ಎಣ್ಣೆ ಏಟಲ್ಲಿ ನಡೆಯಲಾಗದೆ, ತುರ್ತು ಪರಿಸ್ಥಿತಿ ಅಂತ 108ಗೆ ಕರೆ ಮಾಡಿದ ಕುಡುಕ..! ಮುಂದೆನಾಯ್ತು..! 

Drunk Man called 108 : ಮದ್ಯ ಮದದಲ್ಲಿ ಕುಡುಕರು ಏನ್‌ ಮಾಡ್ತಾರೆ ಅಂತ ಗೊತ್ತೆ ಆಗುವುದಿಲ್ಲ. ಕೆಲವೊಂದಿಷ್ಟು ಮದ್ಯಪ್ರಿಯರ ಮಾತುಗಳು, ಅವರಾಡುವ ರೀತಿ ನಗು ಬರಿಸುವಂತಿರುತ್ತವೆ, ಇನ್ನೂ ಕೆಲವರು ಕ್ರೂರವಾಗಿ ವರ್ತಿಸುತ್ತಾರೆ. ಇದೀಗ ಇಲ್ಲೊಬ್ಬ ಕುಡುಕ ಎಣ್ಣೆ ಏಟಲ್ಲಿ ತುರ್ತು ಪರಿಸ್ಥಿತಿ ಅಂತ 108ಗೆ ಕರೆ ಮಾಡಿದ ಪ್ರಸಂಗ ನಡೆದಿದೆ.. ಮುಂದೇನಾಯ್ತು.. ಬನ್ನಿ ನೋಡೋಣ..

Written by - Krishna N K | Last Updated : Feb 1, 2024, 06:25 PM IST
  • ಕುಡಿದ ಮತ್ತಿನಲ್ಲಿ ಮದ್ಯಪ್ರಿಯರು ಏನ್‌ ಮಾಡ್ತಾರೆ ಅಂತ ಅವರಿಗೆ ಗೊತ್ತಿರುವುದಿಲ್ಲ.
  • ಕುಡುನೊಬ್ಬ ಕುಡಿದ ಮತ್ತಿನಲ್ಲಿ 108 ಕರೆ ಮಾಡಿ ಆಂಬ್ಯುಲೆನ್ಸ್ ಕರೆಯಿಸಿಕೊಂಡಿದ್ದಾನೆ.
  • ಕುಡುಕ ಎಣ್ಣೆ ಏಟಲ್ಲಿ ತುರ್ತು ಪರಿಸ್ಥಿತಿ ಅಂತ 108ಗೆ ಕರೆ ಮಾಡಿದ್ದಾನೆ.. ಮುಂದೆನಾಯ್ತು..?
ಎಣ್ಣೆ ಏಟಲ್ಲಿ ನಡೆಯಲಾಗದೆ, ತುರ್ತು ಪರಿಸ್ಥಿತಿ ಅಂತ 108ಗೆ ಕರೆ ಮಾಡಿದ ಕುಡುಕ..! ಮುಂದೆನಾಯ್ತು..!  title=

Drunken called Ambulance : ಕುಡಿದ ಮತ್ತಿನಲ್ಲಿ ಮದ್ಯಪ್ರಿಯರು ಏನ್‌ ಮಾಡ್ತಾರೆ ಅಂತ ಅವರಿಗೆ ಗೊತ್ತಿರುವುದಿಲ್ಲ. ಸಧ್ಯ ಕುಡುನೊಬ್ಬ ಕುಡಿದ ಮತ್ತಿನಲ್ಲಿ 108 ಕರೆ ಮಾಡಿ ಆಂಬ್ಯುಲೆನ್ಸ್ ಕರೆಯಿಸಿಕೊಂಡು ತನ್ನನ್ನು ತನ್ನ ಊರಿಗೆ ಡ್ರಾಪ್‌ ಮಾಡುವಂತೆ ಕೇಳಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ವ್ಯಕ್ತಿಯೊಬ್ಬ ವಿಪರೀತ ಕುಡಿದು ನಡೆಯಲು ಸಹ ತ್ರಾಣವಿಲ್ಲದೆ ತುರ್ತು ಸೇವೆ 108ಗೆ ಕರೆ ಮಾಡಿದ್ದಾನೆ. ಅರ್ಜೆಂಟ್.. ಅಪಘಾತವಾಗಿದೆ ಅಂತ ಭಾವಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ತಲುಪಿದ್ದರು. ಆದ್ರೆ ನಿಜ ಸ್ಥಿತಿ ತಿಳಿದು ಬೆಚ್ಚಿಬಿದ್ದಿದ್ದಾರೆ. 

