ್ಲಿ ರೋಹಿತ್-ಕೊಹ್ಲಿಗೆ ಸ್ಥಾನ ನೀಡದಿರಲು ಕಾರಣ ಬಹಿರಂಗಪಡಿಸಿದ ಕೋಚ್

ಎರಡನೇ ಏಕದಿನ ಪಂದ್ಯದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟ್ಸ್ ಮನ್ ಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. “ಇದು ಮೊದಲ ಪಂದ್ಯದಂತಿರಲಿಲ್ಲ, ಆದರೆ ನಮ್ಮ ಬ್ಯಾಟ್ಸ್‌ಮನ್‌ಗಳು ಕೆಟ್ಟದಾಗಿ ಬ್ಯಾಟಿಂಗ್ ಮಾಡಿದ್ದಾರೆ. ಶಾರ್ದೂಲ್ ಅದ್ಭುತವಾಗಿ ಬೌಲಿಂಗ್ ಮಾಡಿದರು. ಅವರು ನಮ್ಮ ಭರವಸೆಯನ್ನು ಜೀವಂತವಾಗಿರಿಸಿದರು. ಆದರೆ ಇನ್ನೂ ಹೆಚ್ಚಿನದನ್ನು ಕಲಿಯಬೇಕಾಗಿದೆ. ಆರಂಭಿಕರು ಬ್ಯಾಟ್ ಮಾಡಿದ ರೀತಿ, ಕಿಶನ್ ಬ್ಯಾಟ್ ಮಾಡಿದ ರೀತಿ ಭಾರತೀಯ ಕ್ರಿಕೆಟ್ ಗೆ ಮಹತ್ವದ್ದು” ಎಂದರು.

ಏಕದಿನ ವಿಶ್ವಕಪ್ ತಯಾರಿ ಕುರಿತು ಮಾತನಾಡಿದ ಹಾರ್ದಿಕ್ ಪಾಂಡ್ಯ, “ನಾನು ಏಕದಿನ ವಿಶ್ವಕಪ್‌ಗೆ ತಯಾರಿ ನಡೆಸುತ್ತಿದ್ದೇನೆ. ನಿಧಾನವಾಗಿ ನಾನು ಸಂಪೂರ್ಣ ಬೌಲಿಂಗ್ ಫಿಟ್ನೆಸ್ ಕಡೆಗೆ ಸಾಗುತ್ತಿದ್ದೇನೆ. ನಾನು ಆಮೆಯೇ ಹೊರತು ಮೊಲವಲ್ಲ” ಎಂದರು.

ಸರಣಿ 1-1 ಸಮಬಲದಲ್ಲಿ ಉಳಿದಿದ್ದು, ಈಗ ಕೊನೆಯ ಪಂದ್ಯ ನಿರ್ಣಾಯಕವಾಗಲಿದೆ. ಮುಂದಿನ ಪಂದ್ಯ ಅಭಿಮಾನಿಗಳಿಗೆ ಹಾಗೂ ಆಟಗಾರರಿಗೆ ರೋಚಕವಾಗಿರುತ್ತದೆ.

ಇದನ್ನೂ ಓದಿ: IND vs WI 2ನೇ ಏಕದಿನದಲ್ಲಿ Team Indiaದ ಹೀನಾಯ ಸೋಲಿಗೆ ಈ 4 ಆಟಗಾರರೇ ಕಾರಣ!

ಪಂದ್ಯದ ಪ್ರಸ್ತುತಿ ವೇಳೆ ಶಾಯ್ ಹೋಪ್ ಮಾತನಾಡಿದ್ದು, “ನನ್ನ ಅರ್ಧಶತಕ ಪ್ರದರ್ಶನದಿಂದ ನನಗೆ ಸಂತೋಷವಾಗಿದೆ. ಇದು ಪರಿಪೂರ್ಣ ಪ್ರದರ್ಶನವಾಗಿತ್ತು. ನಾವು ಅದನ್ನು ಪುನರಾವರ್ತಿಸಬೇಕು. ಬ್ಯಾಟ್ ಮತ್ತು ಬಾಲ್‌ನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಭಾರತದಂತಹ ಗುಣಮಟ್ಟದ ಬೌಲಿಂಗ್ ದಾಳಿಯ ವಿರುದ್ಧ ಆ ವಿಕೆಟ್‌ನಲ್ಲಿ ತ್ವರಿತವಾಗಿ ರನ್ ಗಳಿಸಲು ನೀವು ಮಾರ್ಗಗಳನ್ನು ಕಂಡುಕೊಳ್ಳಬೇಕು. ನಾವು ಒಂದು ಗೆಲುವು ಪಡೆದಿದ್ದೇವೆ, ಸರಣಿ ಗೆಲ್ಲಲು ಮುಂದಿನ ಪಂದ್ಯವನ್ನೂ ಗೆಲ್ಲಬೇಕು. ಆಟಗಾರರು ಮತ್ತೆ ಕಷ್ಟಪಟ್ಟು ಕೆಲಸ ಮಾಡಲಿದ್ದಾರೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News