ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ! ಸಿಗಲಿದೆ ಭರ್ಜರಿ ಬೋನಸ್, ಜೊತೆಗೆ ವೇತನದಲ್ಲಿಯೂ ಹೆಚ್ಚಳ

ಸರ್ಕಾರಿ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ. ಈಗ ಉದ್ಯೋಗಿಗಳಿಗೆ ಬೋನಸ್ ಲಾಭ ಸಿಗಲಿದೆ. ಇದರೊಂದಿಗೆ ಅವರಿಗೆ ಮುಂಗಡವಾಗಿ ಹಬ್ಬದ ಭತ್ಯೆ ನೀಡಲಾಗುವುದು. 

Written by - Ranjitha R K | Last Updated : Aug 21, 2023, 09:15 AM IST
  • ಉದ್ಯೋಗಿಗಳಿಗೆ ಬೋನಸ್ ನಿಗದಿಪಡಿಸಲಾಗಿದೆ.
  • ಮುಂಚಿತವಾಗಿಯೇ ಸಿಗಲಿದೆ ಆಗಸ್ಟ್ ವೇತನ
  • ಸರ್ಕಾರಿ ನೌಕರರಿಗೆ 20000 ರೂಪಾಯಿ ಮುಂಗಡ ವೇತನ.
ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ! ಸಿಗಲಿದೆ ಭರ್ಜರಿ ಬೋನಸ್, ಜೊತೆಗೆ ವೇತನದಲ್ಲಿಯೂ ಹೆಚ್ಚಳ  title=

ಬೆಂಗಳೂರು : ಸರ್ಕಾರಿ ನೌಕರರಿಗೆ ಇದು ಸಿಹಿ ಸುದ್ದಿ. ಇನ್ನು ಮುಂದೆ ಸರ್ಕಾರಿ ನೌಕರರು ಮಾಸಿಕ ವೇತನದ ಜೊತೆಗೆ ಬೋನಸ್ ಪ್ರಯೋಜನಗಳನ್ನು ಕೂಡಾ ಪಡೆಯುತ್ತಾರೆ. ಈ ಸಂಬಂಧ ಇದೀಗ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಉದ್ಯೋಗಿಗಳಿಗೆ ಎಷ್ಟು ಬೋನಸ್ ಸಿಗಲಿದೆ ಎಂದು ಘೋಷಿಸಲಾಗಿತ್ತು ಅಷ್ಟೇ ಮೊತ್ತವನ್ನು ನೀಡಲಾಗುತ್ತದೆ.

 ಅಡ್ವಾನ್ಸ್ ಜೊತೆಗೆ 8.33% ಬೋನಸ್ ಲಾಭ ಜನ : 
ಈ ಸಂದರ್ಭದಲ್ಲಿ, ಕೇರಳ ರಾಜ್ಯ ಸರ್ಕಾರಿ ನಾಗರಿಕ ಸರಬರಾಜು ನಿಗಮದ ಕಾಯಂ ನೌಕರರಿಗೆ 8.33% ಬೋನಸ್ ಮತ್ತು 25000 ರೂ. ಓಣಂ  ಅಡ್ವಾನ್ಸ್  ನೀಡಲಾಗುತ್ತದೆ. 24000 ರೂ. ವರೆಗೆ ಮಾಸಿಕ ವೇತನ ಪಡೆಯುವವರಿಗೆ ಈ ಪ್ರಯೋಜನ ನೀಡಲಾಗುತ್ತದೆ. ಬೋನಸ್ ಪಡೆಯಲು ಅರ್ಹರಲ್ಲದ ಕಾಯಂ ಮತ್ತು ನಿಯೋಜಿತ ನೌಕರರಿಗೆ ಅಭಿನಂದನಾ ಭತ್ಯೆಯಾಗಿ 2750 ರೂ. ನೀಡಲಾಗುವುದು. ಅಂತೆಯೇ, ದೈನಂದಿನ ಮತ್ತು ಗುತ್ತಿಗೆ ಕಾರ್ಮಿಕರಿಗೆ 3,750 ರೂ. ಬೋನಸ್ ಸಿಗುತ್ತದೆ.

ಇದನ್ನೂ ಓದಿ : ವಿಶ್ವ ಪ್ರಸಿದ್ದಿ ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಸ್ಥಿರತೆ...!

ಹಬ್ಬದ ಭತ್ಯೆಯಾಗಿ 1000 : 
ಗ್ರೀನ್ ಆರ್ಡರ್ ಸೇವಾ ಸದಸ್ಯರಿಗೆ 1000 ರೂ. ಹಬ್ಬದ ಭತ್ಯೆ ನೀಡಲಾಗುವುದು ಎಂದು ಸ್ಥಳೀಯಾಡಳಿತ ಸಚಿವ ಎಂ.ಪಿ.ರಾಜೇಶ್ ತಿಳಿಸಿದ್ದಾರೆ. ಇದರೊಂದಿಗೆ  ನಿರುದ್ಯೋಗಿಗಳಿಗೆ 2,500 ರೂ.ಗಳ ಆರ್ಥಿಕ ನೆರವು ನೀಡಲಾಗುವುದು.

