Asia Cup ಫೈನಲ್’ನಿಂದ ಟೀಂ ಇಂಡಿಯಾದ ಈ ಆಟಗಾರ ಔಟ್! ಬಾಂಗ್ಲಾ ವಿರುದ್ಧ ಭಾರತ ಸೋಲಲು ಕಾರಣವಾಗಿದ್ದು ಈತನೇ..!

Asia Cup, India vs Bangladesh: ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಏಷ್ಯಾ ಕಪ್-2023 ರ ಕೊನೆಯ ಸೂಪರ್-4 ಪಂದ್ಯದಲ್ಲಿ ಟೀಂ ಇಂಡಿಯಾವನ್ನು 6 ರನ್‌’ಗಳಿಂದ ಬಾಂಗ್ಲಾದೇಶ ಸೋಲಿಸಿತು.

Written by - Bhavishya Shetty | Last Updated : Sep 16, 2023, 07:33 AM IST
    • ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು
    • ಶುಭ್ಮನ್ ಗಿಲ್ ಮಾತ್ರ ಅದ್ಭುತ ಬ್ಯಾಟಿಂಗ್ ಮಾಡಿ ಶತಕ ಗಳಿಸಿದ್ದರು.
    • ಈ ಪಂದ್ಯದಲ್ಲಿ ನಾಯಕ ರೋಹತ್ ಶರ್ಮಾ ಕೂಡ ಖಾತೆ ತೆರೆಯಲು ಸಾಧ್ಯವಾಗಲಿಲ್ಲ
Asia Cup ಫೈನಲ್’ನಿಂದ ಟೀಂ ಇಂಡಿಯಾದ ಈ ಆಟಗಾರ ಔಟ್! ಬಾಂಗ್ಲಾ ವಿರುದ್ಧ ಭಾರತ ಸೋಲಲು ಕಾರಣವಾಗಿದ್ದು ಈತನೇ..! title=
Asia Cup Final

Asia Cup, India vs Bangladesh: ಏಷ್ಯಾ ಕಪ್ ಫೈನಲ್ ಮೊದಲು ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಈ ಪಂದ್ಯದಲ್ಲಿ 266 ರನ್‌’ಗಳ ಗುರಿಯನ್ನು ಪಡೆದಿದ್ದರೂ ಸಹ, ಭಾರತದ 10 ಆಟಗಾರರು 49.5 ಓವರ್‌’ಗಳಲ್ಲಿ 259 ರನ್ ಗಳಿಸಲಷ್ಟೇ ಸಾಧ್ಯವಾಯಿತು, ಇನ್ನು ಈ ಪಂದ್ಯದಲ್ಲಿ ಒಬ್ಬ ಆಟಗಾರ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಆದ್ದರಿಂದ ಆತನನ್ನು ಫೈನಲ್ ಪಂದ್ಯದಿಂದ ಹೊರಗಿಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಈ ರಾಶಿಯವರಿಗೆ ಇಂದು ಶನಿದೇವನ ಶ್ರೀರಕ್ಷೆ: ಅನಿರೀಕ್ಷಿತ ಧನಲಾಭ ಖಚಿತ, ವ್ಯವಹಾರದಲ್ಲಿ ಉನ್ನತಿ

ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಏಷ್ಯಾ ಕಪ್-2023 ರ ಕೊನೆಯ ಸೂಪರ್-4 ಪಂದ್ಯದಲ್ಲಿ ಟೀಂ ಇಂಡಿಯಾವನ್ನು 6 ರನ್‌’ಗಳಿಂದ ಬಾಂಗ್ಲಾದೇಶ ಸೋಲಿಸಿತು. ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ ಮತ್ತು ಶುಭಮನ್ ಗಿಲ್ ಅವರಂತಹ ಬಲಿಷ್ಠ ಆಟಗಾರರಿಂದ ತುಂಬಿದ್ದ ತಂಡಕ್ಕೆ 266 ರನ್ ಗಳ ಗುರಿ ತಲುಪಲು ಸಾಧ್ಯವಾಗಲಿಲ್ಲ. ಶುಭ್ಮನ್ ಗಿಲ್ ಮಾತ್ರ ಅದ್ಭುತ ಬ್ಯಾಟಿಂಗ್ ಮಾಡಿ ಶತಕ ಗಳಿಸಿದ್ದರು. 133 ಎಸೆತಗಳನ್ನು ಎದುರಿಸಿದ ಅವರು 8 ಬೌಂಡರಿ ಹಾಗೂ 5 ಸಿಕ್ಸರ್‌’ಗಳ ನೆರವಿನಿಂದ 121 ರನ್ ಗಳಿಸಿದರು.

