BharatPe CEO : ಭಾರತ್ ಪೇ ಸಿಇಒ ಹುದ್ದೆಯಿಂದ ಕೆಳಗಿಳಿದ ಸಮೀರ್ ಸುಹೇಲ್!

BharatPe Controversy : ಭಾರತ್‌ಪೇಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಹೇಲ್ ಸಮೀರ್ ಅವರು ಹುದ್ದೆಯಿಂದ ಕೆಳಗಿಳಿದಿದ್ದಾರೆ. ಇದಕ್ಕೆ ಕಂಪನಿಯ ಮಾಜಿ ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರೊಂದಿಗೆ ಸಮೀರ್ ವಿವಾದವೆ ಎಂದು ಹೇಳಲಾಗುತ್ತಿದೆ.

Last Updated : Jan 3, 2023, 01:17 PM IST
  • ಭಾರತ್‌ಪೇಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
  • ಸಿಇಒ ಸುಹೇಲ್ ಸಮೀರ್ ಅವರು ಹುದ್ದೆಯಿಂದ ಕೆಳಗಿಳಿದಿದ್ದಾರೆ
  • ಅಶ್ನೀರ್ ಗ್ರೋವರ್ ಅವರೊಂದಿಗೆ ಸಮೀರ್ ವಿವಾದ
BharatPe CEO : ಭಾರತ್ ಪೇ ಸಿಇಒ ಹುದ್ದೆಯಿಂದ ಕೆಳಗಿಳಿದ ಸಮೀರ್ ಸುಹೇಲ್! title=

BharatPe Controversy : ಭಾರತ್‌ಪೇಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಹೇಲ್ ಸಮೀರ್ ಅವರು ಹುದ್ದೆಯಿಂದ ಕೆಳಗಿಳಿದಿದ್ದಾರೆ. ಇದಕ್ಕೆ ಕಂಪನಿಯ ಮಾಜಿ ಸಂಸ್ಥಾಪಕ ಅಶ್ನೀರ್ ಗ್ರೋವರ್ ಅವರೊಂದಿಗೆ ಸಮೀರ್ ವಿವಾದವೆ ಎಂದು ಹೇಳಲಾಗುತ್ತಿದೆ. ಸಮೀರ್ ಅವರು ಜನವರಿ 7, 2023 ರಿಂದ ಕಾರ್ಯತಂತ್ರದ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಭಾರತ್‌ಪೇ ಹೇಳಿಕೆಯಲ್ಲಿ ತಿಳಿಸಿದೆ. "ಈಗಿನ ಮುಖ್ಯ ಹಣಕಾಸು ಅಧಿಕಾರಿ ನಳಿನ್ ನೇಗಿ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ" ಎಂದು ತಿಳಿಸಿದ್ದಾರೆ.

ಮಾಜಿ ಸಂಸ್ಥಾಪಕ ಅಶ್ನೀರ್ ಗ್ರೋವರ್

ಭಾರತ್‌ಪೇಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಮಾತುಗಳು ಭಾಳ ದಿನಗಳಿಂದ ಕೇಳಿ ಬರುತ್ತಿದ್ದವು ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಇಂದು ಸುಹೇಲ್ ಸಮೀರ್ ಸಿಇಒ ಸ್ಥಾನದಿಂದ ಕೆಳಗಿಳಿದ್ದಾರೆ. ಕಳೆದ ತಿಂಗಳುಗಳಲ್ಲಿ ಅನೇಕ ಉದ್ಯೋಗಿಗಳು ಕಂಪನಿಗೆ ರಾಜೀನಾಮೆ ನೀಡಿದ್ದಾರೆ. ಕಳೆದ ತಿಂಗಳುಗಳಲ್ಲಿ, ಮೂವರು ಹಿರಿಯ ಅಧಿಕಾರಿಗಳು-ಮುಖ್ಯ ತಂತ್ರಜ್ಞಾನ ಅಧಿಕಾರಿ ವಿಜಯ್ ಅಗರ್ವಾಲ್, ಪೋಸ್ಟ್‌ಪೇ ಮುಖ್ಯಸ್ಥ ನೆಹುಲ್ ಮಲ್ಹೋತ್ರಾ ಮತ್ತು ಸಾಲ-ಗ್ರಾಹಕ ಉತ್ಪನ್ನಗಳ ಮುಖ್ಯ ಉತ್ಪನ್ನ ಅಧಿಕಾರಿ ರಜತ್ ಜೈನ್ ಅವರು ಕಂಪನಿಗೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ : Petrol-Diesel Price : ಅಗ್ಗವಾಗಲಿದೆ ಪೆಟ್ರೋಲ್-ಡೀಸೆಲ್ ಬೆಲೆ : ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ!

