Union Budget 2024: ಈ ಬಾರಿಯ ಬಜೆಟ್ ನಲ್ಲಿ ಮನೆ ಖರೀದಿಸುವವರ ಮೇಲಿನ ತೆರಿಗೆ ಭಾರ ಕಡಿಮೆಯಾಗಲಿದೆಯೇ?

Budget 2024: ಗೃಹ ಸಾಲದ ಅಸಲು ಮತ್ತು ಬಡ್ಡಿ ಮರುಪಾವತಿಯ ಮೇಲೆ ಮನೆ ಖರೀದಿದಾರರಿಗೆ ಲಭ್ಯವಿರುವ ತೆರಿಗೆ ವಿನಾಯಿತಿ ಮಿತಿಯು ವರ್ಷಗಳವರೆಗೆ ಹೆಚ್ಚಿಲ್ಲ. ಹೀಗಾಗಿ ಈ ಬಾರಿ ಹಣಕಾಸು ಸಚಿವರಿಂದ ಕೊಂಚ ಪರಿಹಾರ ಸಿಗುವ ನಿರೀಕ್ಷೆಯಲ್ಲಿ ಮನೆ ಖರೀದಿದಾರರು ಇದ್ದಾರೆ. (Business News In Kannada / Budget 2024 News In Kannada)  

Written by - Nitin Tabib | Last Updated : Jan 20, 2024, 09:45 PM IST
  • ಪ್ರಸ್ತುತ, ಸೆಕ್ಷನ್ 80C ಅಡಿಯಲ್ಲಿ ಕಡಿತದ ಪ್ರಯೋಜನವು ಗೃಹ ಸಾಲದ ಅಸಲು ಮೊತ್ತದ ಮರು-ಪಾವತಿಯ ಮೇಲೆ ಲಭ್ಯವಿದೆ.
  • ಆದರೆ ಈ ಪ್ರಯೋಜನವು ಸೆಕ್ಷನ್ 80C ಯ 1.5 ಲಕ್ಷ ರೂ.ಗಳ ವಾರ್ಷಿಕ ಮಿತಿಯೊಳಗೆ ಬರುತ್ತದೆ,
  • ಇದರಲ್ಲಿ 2014 ರಿಂದ ಯಾವುದೇ ಬದಲಾವಣೆಯಾಗಿಲ್ಲ.
Union Budget 2024: ಈ ಬಾರಿಯ ಬಜೆಟ್ ನಲ್ಲಿ ಮನೆ ಖರೀದಿಸುವವರ ಮೇಲಿನ ತೆರಿಗೆ ಭಾರ ಕಡಿಮೆಯಾಗಲಿದೆಯೇ? title=

ನವದೆಹಲಿ: ಫೆಬ್ರವರಿ 1 ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಖಂಡಿತವಾಗಿಯೂ ತಮಗೆ  ಸ್ವಲ್ಪ ಪರಿಹಾರವನ್ನು ನೀಡುತ್ತಾರೆ ಎಂದು ಮನೆಗಳನ್ನು ಖರೀದಿಸುವ ತೆರಿಗೆದಾರರು ಬಯಸುತ್ತಿದ್ದಾರೆ. ಮನೆ ಖರೀದಿದಾರರ ದೃಷ್ಟಿಕೋನದಿಂದ ನೋಡಿದರೆ, ಹಣಕಾಸು ಸಚಿವರು ಅವರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ದೊಡ್ಡ ಘೋಷಣೆಗಳು ಆಗುವುದಿಲ್ಲ ಎನ್ನಲಾಗಿದ್ದರೂ ಕೂಡ, ಸರ್ಕಾರ ಬಯಸಿದರೆ, ಕನಿಷ್ಠ ತೆರಿಗೆದಾರರ ಕೆಲವು ನ್ಯಾಯಸಮ್ಮತ ಬೇಡಿಕೆಗಳನ್ನು ಪರಿಗಣಿಸುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಮತವಾಗಿದೆ. (Business News In Kannada / Budget 2024 News In Kannada)

