ಜೆಎನ್ ಯುನಲ್ಲಿ ಮತ್ತೆ ಗಲಾಟೆ: ವಿದ್ಯಾರ್ಥಿಗಳು- ಸೆಕ್ಯುರಿಟಿಗಳ ಮಧ್ಯೆ ಮಾರಾಮಾರಿ

ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಗಳ ನಡುವಿನ ಮಾರಾಮಾರಿಯಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಜಗಳದಲ್ಲಿ ಅಂಗವಿಕಲ ವಿದ್ಯಾರ್ಥಿಯೂ ಗಾಯಗೊಂಡಿದ್ದಾನೆ. ಆತನಿಗೆ ಥಳಿಸಲಾಗಿದೆ ಎಂದು ವರದಿಯಾಗಿದೆ.

Written by - Bhavishya Shetty | Last Updated : Aug 22, 2022, 07:47 PM IST
    • ಜೆಎನ್ ಯುನಲ್ಲಿ ಮತ್ತೆ ವಿದ್ಯಾರ್ಥಿಗಳು- ಸೆಕ್ಯುರಿಟಿಗಳ ಮಧ್ಯೆ ಗಲಾಟೆ
    • ಗಲಾಟೆಯ ಸಂದರ್ಭದಲ್ಲಿ ಎಬಿವಿಪಿ ಹಣಕಾಸು ಅಧಿಕಾರಿಗೆ ಘೇರಾವ್
    • ವಿಧ್ವಂಸಕ ಕೃತ್ಯದಿಂದಾಗಿ ಇಡೀ ಕಚೇರಿಯೇ ಅಸ್ತವ್ಯಸ್ತಗೊಂಡಿದೆ
ಜೆಎನ್ ಯುನಲ್ಲಿ ಮತ್ತೆ ಗಲಾಟೆ: ವಿದ್ಯಾರ್ಥಿಗಳು- ಸೆಕ್ಯುರಿಟಿಗಳ ಮಧ್ಯೆ ಮಾರಾಮಾರಿ title=
JNU

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮತ್ತೊಮ್ಮೆ ಗಲಾಟೆ ನಡೆದಿದೆ. ಫೆಲೋಶಿಪ್ ಅನ್ನು ಬಿಡುಗಡೆ ಮಾಡದ ಕಾರಣ ಈ ಗಲಾಟೆ ನಡೆದಿದೆ. ಈ ಗಲಾಟೆಯ ಸಂದರ್ಭದಲ್ಲಿ ಎಬಿವಿಪಿ ಹಣಕಾಸು ಅಧಿಕಾರಿಗೆ ಘೇರಾವ್ ಹಾಕಿದೆ. ಇದಾದ ಬಳಿಕ ಕಾವಲುಗಾರರ ಜತೆ ಮಾತಿನ ಚಕಮಕಿ ನಡೆದಿದೆ. ಅಷ್ಟೃ ಅಲ್ಲದೆ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವವರೆಗೆ ಹೊರಬರುವುದಿಲ್ಲ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು. 

ಇದನ್ನೂ ಓದಿ: Pitra Paksha 2022: ಪಿತೃಪಕ್ಷದಲ್ಲಿ ಮರೆತೂ ಕೂಡ ಈ ನಿಯಮಗಳನ್ನು ಉಲ್ಲಂಘಿಸಬೇಡಿ

ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿಗಳ ನಡುವಿನ ಮಾರಾಮಾರಿಯಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಜಗಳದಲ್ಲಿ ಅಂಗವಿಕಲ ವಿದ್ಯಾರ್ಥಿಯೂ ಗಾಯಗೊಂಡಿದ್ದಾನೆ. ಆತನಿಗೆ ಥಳಿಸಲಾಗಿದೆ ಎಂದು ವರದಿಯಾಗಿದೆ. ಇದರೊಂದಿಗೆ ಹಲವು ಭದ್ರತಾ ಸಿಬ್ಬಂದಿಗೂ ಗಾಯಗಳಾಗಿವೆ. ಈ ವಿಧ್ವಂಸಕ ಕೃತ್ಯದಿಂದಾಗಿ ಇಡೀ ಕಚೇರಿಯೇ ಅಸ್ತವ್ಯಸ್ತಗೊಂಡಿದೆ.

ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಣಕಾಸು ಅಧಿಕಾರಿ ಕಚೇರಿಗೆ ಆಗಮಿಸಿದ್ದು, ಫೆಲೋಶಿಪ್ ಬಿಡುಗಡೆಯಾಗುವವರೆಗೆ ಕಚೇರಿ ಗೇಟ್ ತೆರೆಯದಂತೆ ಮನವಿ ಮಾಡಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಕೂಡ ಕಚೇರಿಯಲ್ಲೇ ಕುಳಿತು ಬೇಡಿಕೆ ಮಂಡಿಸುವುದಾಗಿ ತಿಳಿಸಿದರು.

ಜೆಎನ್‌ಯು ಆಡಳಿತದ ಋಣಾತ್ಮಕ ಧೋರಣೆ ವಿರುದ್ಧ ವಿದ್ಯಾರ್ಥಿಗಳು ಆಗಸ್ಟ್ 12 ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಚಳವಳಿಯನ್ನು ನಡೆಸುತ್ತಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಆಗಸ್ಟ್ 18 ರಂದು, ವಿದ್ಯಾರ್ಥಿಗಳು ರೆಕ್ಟರ್ ಎಕೆ ದುಬೆಯವರಿಗೆ ಘೇರಾವ್ ಹಾಕಿದ್ದರು ಮತ್ತು ಅವರ ಕಾರಿನ ಮುಂದೆ ನಿಂತು ಘೋಷಣೆಗಳನ್ನು ಕೂಗಿದ್ದರು.

ಈ ಪ್ರತಿಭಟನೆ ಮತ್ತು ಘರ್ಷಣೆಯ ನಡುವೆ, ಎಬಿವಿಪಿ ಜೆಎನ್‌ಯು ಘಟಕದ ಅಧ್ಯಕ್ಷ ರೋಹಿತ್ ಕುಮಾರ್ ಅವರು ಸ್ಕಾಲರ್‌ಶಿಪ್‌ನ ಕಾನೂನು ವಿಚಾರಣೆಗಾಗಿ ಬೆಳಿಗ್ಗೆ 11 ಗಂಟೆಗೆ ವಿದ್ಯಾರ್ಥಿವೇತನ ವಿಭಾಗಕ್ಕೆ ಬಂದಿದ್ದರು ಎಂದು ಆರೋಪಿಸಿದ್ದಾರೆ. ಬೆಳಗ್ಗೆ ಐವರು ವಿದ್ಯಾರ್ಥಿಗಳು ಇಲ್ಲಿಗೆ ಬಂದಿದ್ದು, ಸಮಯಕ್ಕೆ ಸರಿಯಾಗಿ ಬರುವ ಬದಲು ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಕಳೆದ 6 ತಿಂಗಳಿಂದ ವಿದ್ಯಾರ್ಥಿ ವೇತನ ಬಂದಿದ್ದರೂ ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ. 2019ರ ಸ್ಕಾಲರ್‌ಶಿಪ್ ಫಾರ್ಮ್‌ಗಳು ಜೆಎನ್‌ಯುನಲ್ಲಿ ಲಭ್ಯವಿದೆ. ಆದರೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವನ್ನು ನೀಡಲಾಗಿಲ್ಲ ಎಂದು ಆರೋಪಿಸಿದ್ದಾರೆ. 

ಇದನ್ನೂ ಓದಿ: ನಿಮ್ಮ ಕೈಯಲ್ಲಿರುವ ಈ ರೇಖೆ ಮದುವೆ ಬಳಿಕ ಅದೃಷ್ಟದ ಬಾಗಿಲು ತೆರೆಯುವಂತೆ ಮಾಡುತ್ತೆ!

ತಹಶೀಲ್ದಾರರು ಭೇಟಿಗೆ ಬರುವವರೆಗೆ ವಿದ್ಯಾರ್ಥಿಗಳು ಕಚೇರಿಯಿಂದ ಮೇಲೇಳುವುದಿಲ್ಲ ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ. ಫೆಲೋಶಿಪ್ ಹಣಕಾಸು ವಿಭಾಗದ ರಿಜಿಸ್ಟ್ರಾರ್ ಅಡಿಯಲ್ಲಿ ಮಾತ್ರ ಬರುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News