Economic Recession: ಭಾರತಕ್ಕೂ ತಟ್ಟಲಿದೆ ಆರ್ಥಿಕ ಹಿಜರಿತದ ಬಿಸಿ, ಕೇಂದ್ರ ಸಚಿವರ ಬೆಚ್ಚಿಬೀಳಿಸುವ ಹೇಳಿಕೆ

Economic recession:ಭಾರತ ಆರ್ಥಿಕ ಹಿಂಜರಿತದ ಅಪಾಯದಲ್ಲಿದೆ. ಇದನ್ನು ಸರ್ಕಾರವೂ ನಿರೀಕ್ಷಿಸುತ್ತಿದೆ. ದೇಶದಲ್ಲಿ ಆರ್ಥಿಕ ಹಿಂಜರಿತವನ್ನು ಸರ್ಕಾರ ನಿರೀಕ್ಷಿಸುತ್ತಿರುವಾಗ ಕೇಂದ್ರ ಸಚಿವ ನಾರಾಯಣ ರಾಣೆ ಬೆಚ್ಚಿಬೀಳಿಸುವ ಹೇಳಿಕೆಯನ್ನು ನೀಡಿದ್ದಾರೆ.

Written by - Nitin Tabib | Last Updated : Jan 16, 2023, 10:57 PM IST
  • ಪ್ರಸ್ತುತ, ಅಭಿವೃದ್ಧಿ ಹೊಂದಿದ ದೊಡ್ಡ ದೇಶಗಳು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿವೆ ಎಂದು ಅವರು ಹೇಳಿದ್ದಾರೆ.
  • ಇದರಿಂದ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
  • ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ರಾಣೆ ಹೇಳಿದ್ದಾರೆ.
Economic Recession: ಭಾರತಕ್ಕೂ ತಟ್ಟಲಿದೆ ಆರ್ಥಿಕ ಹಿಜರಿತದ ಬಿಸಿ, ಕೇಂದ್ರ ಸಚಿವರ ಬೆಚ್ಚಿಬೀಳಿಸುವ ಹೇಳಿಕೆ  title=
Economic Recession In India

Economic Recession: ಪ್ರಸ್ತುತ ವಿಶ್ವದ ಹಲವು ದೇಶಗಳು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿವೆ. ಪಾಕಿಸ್ತಾನದ ಆರ್ಥಿಕತೆಯು ಪ್ರಸ್ತುತ ತನ್ನ ಅತ್ಯಂತ ಕೆಳಮಟ್ಟದಲ್ಲಿ ಸಾಗುತ್ತಿದೆ. ನೆರೆ ರಾಷ್ಟ್ರದ ದೇಶದ ಜನರು ಪ್ರತಿ ಧಾನ್ಯದ ಮೇಲೆ ಅವಲಂಬಿತರಾಗಿದ್ದಾರೆ. ಹೀಗಿರುವಾಗ ಭಾರತದಲ್ಲೂ ಆರ್ಥಿಕ ಹಿಂಜರಿತ ಉಂಟಾಗಬಹುದೇ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ. ಜಗತ್ತಿನಲ್ಲಿ ವೇಗವಾಗಿ ಕುಸಿಯುತ್ತಿರುವ ಆರ್ಥಿಕತೆಯು ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ ಅಥವಾ ಇಲ್ಲವೇ? ಈ ಪ್ರಶ್ನೆಗಳ ಬಗ್ಗೆ ಭಾರತದ ಜನರೂ ಚಿಂತಿತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಸರ್ಕಾರವು ಈ ಬಗ್ಗೆ ಏನು ಯೋಚಿಸುತ್ತಿದೆ ಮತ್ತು ಅಂತಹ ಪರಿಸ್ಥಿತಿಯನ್ನು ಎದುರಿಸಲು ಅದು ಯಾವ ಯೋಜನೆಯನ್ನು ರೂಪಿಸುತ್ತಿದೆ ಎಂಬುದು ತುಂಬಾ ಮುಖ್ಯವಾಗುತ್ತದೆ. ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಆರ್ಥಿಕ ಹಿಂಜರಿತದ ಬಗ್ಗೆ ಪ್ರಷ್ಟಿಸಿದಾಗ ಉತ್ತರ ರೂಪದಲ್ಲಿ ಅವರು ಸರ್ಕಾರದ ಸಿದ್ಧತೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಜಾಗತಿಕ ಆರ್ಥಿಕ ಹಿಂಜರಿತದಿಂದ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಾರಾಯಣ ರಾಣೆ ಸೋಮವಾರ ಹೇಳಿದ್ದಾರೆ. ಮಹಾರಾಷ್ಟ್ರದ ಪುಣೆ ನಗರದಲ್ಲಿ ಜಿ20ಯ ಮೊದಲ ಮೂಲಸೌಕರ್ಯ ವರ್ಕಿಂಗ್ ಗ್ರೂಪ್ (ಐಡಬ್ಲ್ಯೂಜಿ) ಸಭೆಯನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಆರ್ಥಿಕ ಹಿಂಜರಿತದ ಪರಿಸ್ಥಿತಿಯನ್ನು ಎದುರಿಸಲು ಭಾರತದ ಸನ್ನದ್ಧತೆಯ ಬಗ್ಗೆ ಕೇಳಿದ ಪ್ರಶ್ನೆಗೆ, "ನಾವು ಕ್ಯಾಬಿನೆಟ್‌ನಲ್ಲಿರುವಾಗ, ನಮಗೆ ಮಾಹಿತಿ (ಆರ್ಥಿಕ ಕುಸಿತದ ಬಗ್ಗೆ) ಅಥವಾ ಪ್ರಧಾನಿ ಮೋದಿಜಿ ಅದರ ಬಗ್ಗೆ ನಮಗೆ ಸೂಚಿಸುತ್ತಾರೆ" ಎಂದು ಹೇಳಿದ್ದಾರೆ. ಪ್ರಸ್ತುತ, ಅಭಿವೃದ್ಧಿ ಹೊಂದಿದ ದೊಡ್ಡ ದೇಶಗಳು ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿವೆ ಎಂದು ಅವರು ಹೇಳಿದ್ದಾರೆ. ಇದರಿಂದ ನಾಗರಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ರಾಣೆ ಹೇಳಿದ್ದಾರೆ.

