ಬಾಯ್‌ಫ್ರೆಂಡ್ ಜೊತೆ ಮನೆಯಲ್ಲಿದ್ದ ಮಗಳು; ಕತ್ತು ಹಿಸುಕಿ ಕೊಲೆ ಮಾಡಿದ ತಾಯಿ!

Hyderabad Murder Case: ಕೊಲೆಯಾದ ಭಾರ್ಗವಿ ದಿಲ್‌ಸುಖ್‌ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಆಕೆ ತನ್ನ ತಾಯಿ, ತಂದೆ ಮಲ್ಲಯ್ಯ ಮತ್ತು ಸಹೋದರ ಚರಣ್ ಜೊತೆ ವಾಸಿಸುತ್ತಿದ್ದಳು. 

Written by - Puttaraj K Alur | Last Updated : Mar 21, 2024, 11:20 PM IST
  • ಬಾಯ್‌ಫ್ರೆಂಡ್‌ ಜೊತೆಗೆ ಮನೆಯಲ್ಲಿಯೇ ಸಿಕ್ಕಿಬಿದ್ದ ಮಗಳು
  • ಕತ್ತುಹಿಸುಕಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ ತಾಯಿ
  • ಪುತ್ರಿಯನ್ನು ಕೊಂದ ತಾಯಿಯನ್ನು ಬಂಧಿಸಿದ ಪೊಲೀಸರು
ಬಾಯ್‌ಫ್ರೆಂಡ್ ಜೊತೆ ಮನೆಯಲ್ಲಿದ್ದ ಮಗಳು; ಕತ್ತು ಹಿಸುಕಿ ಕೊಲೆ ಮಾಡಿದ ತಾಯಿ! title=
ಪುತ್ರಿಯನ್ನು ಕೊಂದ ತಾಯಿ!

ನವದೆಹಲಿ: ತಾವು ತೋರಿಸಿದ ಹುಡುಗನ ಜೊತೆ ಮದುವೆಯಾಗಲು ನಿರಾಕರಿಸಿದ 20 ವರ್ಷದ ಮಗಳನ್ನೇ ತಾಯಿಯೊಬ್ಬಳು ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ. ಈ ಆಘಾತಕಾರಿ ಘಟನೆ ಹೈದರಾಬಾದ್​ನ ಹೊರವಲಯದಲ್ಲಿರುವ ಇಬ್ರಾಹಿಂಪಟ್ಟಣಂನಲ್ಲಿ ನಡೆದಿದೆ.

ಮೋಟೆ ಜಂಗಮ್ಮ ಎಂಬಾಕೆ ತನ್ನ ಮಗಳು ಭಾರ್ಗವಿಯನ್ನು ಹತ್ಯೆ ಮಾಡಿದ್ದು, ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾಳೆ. ಯುವತಿಯ ಗಂಟಲಿನ ಮೇಲಿದ್ದ ಗಾಯಗಳಿಂದ ಕತ್ತು ಹಿಸುಕಿ ಕೊಲೆ ಮಾಡಿರುವ ವಿಚಾರ ಬಯಲಾಗಿದೆ.  

ಇದನ್ನೂ ಓದಿ: ಬಿಎ ಓದುವ ವಿಚಾರದಲ್ಲಿ ಗಂಡನೊಂದಿಗೆ ಜಗಳ; ನೇಣಿಗೆ ಶರಣಾದ ಗರ್ಭಿಣಿ!

