ಅಂತರ್ಜಾತಿ ಪ್ರೀತಿ ದ್ವೇಷದ ಹಿನ್ನಲೆ ಜೀವಜಲಕ್ಕೆ ವಿಷ ಬೆರೆಸಿದ ಕಿಡಿಗೇಡಿಗಳು

ಇದೊಂದು ಮಾದಿಗ ಯುವಕ  ಮತ್ತು ಲಿಂಗಾಯತ ಯುವತಿ ಪ್ರೇಮ ಪ್ರಕರಣದ ದ್ವೇಷದ ಕಿಡಿ ಎನ್ನಲಾಗಿದ್ದು ಕವಾಡಿಗರಹಟ್ಟಿಯಲ್ಲಿ ಒಂದೂವರೆ ವರ್ಷದ ಹಿಂದೆ ನಡೆದ ಫೋಕ್ಸೋ ಪ್ರಕರಣದ ದ್ವೇಷವೇ ಟ್ಯಾಂಕ್ ಗೆ ವಿಷ ಹಾಕಲು ಕಾರಣವಾಗಿದೆ ಎಂದು ತಿಳಿದುಬಂದಿದೆ. 

Written by - Yashaswini V | Last Updated : Aug 2, 2023, 02:45 PM IST
  • ಕಲುಷಿತ ನೀರು ಸೇವಿಸಿದ್ದ ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ನಡೆದಿದೆ.
  • ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಮಂಜುಳಾ(21) ಚಿಕಿತ್ಸೆ ಫಲಿಸದೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ.
  • ಮಂಜುಳಾ ಕುಟುಂಬಸ್ಥರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಅಂತರ್ಜಾತಿ ಪ್ರೀತಿ ದ್ವೇಷದ ಹಿನ್ನಲೆ ಜೀವಜಲಕ್ಕೆ ವಿಷ ಬೆರೆಸಿದ ಕಿಡಿಗೇಡಿಗಳು  title=

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವಿಸಿ ಹತ್ತಾರು ಜನರು ಅಸ್ವಸ್ಥಗೊಂಡಿರುವ ಪ್ರಕರಣಕ್ಕೆ ಸಂಬಧಿಸಿದಂತೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಅಂತರ್ ಜಾತಿ ಪ್ರೇಮ ಪ್ರಕರಣವೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. 

ಏನಿದು ಪ್ರಕರಣ? 
ಕೋಟೆನಾಡು ಚಿತ್ರದುರ್ಗದ  ಕವಾಡಿಗರಹಟ್ಟಿ ಎಂಬ ಬಡಾವಣೆಗೆ ನಗರಸಭೆ ಕಡೆಯಿಂದ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲಾಗಿತ್ತು. ಚಿತ್ರದುರ್ಗ ಜಿಲ್ಲೆಯ ಹೊರವಲಯದಲ್ಲಿರುವ ಕವಾಡಿಗರಹಟ್ಟಿಯಲ್ಲಿ ಜುಲೈ 31ರ ತಡರಾತ್ರಿ ಕಲುಷಿತ ನೀರು ಕುಡಿದಿದ್ದ ಹತ್ತಾರು ಜನ ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. 

ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಮಂಜುಳಾ(21) ಚಿಕಿತ್ಸೆ ಫಲಿಸದೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದರು. ಮಂಜುಳಾ ಕುಟುಂಬಸ್ಥರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಗರಸಭೆಯಿಂದ ಸರಬರಾಜು ಮಾಡುವ ನೀರು ಕಲುಷಿತಗೊಂಡಿದ್ದು ನೀರಿನ ಟ್ಯಾಂಕ್ ತೊಳೆಯುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದರು. ಆದರೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಅಂತರ್ಜಾತಿ ಪ್ರೀತಿ ದ್ವೇಷವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ಒಂದೇ ಹುಡುಗಿ‌ ಹಿಂದೆ ಬಿದ್ದ ಸ್ನೇಹಿತರು: ಒಬ್ಬನ ಕೊಲೆಯಲ್ಲಿ ಅಂತ್ಯವಾದ ಲವ್ ಸ್ಟೋರಿ

ಅಂತರ್ಜಾತಿ ಪ್ರೀತಿ ದ್ವೇಷವೇ ಜೀವ ಜಲ ವಿಷವಾಗಲು ಕಾರಣ!
ಹೌದು, ಇದೊಂದು ಮಾದಿಗ ಯುವಕ  ಮತ್ತು ಲಿಂಗಾಯತ ಯುವತಿ ಪ್ರೇಮ ಪ್ರಕರಣದ ದ್ವೇಷದ ಕಿಡಿ ಎನ್ನಲಾಗಿದ್ದು ಕವಾಡಿಗರಹಟ್ಟಿಯಲ್ಲಿ ಒಂದೂವರೆ ವರ್ಷದ ಹಿಂದೆ ನಡೆದ ಫೋಕ್ಸೋ ಪ್ರಕರಣದ ದ್ವೇಷವೇ ಟ್ಯಾಂಕ್ ಗೆ ವಿಷ ಹಾಕಲು ಕಾರಣ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ಟೆಕ್ಕಿಗಳನ್ನು ಟಾರ್ಗೆಟ್ ಮಾಡಿ ಸುಲಿಗೆ : ಮೂವರು ಮಂಗಳಮುಖಿಯರು ಸೇರಿ ನಾಲ್ವರ ಬಂಧನ

ಯುವಕ ನೀರುಗಂಟಿಯಾಗಿದ್ದು ಪ್ರೀತಿ ಮಾಡುತ್ತಿದ್ದ ಆಗ ಪೋಕ್ಸೋ ಕೇಸು ದಾಖಲಾಗಿ ಜೈಲು ವಾಸಿಯಾಗಿ ಬಂದಿದ್ದ. ಆಕೆ ಬಾಲ ಮಂದಿರದಲ್ಲಿ ಇದ್ದಳು.‌ ಈ ವೈಷಮ್ಯಕ್ಕೆ ಹುಡುಗಿ ತಂದೆಯೇ ಕುಡಿಯುವ ನೀರಿನ ಟ್ಯಾಂಕ್ ಗೆ ವಿಷ ಹಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News