ಇದನ್ನೂ ಓದಿ-Best Mileage Car: 35 ಕಿಮೀ ಮೈಲೇಜ್, ಅದ್ಭುತ ವೈಶಿಷ್ಟ್ಯಗಳು, ಬೆಲೆ ಕೇವಲ 5.25 ಲಕ್ಷ

ದೀರ್ಘಕಾಲೀನ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಜಿ 20 ಸಭೆ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಭಾರತವು ಡಿಸೆಂಬರ್ 1, 2022 ರಿಂದ ನವೆಂಬರ್ 30, 2023 ರವರೆಗೆ G20 ಅಧ್ಯಕ್ಷತೆಯನ್ನು ವಹಿಸುತ್ತಿದೆ. ಅಧಿಕೃತ ಬಿಡುಗಡೆಯ ಪ್ರಕಾರ, IWG ಸದಸ್ಯ ರಾಷ್ಟ್ರಗಳು, ಅತಿಥಿ ರಾಷ್ಟ್ರಗಳು ಮತ್ತು ಭಾರತದಿಂದ ಆಹ್ವಾನಿಸಲಾದ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸುಮಾರು 65 ಪ್ರತಿನಿಧಿಗಳು ಪುಣೆಯಲ್ಲಿ ನಡೆಯುವ ಸಭೆಯಲ್ಲಿ ಭಾರತದ G20 ಅಧ್ಯಕ್ಷತೆಯಲ್ಲಿ 2023 ರ ಮೂಲಸೌಕರ್ಯ ಕಾರ್ಯಸೂಚಿಯನ್ನು ಚರ್ಚಿಸಲಿದ್ದಾರೆ.

ಇದನ್ನೂ ಓದಿ- Unique Business Idea: ಕಾಗದದ ರದ್ದಿಯಿಂದ ವಿದೇಶದಲ್ಲಿ ಯಶಸ್ಸಿನ ಬಾವುಟ ಹಾರಿಸಿದ ಈಕೆ ಇಂದು ಕೋಟ್ಯಾಂತರ ಮೌಲ್ಯದ ಕಂಪನಿಗೆ ಒಡತಿ

ಆರ್ಥಿಕ ವ್ಯವಹಾರಗಳ ಇಲಾಖೆ, ಹಣಕಾಸು ಸಚಿವಾಲಯ ಮತ್ತು ಭಾರತ ಸರ್ಕಾರವು ಎರಡು ದಿನಗಳ IWG ಸಭೆಗಳನ್ನು ಆಯೋಜಿಸುತ್ತಿದೆ, ಇದು ಆಸ್ಟ್ರೇಲಿಯಾ ಮತ್ತು ಬ್ರೆಜಿಲ್‌ನ ಸಹ-ಅಧ್ಯಕ್ಷತೆಯಲ್ಲಿ ನಡೆಯಲಿದೆ. "G20 ಇನ್ಫ್ರಾಸ್ಟ್ರಕ್ಚರ್ ವರ್ಕಿಂಗ್ ಗ್ರೂಪ್ ಮೂಲಸೌಕರ್ಯ ಹೂಡಿಕೆಯ ವಿವಿಧ ಅಂಶಗಳ ಬಗ್ಗೆ ಚರ್ಚೆಗಳು ನಡೆಯಲಿವೆ, ಇದರಲ್ಲಿ ಮೂಲಸೌಕರ್ಯವನ್ನು ಆಸ್ತಿ ವರ್ಗವಾಗಿ ಅಭಿವೃದ್ಧಿಪಡಿಸುವುದು, ಗುಣಮಟ್ಟದ ಮೂಲಸೌಕರ್ಯ ಹೂಡಿಕೆಯನ್ನು ಉತ್ತೇಜಿಸುವುದು ಮತ್ತು ಮೂಲಸೌಕರ್ಯ ಹೂಡಿಕೆಗೆ ಹಣಕಾಸು ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ನವೀನ ಸಾಧನಗಳನ್ನು ಗುರುತಿಸುವುದು ಶಾಮೀಲಾಗಿವೆ."

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News