ಇದನ್ನೂ ಓದಿ:ಗ್ಯಾರಂಟಿ ಯೋಜನೆ ರದ್ದು, ಕಾಂಗ್ರೆಸ್ ಪಕ್ಷದ ರಹಸ್ಯ ಚರ್ಚೆ ಬಯಲು : ಹೆಚ್‌ಡಿಕೆ

ಹೌದು... ಈ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ. ಹೈದರಾಬಾದ್-ವಾರಂಗಲ್ ರಾಷ್ಟ್ರೀಯ ಹೆದ್ದಾರಿಯ ಭುವನಗಿರಿಯಲ್ಲಿ ರಮೇಶ್ ಎಂಬ ವ್ಯಕ್ತಿ ಬುಧವಾರ 108ಗೆ ಕರೆ ಮಾಡಿದ್ದಾನೆ. ವಿಪರೀತ ಕುಡಿದಿದ್ದ ಆತ, ನಡೆಯಲು ಸಾಧ್ಯವಾಗದೆ ಆಂಬುಲೆನ್ಸ್‌ಗೆ ಕರೆ ಮಾಡಿದ್ದ.

ಇನ್ನು ತುರ್ತು ಪರಿಸ್ಥಿತಿ ಅಂತ ಸ್ಥಳಕ್ಕೆ ಬಂದ ಆಂಬ್ಯುಲೆನ್ಸ್‌ ಸಿಬ್ಬಂದಿ ಕುಡುಕನ್ನು ಕಂಡು ಶಾಕ್‌ ಆಗಿದ್ದಾರೆ. ಅಲ್ಲದೆ, ಆತ ತನ್ನನ್ನು ತಮ್ಮ ಊರಿಗೆ ಕರೆದುಕೊಂಡು ಹೋಗುವಂತೆ 108 ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ದೃಶ್ಯವನ್ನು ಸಿಬ್ಬಂದಿ ತಮ್ಮ ಫೋನ್‌ ಕ್ಯಾಮರಾದಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಇಷ್ಟು ಕಳಪೆ ಬಜೆಟ್ ನಾನು ನೋಡಿರಲಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಹೈದರಾಬಾದ್‌ನಿಂದ ಜನಗಾಮಕ್ಕೆ ಹೋಗಬೇಕು. ನಡೆದಾಡಲು ಸಾಧ್ಯವಾಗುತ್ತಿಲ್ಲ, ಬಸ್‌ಗಳಿಲ್ಲ. ನನ್ನನ್ನು ಜನಗಾಮಕ್ಕೆ ಬಿಡಿ. ನನಗೆ ತುರ್ತು ಪರಿಸ್ಥಿತಿ ಇದೆ. ನಾನು ಮೂರ್ಛೆ ಹೋಗಬಹುದು ಅಂತ ಕುಡುಕ ಆಂಬ್ಯುಲೆನ್ಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾನೆ.

ಕೊನೆಗೆ ಕುಡುಕನ ಕಾಟಕ್ಕೆ ಬೇಸತ್ತ ಸಿಬ್ಬಂದಿ ಅವನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಮೇಶನ ಜಾಣತನ ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತು ಯಾವುದೇ ಅಧಿಕಾರಿಗಳು ಇನ್ನೂ ಸ್ಪಂದಿಸಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News