ಭರವಸೆ ಮುರಿದ ಇಶಾನ್:

ಈ ಪಂದ್ಯದಲ್ಲಿ ನಾಯಕ ರೋಹತ್ ಶರ್ಮಾ ಕೂಡ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇನ್ನಿಂಗ್ಸ್‌’ನ ಎರಡನೇ ಎಸೆತದಲ್ಲಿ ಅನಾಮುಲ್ ಹಕ್ ಅವರ ಎಸೆತಕ್ಕೆ ತಂಝೀಮ್ ಹಸನ್ ಸಾಕಿಬ್‌’ಗೆ ಕ್ಯಾಚ್ ನೀಡಿ ಔಟ್ ಆದರು. ಇದಾದ ಬಳಿಕ ಪದಾರ್ಪಣೆ ಮಾಡಿದ ಆಟಗಾರ ತಿಲಕ್ ವರ್ಮಾ ಕೂಡ ಪ್ರಭಾವ ಬೀರಲು ಸಾಧ್ಯವಾಗದೆ ಕೇವಲ 5 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಆಗ 5ನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ ಮೇಲೆ ಎಲ್ಲರ ಕಣ್ಣು ಇತ್ತು. ಆದರೆ ಅವರೂ ಕೂಡ ಕೇವಲ 5 ರನ್ ಗಳ ವೈಯಕ್ತಿಕ ಸ್ಕೋರ್’ನಲ್ಲಿ ಮೆಹದಿ ಹಸನ್ ಮಿರಾಜ್’ಗೆ ವಿಕೆಟ್ ಒಪ್ಪಿಸಿದರು. ಕೇವಲ 5 ರನ್ ಗಳಿಸಲು ಅವರು ತೆಗೆದುಕೊಂಡಿದ್ದು ಕಿಶನ್ 15 ಎಸೆತಗಳನ್ನು.

ಇದನ್ನೂ ಓದಿ: 2026ರವರೆಗೆ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ: ಹಣದ ಸುರಿಮಳೆ, ಸೋಲೇ ಇಲ್ಲದ ಬದುಕು, ಹೆಜ್ಜೆಹೆಜ್ಜೆಗೂ ಯಶಸ್ಸಿನ ಮಹಾಪೂರ

ಅಂತಿಮ ಪಂದ್ಯದಲ್ಲಿ ಅವಕಾಶ ಅನುಮಾನ…

ಈಗ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಷ್ಯಾಕಪ್ ಫೈನಲ್‌’ನಲ್ಲಿ ಟೀಂ ಇಂಡಿಯಾ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಹೀಗಿರುವಾಗ ಪ್ಲೇಯಿಂಗ್-11 ರಲ್ಲಿ ಇಶಾನ್ ಕಿಶನ್’ಗೆ ಸ್ಥಾನವಿದೆಯೇ? ಅಥವಾ ಶ್ರೇಯಸ್ ಅಯ್ಯರ್ ಮರಳುತ್ತಾರೆಯೇ? ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತಿವೆ. ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅಯ್ಯರ್ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ 4ನೇ ಕ್ರಮಾಂಕದಲ್ಲಿ ಹಾಗೂ ಇಶಾನ್ ಕಿಶನ್ 5ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಅಯ್ಯರ್ ಹಿಂತಿರುಗಿದರೆ, ಅವರು 4 ನೇ ಸ್ಥಾನದಲ್ಲಿ ಆಡುತ್ತಾರೆ. ಆಗ ರಾಹುಲ್ ನಂಬರ್-5ಕ್ಕೆ ಬರಬೇಕಾಗುತ್ತದೆ. ಹೀಗಾದಲ್ಲಿ ಇಶಾನ್ ಕಿಶನ್ ತಂಡದಿಂದ ಹೊರಗುಳಿಯಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News