Breaking News: ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಆಯ್ಕೆ

Sri Lanka New President: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ.  

Written by - Chetana Devarmani | Last Updated : Jul 20, 2022, 01:28 PM IST
  • ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಆಯ್ಕೆ
  • ಶ್ರೀಲಂಕಾದ 8ನೇ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆ
  • 134 ಮತಗಳನ್ನು ಪಡೆದ ರಾನಿಲ್ ವಿಕ್ರಮಸಿಂಘೆ
Breaking News: ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಆಯ್ಕೆ  title=
ರಾನಿಲ್ ವಿಕ್ರಮಸಿಂಘೆ

Sri Lanka New President: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ. ಶ್ರೀಲಂಕಾದ 8ನೇ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ. 134 ಮತಗಳೊಂದಿಗೆ ರಾನಿಲ್ ವಿಕ್ರಮಸಿಂಘೆ ಶ್ರೀಲಂಕಾ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಲ್ಲಾಸ್ ಅಲಹಪೆರುಮ 82 ಮತಗಳನ್ನು ಪಡೆದರೆ, ಅನುರಕುಮಾರ ದೊಸ್ಸಾನಾಯಕ 3 ಮತಗಳನ್ನು ಪಡೆದರು. ಒಟ್ಟು 223 ಮತಗಳು ದಾಖಲಾಗಿದ್ದು, ಇಬ್ಬರು ಗೈರಾಗಿದ್ದರು, ನಾಲ್ಕು ಅಸಿಂಧುವಾಗಿವೆ.

ಇದನ್ನೂ ಓದಿ: ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ರಾಣಿಲ್ ವಿಕ್ರಂಸಿಂಘೆ ನೇಮಕ

ರಾನಿಲ್ ವಿಕ್ರಮಸಿಂಘೆ ಅವರು ಬುಧವಾರ (ಜುಲೈ 20, 2022) ಗೋಟಬಯ ರಾಜಪಕ್ಸ ಅವರ ಉತ್ತರಾಧಿಕಾರಿಯಾಗಿ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ (73) ಭಿನ್ನಮತೀಯ ಆಡಳಿತ ಪಕ್ಷದ ನಾಯಕ ಡಲ್ಲಾಸ್ ಅಲಹಪೆರುಮ ಮತ್ತು ಎಡಪಂಥೀಯ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನಾಯಕ ಅನುರ ಕುಮಾರ ಡಿಸಾನಾಯಕೆ ವಿರುದ್ಧ ಸ್ಪರ್ಧಿಸಿದ್ದರು. ಶ್ರೀಲಂಕಾ ಸಂಸತ್ತು ವಿಕ್ರಮಸಿಂಘೆ ಅವರನ್ನು ಗೋಟಬಯ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿತು.

ನಿರ್ಣಾಯಕ ಚುನಾವಣೆಯಲ್ಲಿ, ದ್ವೀಪ ರಾಷ್ಟ್ರದಲ್ಲಿ ಉಂಟಾದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯ ನಡುವೆ ರಹಸ್ಯ ಮತದಾನದ ಮೂಲಕ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ 223 ಶಾಸಕರು ಮತ ಚಲಾಯಿಸಿದರೆ ಇಬ್ಬರು ಸಂಸದರು ಗೈರು ಹಾಜರಾಗಿದ್ದರು. ಚುನಾವಣೆಯಲ್ಲಿ ಗೆಲ್ಲಲು 225 ಸದಸ್ಯರ ಸದನದಲ್ಲಿ 113 ರ ಮ್ಯಾಜಿಕ್‌ ನಂಬರ್‌ ದಾಟುವ ಅಗತ್ಯವಿತ್ತು. 

ಶ್ರೀಲಂಕಾದ ನೂತನ ಅಧ್ಯಕ್ಷರಾದ ರಾನಿಲ್ ವಿಕ್ರಮಸಿಂಘೆ ಅವರು ರಾಜಪಕ್ಸ ಅವರ ಉಳಿದ ಅವಧಿಯನ್ನು ಪೂರೈಸುವ ಜನಾದೇಶವನ್ನು ಹೊಂದಿದ್ದಾರೆ. ಇದು ನವೆಂಬರ್ 2024 ರಲ್ಲಿ ಕೊನೆಗೊಳ್ಳುತ್ತದೆ.

44 ವರ್ಷಗಳಲ್ಲಿ ಶ್ರೀಲಂಕಾ ಸಂಸತ್ತು ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಿರುವುದು ಇದೇ ಮೊದಲು. 1982, 1988, 1994, 1999, 2005, 2010, 2015 ಮತ್ತು 2019 ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ಜನರ ಮತಗಳಿಂದ ಅಧ್ಯಕ್ಷರನ್ನು ಆಯ್ಕೆ ಮಾಡಿತ್ತು.

ಇದನ್ನೂ ಓದಿ: ಅಧ್ಯಕ್ಷ ರಾಜಪಕ್ಸೆ ಪಲಾಯನ.. ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

1993 ರಲ್ಲಿ ಅಧ್ಯಕ್ಷ ರಣಸಿಂಗ್ ಪ್ರೇಮದಾಸ ಹತ್ಯೆಯಾದಾಗ ಅಧ್ಯಕ್ಷ ಸ್ಥಾನವು ಮಧ್ಯಾವಧಿಗೆ ಖಾಲಿಯಾದ ಏಕೈಕ ಸಂದರ್ಭವಾಗಿತ್ತು. ಪ್ರೇಮದಾಸ ಅವರ ಅವಧಿಯ ಬಾಕಿಯನ್ನು ಚಲಾಯಿಸಲು ಡಿ.ಬಿ.ವಿಜೇತುಂಗ ಅವರನ್ನು ಸಂಸತ್ತು ಸರ್ವಾನುಮತದಿಂದ ಅನುಮೋದಿಸಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News