NFSA (ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ) ಮತ್ತು ಇತರ ಕಚೇರಿಗಳ ತಾತ್ಕಾಲಿಕ ಉದ್ಯೋಗಿಗಳಿಗೆ ಹಬ್ಬದ ವಿಶೇಷ ಭತ್ಯೆಯಾಗಿ 1,210 ರೂ ನೀಡಲಾಗುತ್ತದೆ. ಈ ಹಿಂದೆ ಕೇರಳ ಸರ್ಕಾರ ಪ್ರತಿಯೊಬ್ಬ ಸರ್ಕಾರಿ ನೌಕರರಿಗೂ ಬೋನಸ್ ಘೋಷಿಸಿತ್ತು. ಬೋನಸ್ ಪಡೆಯಲು ಅರ್ಹರಲ್ಲದವರಿಗೂ ವಿಶೇಷ ಹಬ್ಬದ ಭತ್ಯೆ ನೀಡಲಾಗುವುದು. ವೇತನವು ಮುಂಚಿತವಾಗಿ ಉದ್ಯೋಗಿಯ ಬ್ಯಾಂಕ್ ಖಾತೆಗೆ ತಲುಪುತ್ತದೆ. 13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.

ಇದನ್ನೂ ಓದಿ : ಗೃಹಸಾಲ ಮಾಡೋಕು ಮುಂಚೆ ಎಚ್ಚರ...ಅದಕ್ಕಿರುವ ಬೇರೆ ಬೇರೆ ಶುಲ್ಕಗಳ ಬಗ್ಗೆ ಅರಿವಿರಲಿ!

ಓಣಂ ಹಬ್ಬದ ಪ್ರಯುಕ್ತ ಸರ್ಕಾರಿ ನೌಕರರಿಗೆ 4000 ರೂ. ಬೋನಸ್ ಘೋಷಿಸಲಾಗಿದೆ. ಬೋನಸ್ ಸಿಗದ ಸರ್ಕಾರಿ ನೌಕರರಿಗಾಗಿ 2750 ವಿಶೇಷ ಭತ್ಯೆ ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ಹಣಕಾಸು ಸಚಿವ ಪಾಲ್ ಗೋಪಾಲ್ ತಿಳಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಎಲ್ಲಾ ಸರ್ಕಾರಿ ನೌಕರರಿಗೆ 20,000 ರೂಪಾಯಿ ಮುಂಗಡ ವೇತನ ಪಾವತಿಸಲಾಗುವುದು. ಅರೆಕಾಲಿಕ ಉದ್ಯೋಗಿಗಳಿಗೆ ಮುಂಗಡವಾಗಿ 6,000 ರೂ ಪಾವತಿಸಲಾಗುವುದು ಎಂದು ಘೋಷಿಸಲಾಗಿದೆ.

ಓಣಂ ಸಂದರ್ಭದಲ್ಲಿ, ಆಗಸ್ಟ್ 25, 2023 ರಂದು, ಕೇರಳದ ಸರ್ಕಾರಿ ನೌಕರರ ಆಗಸ್ಟ್ ವೇತನವನ್ನು ಪಾವತಿಸಾಗುವುದು. ಕೇರಳದಲ್ಲಿರುವ ಎಲ್ಲಾ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಈ ದಿನಾಂಕದಂದು ಬ್ಯಾಂಕ್‌ಗಳು/ಪಿಎಒಗಳ ಮೂಲಕ ಪಿಂಚಣಿ ವಿತರಿಸಬಹುದು. ವೇತನ ಮತ್ತು ಪಿಂಚಣಿ ವಿತರಣೆಯನ್ನು ಮುಂಗಡವಾಗಿ ಪರಿಗಣಿಸಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. 

ಇದನ್ನೂ ಓದಿ : ನೀವೂ ಅತಿ ಹೆಚ್ಚು ಆನ್ಲೈನ್ ಶಾಪಿಂಗ್ ಮಾಡುತ್ತೀರಾ? ಹಾಗಾದ್ರೆ ಈ ಸುದ್ದಿ ತಪ್ಪದೆ ಓದಿ!

ಕಳೆದ ವರ್ಷ, ತುಟ್ಟಿಭತ್ಯೆ (ಡಿಎ) ಸೇರಿದಂತೆ ಒಟ್ಟು 35,040 ರೂ  ಗಳಿಸುವ ನೌಕರರಿಗೆ ಬೋನಸ್ ಮಂಜೂರು ಮಾಡಲಾಗಿತ್ತು. ಈ ವರ್ಷ ಮಿತಿಯನ್ನು 35,640 ರೂ.ಗೆ ಏರಿಸಲು ಹಣಕಾಸು ಇಲಾಖೆ ಶಿಫಾರಸು ಮಾಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News