ಕಾರಿನಲ್ಲಿ 15 ಕೆಜಿ‌ ತೂಕದ ಆನೆ ದಂತ ಸಾಗಾಟ, ಮೂವರ ಬಂಧನ

ಅಕ್ರಮವಾಗಿ ಆನೆದಂತ ಸಾಗಿಸುತ್ತಿದ್ದವರನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ‌ ಸತ್ತೇಗಾಲ ಹ್ಯಾಂಡ್ ಪೋಸ್ಟ್ ನಲ್ಲಿ‌ ನಡೆದಿದೆ.‌

Written by - Chetana Devarmani | Last Updated : Jun 13, 2022, 04:02 PM IST
  • ಕಾರಿನಲ್ಲಿ 15 ಕೆಜಿ‌ ತೂಕದ ಆನೆದಂತ ಸಾಗಾಟ
  • ಕೊಳ್ಳೇಗಾಲದಲ್ಲಿ ಮೂವರ ಬಂಧನ
  • ಆನೆ ದಂತ, ಆಲ್ಟೋ ಕಾರು, ಮೂರು ಮೊಬೈಲ್ ವಶಕ್ಕೆ
ಕಾರಿನಲ್ಲಿ 15 ಕೆಜಿ‌ ತೂಕದ ಆನೆ ದಂತ ಸಾಗಾಟ, ಮೂವರ ಬಂಧನ   title=
ಆನೆದಂತ ಸಾಗಾಟ

ಚಾಮರಾಜನಗರ: ಅಕ್ರಮವಾಗಿ ಆನೆದಂತ ಸಾಗಿಸುತ್ತಿದ್ದವರನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ‌ ಸತ್ತೇಗಾಲ ಹ್ಯಾಂಡ್ ಪೋಸ್ಟ್ ನಲ್ಲಿ‌ ನಡೆದಿದೆ.‌

ಇದನ್ನೂ ಓದಿ: ಬಿಹಾರದ ಕಿಶನ್‌ಗಂಜ್‌ನಲ್ಲಿ ಕನ್ನಡಿಗ ಯೋಧನ ಮೃತದೇಹ ಪತ್ತೆ!

ಚಿಕ್ಕಮಗಳೂರು ಮೂಲದ ಪ್ರೀತಮ್( 31), ಜಗದೀಶ್(21), ಪುನೀತ್(28) ಬಂಧಿತ ಆರೋಪಿಗಳಾಗಿದ್ದು ಹೇಮಂತ್(26) ಪರಾರಿಯಾಗಿದ್ದಾನೆ. ಅಲ್ಟೊ ಕಾರಿನಲ್ಲಿ ಬೆಡ್ ಶೀಟ್‌ನಲ್ಲಿ ಆನೆ ದಂತ ಸುತ್ತಿಕೊಂಡು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಭಾರೀ ಗಾತ್ರದ ಆನೆ ದಂತಗಳಾಗಿದ್ದು, 15.9 ಕೆಜಿ ತೂಗಲಿದೆ. ಸದ್ಯ, ಆರೋಪಿಗಳಿಂದ ಆನೆ ದಂತ, ಆಲ್ಟೋ ಕಾರು, ಮೂರು ಮೊಬೈಲ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌. ‌

ಇದನ್ನೂ ಓದಿ: ಸಿದ್ಧಾಂತ್ ಕಪೂರ್‌ ಡ್ರಗ್ಸ್ ಸೇವಿಸಿದ್ದಾರೆ: ಡಿಸಿಪಿ ಭೀಮಾಶಂಕರ್ ಗುಳೇದ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News