ಕೊಲೆಯಾದ ಭಾರ್ಗವಿ ದಿಲ್‌ಸುಖ್‌ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಆಕೆ ತನ್ನ ತಾಯಿ, ತಂದೆ ಮಲ್ಲಯ್ಯ ಮತ್ತು ಸಹೋದರ ಚರಣ್ ಜೊತೆ ವಾಸಿಸುತ್ತಿದ್ದಳು. ಮಾರ್ಚ್ 18ರ ಸೋಮವಾರ ಬೆಳಗ್ಗೆ ಜಂಗಮ್ಮ ಮತ್ತು ಆಕೆಯ ಮಗ ಕೆಲಸಕ್ಕೆಂದು ಹೋಗಿದ್ದಾರೆ. ಈ ವೇಳೆ ಭಾರ್ಗವಿಯನ್ನು ಮನೆಯಲ್ಲಿ ಒಬ್ಬಳೇ ಬಿಟ್ಟು ಹೋಗಿದ್ದರಂತೆ. ಮಧ್ಯಾಹ್ನ 1 ಗಂಟೆ ವೇಳೆ ಮನೆಗೆ ಮರಳಿದ ಜಂಗಮ್ಮ, ಭಾರ್ಗವಿ ತನ್ನ ಬಾಯ್‌ಫ್ರೆಂಡ್‌ ಜೊತೆಗೆ ಇರುವುದನ್ನು ಕಂಡಿದ್ದಾಳೆ. ಕಡುಕೋಪದಲ್ಲಿ ಆಕೆ ಭಾರ್ಗವಿಯ ಬಾಯ್‌ಫ್ರೆಂಡ್‌ಗೆ ಬೈದು ಅಲ್ಲಿಂದ ಓಡಿಸಿದ್ದಾಳೆ. ನಂತರ ಆಕೆಗೆ ಬೈದು ಹೊಡೆದಿದ್ದಾಳೆ. 

ಮನೆಯಲ್ಲಿ ತಾಯಿ-ಮಗಳ ನಡುವೆ ಜಗಳ ನಡೆಯುತ್ತಿರುವುದನ್ನು ನೋಡಿದ ಯುವಕನೋರ್ವ ಆಕೆಯ ಸಹೋದರನಿಗೆ ತಿಳಿಸಿದ್ದಾನೆ. ಆತ ಮನೆಗೆ ಬಂದು ನೋಡಿದಾಗ ಒಳಗಿನಿಂದ ಬಾಗಿಲು ಮುಚ್ಚಿರುವುದನ್ನು ಕಂಡಿದ್ದಾನೆ. ಕೂಡಲೇ ಕಿಟಕಿಯಿಂದ ಇಣುಕಿ ನೋಡಿದಾಗ ತಾಯಿ ಭಾರ್ಗವಿಯನ್ನು ಸ್ಕಾರ್ಫ್‌ನಿಂದ ಕತ್ತು ಹಿಸುಕಲು ಯತ್ನಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಜೋರಾಗಿ ಬಾಗಿಲು ಬಡಿದ ಜಂಗಮ್ಮ ಬಾಗಿಲು ತೆರೆದು ಭಾರ್ಗವಿ ಕೊರಳಿಗೆ ಸೀರೆ ಕಟ್ಟಿಕೊಂಡು ಬಿದ್ದಿದ್ದಾಳೆ ಅಂತಾ ಅಳುತ್ತಾ ಹೊರಗೆ ಬಂದಿದ್ದಾಳೆ.

ಇದನ್ನೂ ಓದಿ: ರಾಕುಟೆನ್​ ಇಂಡಿಯಾ ಹೆಸರಲ್ಲಿ ಆರ್​-ಓಲೆ (R-ole) ನಡೆಸುತ್ತಿರುವ ವಂಚನೆ ಬಗ್ಗೆ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ 

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ತಾನು ತೋರಿಸಿದ ಹುಡುಗನನ್ನೇ ಮದುವೆಯಾಗಬೇಕೆಂದು ಭಾರ್ಗವಿಗೆ ಜಂಗಮ್ಮ ಹೇಳಿದ್ದಳು ಎನ್ನಲಾಗಿದೆ. ಸದ್ಯ ಆಕೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ರಾಹಿಂಪಟ್ಟಣ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮಹೇಶ್ವರಂ ಪೊಲೀಸ್ ಉಪ ಕಮಿಷನರ್ (DCP) ಸುನಿತಾ ರೆಡ್ಡಿ ಹೇಳಿದ್ದಾರೆ.

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News