ಅಶ್ನೀರ್ ಗ್ರೋವರ್ ವಿವಾದ

ಭಾರತ್‌ಪೇ ಬಗ್ಗೆಯೂ ಸಾಕಷ್ಟು ವಿವಾದಗಳು ಕಂಡುಬರುತ್ತಿವೆ. ಈ ಹಿಂದೆಯೂ ಅನೇಕ ಜನರು ಕಂಪನಿಯಿಂದ ಹೊರಗುಳಿದಿದ್ದಾರೆ. ಕಂಪನಿಯ ಮುಖ್ಯ ಕಂದಾಯ ಅಧಿಕಾರಿ ನಿಶಿತ್ ಶರ್ಮಾ ಜೂನ್‌ನಲ್ಲಿ ಕಂಪನಿಯನ್ನು ತೊರೆದರು. ಭಾರತ್‌ಪೇಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಸತ್ಯಂ ನಾಥನಿ ಅದೇ ತಿಂಗಳಲ್ಲಿ ಕಂಪನಿಯನ್ನು ತೊರೆದರು. ಮತ್ತೊಂದೆಡೆ, ಅಶ್ನೀರ್ ಗ್ರೋವರ್ ಅನ್ನು ಕಂಪನಿಯಿಂದ ತೆಗೆದುಹಾಕಿದಾಗಿನಿಂದ ಭಾರತ್‌ಪೇ ಸಾಕಷ್ಟು ವಿವಾದಗಳಲ್ಲಿದೆ.

ಅಶ್ನೀರ್ ಗ್ರೋವರ್ ಮತ್ತು ಭಾರತ್‌ಪೇ ವಿವಾದ

2022 ರಲ್ಲಿ, ಅಶ್ನೀರ್ ಗ್ರೋವರ್ ಅವರನ್ನು ಭಾರತ್‌ಪೇಯಿಂದ ಹೊರಹಾಕಬೇಕಾಯಿತು. ಇದರ ನಂತರ, ಅಶ್ನೀರ್ ಗ್ರೋವರ್ ಕಂಪನಿ ಮತ್ತು ಅವರ ಮಾಜಿ ಸಹೋದ್ಯೋಗಿಗಳ ವಿರುದ್ಧ ಅನೇಕ ಆರೋಪಗಳನ್ನು ಮಾಡಿದರು. ಇತ್ತೀಚಿನ ವಾರಗಳಲ್ಲಿ, ಸಮೀರ್ ಮತ್ತು ಗ್ರೋವರ್ ಪರಸ್ಪರರ ಮೇಲೆ ವೈಯಕ್ತಿಕ ದಾಳಿಯನ್ನು ಸಹ ನೋಡಿದ್ದಾರೆ. ಇತ್ತೀಚೆಗೆ, ಅಶ್ನೀರ್ ಗ್ರೋವರ್ ಮೂಲಕ ಇಂತಹ ಅನೇಕ ಟ್ವೀಟ್‌ಗಳನ್ನು ಮಾಡಲಾಗಿದೆ, ಇದು ಕಂಪನಿ ಮತ್ತು ಅದರ ಹಿಂದಿನ ಸಹೋದ್ಯೋಗಿಗಳ ಬಗ್ಗೆ ಆಕ್ರಮಣಕಾರಿ ಮನೋಭಾವವನ್ನು ತೋರಿಸುತ್ತದೆ.

ಇದನ್ನೂ ಓದಿ : ವೇತನ ವರ್ಗಕ್ಕೆ ಸಿಹಿ ಸುದ್ದಿ.! ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News