ಆದಾಯ ತೆರಿಗೆಯಲ್ಲಿ ಈಗ ಯಾವ ಪರಿಹಾರ ಲಭ್ಯವಿದೆ?
ಆದಾಯ ತೆರಿಗೆ ಕಾಯಿದೆ 1961 ರ ಅಡಿಯಲ್ಲಿ, ಗೃಹ ಸಾಲವನ್ನು ತೆಗೆದುಕೊಳ್ಳುವ ಮೂಲಕ ಮನೆಗಳನ್ನು ಖರೀದಿಸುವವರಿಗೆ ತೆರಿಗೆ ವಿನಾಯಿತಿ ನೀಡಲು ಕೆಲವು ನಿಬಂಧನೆಗಳನ್ನು ಮಾಡಲಾಗಿದೆ. ಈ ನಿಬಂಧನೆಗಳ ಅಡಿಯಲ್ಲಿ, ಗೃಹ ಸಾಲದ ಮೇಲೆ ಪಾವತಿಸಿದ ಬಡ್ಡಿ ಮತ್ತು ಅಸಲು ಮೊತ್ತದ ವಿವಿಧ ವಿಭಾಗಗಳ ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನವು ಲಭ್ಯವಿದೆ. ಇದು ಹಳೆಯ ತೆರಿಗೆ ಪದ್ಧತಿಯನ್ನು (ಓಟಿಆರ್) ಅಳವಡಿಸಿಕೊಳ್ಳುವ ತೆರಿಗೆದಾರರ ತೆರಿಗೆ ಹೊಣೆಗಾರಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಆದರೆ ಈ ತೆರಿಗೆ ಪ್ರಯೋಜನಗಳಿಗೆ ಸಂಬಂಧಿಸಿದ ಕೆಲವು ಮಿತಿಗಳಿವೆ, ಇದು ಕಳೆದ ಹಲವು ವರ್ಷಗಳಿಂದ ಬದಲಾಗಿಲ್ಲ. ತೆರಿಗೆದಾರರು ಈಗ ಹೊಸ ಬಜೆಟ್‌ನಲ್ಲಿ ತಮ್ಮ ಈ ಬದಲಾವಣೆ ನಿರೀಕ್ಷಿಸುತ್ತಿರುವುದಕ್ಕೆ ಇದು ಕಾರಣವಾಗಿದೆ.

ಗೃಹ ಸಾಲದ ಬಡ್ಡಿಯ ಮೇಲಿನ ಕಡಿತದ ಮಿತಿಯನ್ನು ಹೆಚ್ಚಾಗಬೇಕು!
ಗೃಹ ಸಾಲದ ಬಡ್ಡಿ ಮರುಪಾವತಿಗೆ ಈಗಿರುವ ಮಿತಿಯನ್ನು ಹೆಚ್ಚಿಸಬೇಕು ಎಂಬುದು ಮನೆ ಖರೀದಿದಾರರ ಪ್ರಮುಖ ಬೇಡಿಕೆಯಾಗಿದೆ. ಪ್ರಸ್ತುತ, ಸೆಕ್ಷನ್ 24 (ಬಿ) ಅಡಿಯಲ್ಲಿ ಕಡಿತದ ಮಿತಿಯು ಗರಿಷ್ಠ 2 ಲಕ್ಷ ರೂ.ಗಳಾಗಿದ್ದು, ಇದನ್ನು 10 ವರ್ಷಗಳ ಹಿಂದೆ 2014 ರಲ್ಲಿ ನಿಗದಿಪಡಿಸಲಾಗಿದೆ. ಅಂದರೆ ನಿಮ್ಮ ಗೃಹ ಸಾಲದ ಮೇಲೆ ನೀವು ಪ್ರತಿ ವರ್ಷ 4-5 ಲಕ್ಷ ರೂಪಾಯಿಗಳ ಬಡ್ಡಿಯನ್ನು ಪಾವತಿಸಿದರೂ, ನೀವು 2 ಲಕ್ಷ ರೂಪಾಯಿಗಳ ಮೇಲೆ ಮಾತ್ರ ತೆರಿಗೆ ಪ್ರಯೋಜನವನ್ನು ಪಡೆಯುತ್ತೀರಿ. ಕಳೆದ 10 ವರ್ಷಗಳಲ್ಲಿ ಮನೆ ಬೆಲೆಗಳು ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚಿವೆ. ಕಳೆದ ಒಂದೂವರೆ-ಎರಡು ವರ್ಷಗಳಲ್ಲಿ ಬಡ್ಡಿ ದರವೂ ಗಣನೀಯವಾಗಿ ಏರಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮನೆ ಖರೀದಿಸಲು ಅಗತ್ಯವಿರುವ ಗೃಹ ಸಾಲ ಮತ್ತು ಅದರ ಮೇಲಿನ ಬಡ್ಡಿ ಪಾವತಿ ಎರಡೂ ಗಮನಾರ್ಹವಾಗಿ ಹೆಚ್ಚಾಗಿದೆ. ಆದ್ದರಿಂದ ಈಗ ಈ ಮಿತಿಯನ್ನು 4 ಲಕ್ಷ ರೂ.ಗೆ ಹೆಚ್ಚಿಸಬೇಕು. ಇಲ್ಲದಿದ್ದರೆ ಮನೆ ಖರೀದಿದಾರರಿಗೆ ಬಡ್ಡಿ ಮತ್ತು ತೆರಿಗೆ ಎರಡರ ಹೊರೆಯೂ ಮುಂದುವರಿಯುತ್ತದೆ.

