ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಾರ್ಕಿಂಗ್ ಶುಲ್ಕ ವಸೂಲಾತಿಯಲ್ಲಿ ಗೋಲ್ ಮಾಲ್

ಬನ್ನೇರುಘಟ್ಟ ಪಾರ್ಕ್ ನಲ್ಲಿ ಪಾರ್ಕಿಂಗ್ ಗೋಲ್ ಮಾಲ್. ಟೆಂಡರ್ ಇಲ್ಲದೆ ಖಾಸಗಿ ಏಜೆನ್ಸಿಗೆ ವಸೂಲಿ ಗುತ್ತಿಗೆ. ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. 

Written by - Yashaswini V | Last Updated : Oct 6, 2023, 03:56 PM IST
  • ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಾರ್ಕಿಂಗ್ ಶುಲ್ಕ ವಸೂಲಾತಿಯಲ್ಲಿ ಗೋಲ್ ಮಾಲ್
  • ಟೆಂಡರ್ನಲ್ಲಿ ಕೋಟಿ ಕೋಟ್ ಆಗಿದ್ದ ಪಾರ್ಕಿಂಗ್ ಸಂಗ್ರಹ ಗುತ್ತಿಗೆ ಟೆಂಡರ್ ಇಲ್ಲದೆ ಖಾಸಗಿ ಏಜೆನ್ಸಿ ಪಾಲು
  • ಖುದ್ದು ನಾವೇ ಉದ್ಯಾನವನದ ಪಾರ್ಕಿಂಗ್ ಶುಲ್ಕ ವಸೂಲು ಎಂದ ಇಡಿ ಕಳ್ಳಾಟ ಜೀ ಕನ್ನಡ ನ್ಯೂಸ್ ನ ರಿಯಾಲಿಟಿ ಚೆಕ್ ನಲ್ಲಿ ಬಯಲು
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಾರ್ಕಿಂಗ್ ಶುಲ್ಕ ವಸೂಲಾತಿಯಲ್ಲಿ ಗೋಲ್ ಮಾಲ್ title=

ಬೆಂಗಳೂರು:  ಸೂತಕದ ಮನೆಯಾಗಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆಕ್ರಮದ ವಾಸನೆ. ಹೌದು ಚಿರತೆ ಮತ್ತು ಜಿಂಕೆಗಳ ಸರಣಿ ಸಾವಿನ ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಾರ್ಕಿಂಗ್ ಶುಲ್ಕ ವಸೂಲಾತಿಯಲ್ಲಿ ಆಕ್ರಮದ ಆರೋಪ ಕೇಳಿಬಂದಿದೆ. ಕೋಟಿ ರೂ ಟೆಂಡರ್ ಆಗಿದ್ದ ಪಾರ್ಕಿಂಗ್ ಲಾಟ್ ಇದೀಗ ಸದ್ದಿಲ್ಲದೆ ಖಾಸಗಿ ಏಜೆನ್ಸಿ ಪಾಲಾಗಿದ್ದು ಹೇಗೆ ಎಂಬುದು ಸದ್ಯದ ಯಕ್ಷ ಪ್ರಶ್ನೆಯಾಗಿದೆ.

ಹೌದು, ಚಿರತೆ ಮತ್ತು ಜಿಂಕೆಗಳ ಸರಣಿ ಸಾವಿನ ಬಳಿಕ ಸೂತಕದ ಮನೆಯಾಗಿದ್ದ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಇದೀಗ ಪಾರ್ಕಿಂಗ್ ಪೀಸ್ ವಸೂಲಾತಿಯಲ್ಲಿ ಆಕ್ರಮ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಜೀ ಕನ್ನಡ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದ್ದು, ರಿಯಾಲಿಟಿ ಚೆಕ್ ನಲ್ಲಿ ಪಾರ್ಕಿಂಗ್ ಪೀಸ್ ವಸೂಲಾತಿ ಆಕ್ರಮ ಬಟಾಬಯಲಾಗಿದೆ. ಖುದ್ದು ನಾವೇ ಅಂದ್ರೆ ಉದ್ಯಾನವನದ ಸಿಬ್ಬಂದಿ ಪಾರ್ಕಿಂಗ್ ಪೀಸ್ ವಸೂಲಿ ಮಾಡುತ್ತಿದ್ದೇವೆ. ಈ ಹಿಂದೆ ಟೆಂಡರ್ ಪಡೆದಿದ್ದವರು ಸರಿಯಾಗಿ ಸ್ವಚ್ಚತೆ ಕಾಪಾಡುತ್ತಿರಲಿಲ್ಲ. ಹಾಗಾಗಿ ಟೆಂಡರ್ ಕರೆದಿಲ್ಲ. ಕಳೆದ ಆಗಸ್ಟ್ ತಿಂಗಳಿಗೆ ಟೆಂಡರ್ ಅಂತ್ಯವಾಗಿದೆ. ಸುಮಾರು ಒಂದು ಕೋಟಿ ರೂ.ಗೆ ಆಗಿದ್ದ ಟೆಂಡರ್ ಮುಕ್ತಾಯದ ಬಳಿಕ ನಾವೇ ಖುದ್ದು ಪಾರ್ಕಿಂಗ್ ಪೀಸ್ ಕಲೆಕ್ಟ್ ಮಾಡುತ್ತಿದ್ದು, ನಾವೇ ಸ್ವಚ್ಚತೆ ಮಾಡುತ್ತಿದ್ದೇವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ತಿಳಿಸಿದ್ದಾರೆ.