ಇದನ್ನೂ ಓದಿ-Union Budget 2024: ಮನೆ ಖರೀದಿಸುವವರಿಗೆ ಮೋದಿ ಸರ್ಕಾರದ ಭಾರಿ ಉಡುಗೊರೆ, ಶೀಘ್ರದಲ್ಲೇ ಸಿಗಲಿದೆ ಈ ವಿನಾಯ್ತಿ ಲಾಭ!

ಗೃಹ ಸಾಲದ ಅಸಲು ಮರುಪಾವತಿಯ ಮೇಲೆ ಪ್ರತ್ಯೇಕ ರಿಯಾಯಿತಿ 
ಪ್ರಸ್ತುತ, ಸೆಕ್ಷನ್ 80C ಅಡಿಯಲ್ಲಿ ಕಡಿತದ ಪ್ರಯೋಜನವು ಗೃಹ ಸಾಲದ ಅಸಲು ಮೊತ್ತದ ಮರು-ಪಾವತಿಯ ಮೇಲೆ ಲಭ್ಯವಿದೆ. ಆದರೆ ಈ ಪ್ರಯೋಜನವು ಸೆಕ್ಷನ್ 80C ಯ 1.5 ಲಕ್ಷ ರೂ.ಗಳ ವಾರ್ಷಿಕ ಮಿತಿಯೊಳಗೆ ಬರುತ್ತದೆ, ಇದರಲ್ಲಿ 2014 ರಿಂದ ಯಾವುದೇ ಬದಲಾವಣೆಯಾಗಿಲ್ಲ. ಮಕ್ಕಳ ಶಾಲಾ ಶುಲ್ಕಗಳು, ಜೀವ ವಿಮಾ ಕಂತುಗಳು ಮತ್ತು ಹೆಚ್ಚಿನ ತೆರಿಗೆ ಉಳಿತಾಯ ಹೂಡಿಕೆಗಳು ಸಹ ಈ ಮಿತಿಯ ಅಡಿಯಲ್ಲಿ ಬರುತ್ತವೆ. ಆದರೆ ಕಳೆದ 10 ವರ್ಷಗಳಲ್ಲಿ ಮಕ್ಕಳ ಶಾಲಾ ಶುಲ್ಕ ಒಂದೇ ಪರಿಗಣಿಸಿದರೆ, ಅದು ಕನಿಷ್ಠ ಎಂದರೆ ದ್ವಿಗುಣಗೊಂಡಿದೆ. ಇದರೊಂದಿಗೆ, ಜೀವ ವಿಮೆಯ ಅಗತ್ಯತೆ ಮತ್ತು ಅದರ ಪ್ರೀಮಿಯಂಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಈ 1.5 ಲಕ್ಷದ ಮಿತಿಯು ಎಲ್ಲಾ ತೆರಿಗೆ ಪಾವತಿದಾರರಿಗೆ ತುಂಬಾ ಅಸಮರ್ಪಕ ಎಂದು ಸಾಬೀತಾಗಿದೆ. ಆದ್ದರಿಂದ ಗೃಹ ಸಾಲದ ಬಡ್ಡಿಯಂತೆ ಗೃಹ ಸಾಲದ ಅಸಲು ಮರುಪಾವತಿಗೂ ಪ್ರತ್ಯೇಕ ತೆರಿಗೆ ವಿನಾಯಿತಿ ನೀಡಬೇಕು ಎಂಬ ಬೇಡಿಕೆಯೂ ಕೇಳಿ ಬರುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಮನೆ ಎನ್ನುವುದು ವಾಸಿಸಲು ಇರುವ ಮೂಲ ಸೌಕರ್ಯವಾಗಿದ್ದು, ಇದು ನಾಗರಿಕರ ಅಗತ್ಯವಷ್ಟೇ ಅಲ್ಲ ಸರ್ಕಾರದ ಜವಾಬ್ದಾರಿಯೂ ಹೌದು. ಇದೆ ಕಾರಣದಿಂದ ಸರ್ಕಾರ ಬಡವರಿಗೆ ಮನೆ ನೀಡಲು ಬಜೆಟ್ ಮೀಸಲಿಡುತ್ತದೆ. ಆದರೆ ಮನೆ ಕಟ್ಟಲು ಸಾಲ ಪಡೆದು ಜೀವನವಿಡೀ ಆ ಸಾಲವನ್ನು ಮರುಪಾವತಿ ಮಾಡುತ್ತಲೇ ಇರುವ ತೆರಿಗೆದಾರರಿಗೆ ಸರ್ಕಾರ ಕನಿಷ್ಠ ತೆರಿಗೆ ವಿನಾಯಿತಿಯ ಲಾಭವನ್ನು ನೀಡಬಹುದು.