ಇದನ್ನೂ ಓದಿ- ತುಂಗಭದ್ರಾ ಅಚ್ಚುಕಟ್ಟು ರೈತರಿಗೆ ನ.30 ತನಕ ನೀರು

ಆದರೆ, ಜೀ ಕನ್ನಡ ನ್ಯೂಸ್ ರಿಯಾಲಿಟಿ ಚೆಕ್ ನಲ್ಲಿ ಉದ್ಯಾನವನದ ಸಿಬ್ಬಂದಿ ಬದಲು ಖಾಸಗಿ ಏಜೆನ್ಸಿಗೆ ಪಾರ್ಕ್ ಪಾರ್ಕಿಂಗ್ ಪೀಸ್ ವಸೂಲು ಮಾಡುತ್ತಿರುವುದು ಕಂಡು ಬಂದಿದೆ. ಯಾವುದೇ ಅನಧಿಕೃತ ಕರಾರು ಇಲ್ಲದೆ ಆರ್ ಎಲ್ ಇ ಏಜೆನ್ಸಿಗೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಬೇನಾಮಿಯಾಗಿ ಏಜೆನ್ಸಿಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಭರಿಸುತ್ತಿದ್ದು, ದೊಡ್ಡ ಮಟ್ಟದಲ್ಲಿ ಗೋಲ್ಮಾಲ್ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಪುಷ್ಟಿ ನೀಡುವಂತೆ ಉದ್ಯಾನವನದ ಸಿಬ್ಬಂದಿಯಿಂದ ಸ್ವಚ್ಚತೆ ಸೇರಿದಂತೆ ನಿರ್ವಹಣೆ ಕೆಲಸ ಮಾಡಿಸುತ್ತಿದ್ದು,  ಪಾರ್ಕಿಂಗ್ ಶುಲ್ಕ ವಸೂಲಿ ಮಾತ್ರ ಖಾಸಗಿ ಏಜೆನ್ಸಿಗೆ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. 

ಇದನ್ನೂ ಓದಿ- Cauvery water dispute: ಕಾವೇರಿ ನೀರಿಗಾಗಿ ಜೀವಂತ ಸಮಾಧಿಯಾಗಿ ವಿನೂತನ ಪ್ರತಿಭಟನೆ!

ಇನ್ನೂ  ಜೀ ಕನ್ನಡ ನ್ಯೂಸ್ ರಿಯಾಲಿಟಿ ಚೆಕ್ ವೇಳೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಸಿಬ್ಬಂದಿ ತಮ್ಮ ಏಜೆನ್ಸಿಗೆ ಟೆಂಡರ್ ಯಾವುದು ಇಲ್ಲ, ನಾವು ಪೇಮೆಂಟ್ ಗೆ ಕೆಲಸ ಮಾಡುತ್ತೆವೆ. ಟೆಂಡರ್ ಏಜೆನ್ಸಿ ತಗೊಂಡಿಲ್ಲ, ಆದ್ರೆ ವರ್ಷಕ್ಕೆ ಇಷ್ಟು ಅಂತಾ ನೀಡಿ ಪಾರ್ಕಿಂಗ್ ವಸೂಲಿ‌ ಮಾಡುತ್ತೇವೆ ಎಂದು ಒಪ್ಪಿಕೊಂಡಿರುವುದು ರಹಸ್ಯ ಕಾರ್ಯಾಚರಣೆ ವೇಳೆ ಬಯಲಾಗಿದೆ.

ಒಟ್ನಲ್ಲಿ ವಿವಾದದ ಕೇಂದ್ರವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಖಾಸಗಿ ಏಜೆನ್ಸಿ ಕೊಟ್ಟದ್ದೇ ಲೆಕ್ಕ, ಹಣ ಕಟ್ಟಿದ್ದೆ ಪಕ್ಕಾ ಎನ್ನುವಂತಾಗಿದ್ದು, ಉದ್ಯಾನವನದಲ್ಲಿ ಸಾಕಷ್ಟು  ಸಿಬ್ಬಂದಿ ಇದ್ದರು ಖಾಸಗಿಯವರೆಗೆ ಯಾವುದೇ ಕರಾರು, ಟೆಂಡರ್ ನಡೆಸದೇ ಪಾರ್ಕಿಂಗ್ ಶುಲ್ಕ ವಸೂಲಾತಿಗೆ ಅವಕಾಶ ನೀಡಿರುವುದು ಆಕ್ರಮವಾಗಿದ್ದು, ಪಾರ್ಕಿಂಗ್ ಪೀಸ್ ನಲ್ಲಿ ನಡೆಯುತ್ತಿರುವ ಗೊಲ್ಮಾಲ್ ಬಗ್ಗೆ ತನಿಖೆಯಾಗಬೇಕೆಂದು ಪ್ರಾಣಿ ಪ್ರಿಯರ ಒತ್ತಾಯವಾಗಿದ್ದು, ಮುಂದೆ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News