ಇದನ್ನೂ ಓದಿ-World's Richest Family: 25,38,667 ಕೋಟಿ ಬೆಲೆ ಬಾಳುವ ಆಸ್ತಿ, 700 ಕಾರುಗಳು, ಇದೆ ನೋಡಿ ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ!

ಚುನಾವಣೆಗೂ ಮುನ್ನ ಮತದಾರರ ಮೇಲೆ ಕರುಣೆ ತೋರಲಿದೆಯೇ ಸರ್ಕಾರ?
ಇದು ಮಧ್ಯಂತರ ಬಜೆಟ್ ಆಗಿದ್ದರೂ, ಇದರಲ್ಲಿ ದೊಡ್ಡ ಘೋಷಣೆಗಳನ್ನು ನಿರೀಕ್ಷಿಸಬೇಡಿ ಎಂದು ಹಣಕಾಸು ಸಚಿವರು  ಇತ್ತೀಚೆಗಷ್ಟೇ ಹೇಳಿದ್ದಾರೆ. ಆದರೆ 5 ವರ್ಷಗಳ ಹಿಂದೆ, 2019 ರ ಚುನಾವಣಾ ಪೂರ್ವ ಮಧ್ಯಂತರ ಬಜೆಟ್‌ನಲ್ಲಿ, ಮೋದಿ ಸರ್ಕಾರ, ಸಂಪ್ರದಾಯವನ್ನು ನಿರ್ಲಕ್ಷಿಸಿ, ತೆರಿಗೆ ಪಾವತಿಸುವ ಮತದಾರರಿಗೆ ದೊಡ್ಡ ಪ್ರಮಾಣದ ಪರಿಹಾರವನ್ನು ನೀಡುವ ಕೆಲಸವನ್ನು ಮಾಡಿತ್ತು. ಈ ಕಾರಣಕ್ಕಾಗಿಯೇ ಈ ಬಾರಿಯೂ ಚುನಾವಣಾ ಪೂರ್ವ ಬಜೆಟ್‌ನಲ್ಲಿ ಮತದಾರರು ಸರ್ಕಾರ  ಮತದಾರರಿಗೆ ಕರುಣೆ ತೋರುವ ನಿರೀಕ್ಷೆ ಹೊಂದಿದ್ದಾರೆ. ಅಧಿಕಾರವನ್ನು ಪಡೆಯಲು ಪ್ರಯತ್ನಿಸುತ್ತಿರುವ ರಾಜಕಾರಣಿಗಳು ಸಾಮಾನ್ಯ ಜನರ ಆಶಯಗಳಿಗೆ ಗರಿಷ್ಠ ಗಮನ ನೀಡುವ ಸಮಯ ಎಂದರೆ ಅದು ಚುನಾವಣೆಯ ಸಮಯ. ಹೀಗಿರುವಾಗ ಭಾರಿ ಆದಾಯ ತೆರಿಗೆ ಕಟ್ಟುವ ಮತದಾರರೂ ತಮ್ಮ ನ್ಯಾಯಸಮ್ಮತವಾದ ಕೆಲವು ಬೇಡಿಕೆಗಳು ಈಡೇರುವ ನಿರೀಕ್ಷೆಯಲ್ಲಿದ್ದರೆ, ಇದರಲ್ಲಿ ತಪ್ಪೇನಿಲ್ಲವಲ್ಲ?

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News