Guntur Kaaram Trailer Release: ಆಕ್ಷನ್ ಪ್ಯಾಕ್ಡ್ 'ಗುಂಟೂರು ಖಾರಂ' ಟ್ರೇಲರ್‌ ಔಟ್!

Action Packed Guntur Kaaram Preview: ತೆಲುಗು ಸ್ಟಾರ್‌ ನಟ ಮಹೇಶ್‌ ಬಾಬು ಹಾಗೂ ನಟಿ ಶ್ರೀಲೀಲಾ ಅಭಿನಯದ ಬಹುನಿರೀಕ್ಷಿತ 'ಗುಂಟೂರು ಖಾರಂ' ಚಿತ್ರದ ಆಕ್ಷನ್ ಪ್ಯಾಕ್ಡ್ ಜಬರ್ದಸ್ತ್ ಟ್ರೇಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.

Written by - Zee Kannada News Desk | Last Updated : Jan 8, 2024, 10:38 AM IST
  • 'ಗುಂಟೂರು ಖಾರಂ' ಟ್ರೇಲರ್‌ ಭಾವನಾತ್ಮಕ ಸನ್ನಿವೇಶದೊಂದಿಗೆ ಶುರುವಾಗುತ್ತದೆ.
  • ಟ್ರೇಲರ್‌ನಲ್ಲಿ ನಾಯಕಿ ಕೀರ್ತಿ(ಶ್ರೀಲೀಲಾ) ಪರಿಚಯವಾಗಿದ್ದು, ಅಲ್ಲಿಂದ ಕೊಂಚ ಲವ್, ರೊಮ್ಯಾನ್ಸ್ ಸ್ಟಾರ್ಟ್‌ ಆಗುತ್ತದೆ.
  • ಸಿನಿಮಾದಲ್ಲಿ ಗುಂಟೂರು ಭಾಗದ ರಾಜಕೀಯ ಅಂಶಗಳ ಸುತ್ತಾ ಕಥೆ ಸಾಗುತ್ತದೆ ಅನ್ನೋದು ಟ್ರೇಲರ್ ನೋಡಿದರೆ ಅರ್ಥವಾಗುತ್ತಿದೆ.
Guntur Kaaram Trailer Release: ಆಕ್ಷನ್ ಪ್ಯಾಕ್ಡ್ 'ಗುಂಟೂರು ಖಾರಂ' ಟ್ರೇಲರ್‌ ಔಟ್! title=

Gunturu Kaaram Trailer Out: ಟಾಲಿವುಡ್‌ನ ಬಹುನಿರೀಕ್ಷಿತ 'ಗುಂಟೂರು ಖಾರಂ' ಚಿತ್ರದ ಪವರ್‌ ಪ್ಯಾಕ್ಡ್ ಟ್ರೇಲರ್‌ ರಿಲೀಸ್‌ ಆಗಿ ಧೂಳೆಬ್ಬಿಸಿದೆ. ಇದರಲ್ಲಿ ಪ್ರಿನ್ಸ್ ಮಹೇಶ್ ಬಾಬು ಸಿಕ್ಕಾಪಟ್ಟೆ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಲುವುದರ ಜೊತೆಗೆ, ಹೊಸ ಮ್ಯಾನರಿಸಂ ಟ್ರೈ ಮಾಡಿರೋದು ಗೊತ್ತಾಗುತ್ತಿದ್ದು. ಚಿತ್ರದಲ್ಲಿ ಪ್ರಕಾಶ್ ರಾಜ್, ಈಶ್ವರಿ ರಾವ್, ರಮ್ಯಾಕೃಷ್ಣ, ಜಯರಾಂ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಹಾಗೆಯೇ ಆಕ್ಷನ್ ವಿತ್‌ ಕಾಮಿಡಿಯನ್ನು ಬೆರೆಸಿ ತ್ರಿವಿಕ್ರಮ್ ತಮ್ಮದೇ ಶೈಲಿಯಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. 

ಡೈರೆಕ್ಟರ್‌ ತ್ರಿವಿಕ್ರಮ್ ಹಿಂದಿನ ಚಿತ್ರಗಳಂತೆ ಇಲ್ಲೂ ಫ್ಯಾಮಿಲಿ ಡ್ರಾಮಾವಿದ್ದು, ಇದರ ನಡುವೆ ಮಹೇಶ್ ಬಾಬು ಫ್ಯಾನ್ಸ್‌ ಕೇಳುವ ಮಾಸ್ ಎಲಿಮೆಂಟ್ಸ್ ಕೂಡ ಇದೆ. 'ಗುಂಟೂರು ಖಾರಂ' ಟ್ರೇಲರ್‌ ಭಾವನಾತ್ಮಕ ಸನ್ನಿವೇಶದೊಂದಿಗೆ ಶುರುವಾಗುತ್ತಿದ್ದು, ಅಲ್ಲಿ ಹಿರಿಯ ಮಗ ರಮಣನನ್ನು (ಮಹೇಶ್ ಬಾಬು) ಚಿಕ್ಕವನಿದ್ದಾಗಲೇ ತಾಯಿ(ರಮ್ಯಾಕೃಷ್ಣ) ದೂರ ಮಾಡಿರುತ್ತಾಳೆ. ಹಾಗಾಗಿ ಗುಂಟೂರು ಮಿರ್ಚಿ ಯಾರ್ಡ್‌ನಲ್ಲೇ ರಮಣ ಬೆಳೆದಿದ್ದು, ಬಳಿಕ ಜೀಪ್ ಏರಿ ಗುಂಟೂರು ಮಿರ್ಚಿ ಮಾರುಕಟ್ಟೆಗೆ ರಮಣ ಖಡಕ್ ಎಂಟ್ರಿ ಕೊಡ್ತಾನೆ. ಬಳಿಕ ನೋಡ್ತಿದ್ದಂಗೆ ಮಜಾ ಬಂತಾ? ಹಾರ್ಟ್ ಬೀಟ್ ಹೆಚ್ಚಾಯ್ತಾ? ಅಂತ ಡೈಲಾಗ್ಸ್ ಹೊಡೆದು ಬಿಲ್ಡಪ್ ಕೊಟ್ಟುಕೊಂಡು ತನ್ನನ್ನು ತಾನು ಪರಿಚಯಿಸಿಕೊಳ್ತಾನೆ. 

ಇದನ್ನೂ ಓದಿ: ರಾಕಿಂಗ್ ಸ್ಟಾರ್‌ ಹುಟ್ಟುಹಬ್ಬದಂದೇ ದುರಂತ: ಯಶ್‌ ಬ್ಯಾನರ್‌ ಕಟ್ಟುವಾಗ 3 ಅಭಿಮಾನಿಗಳ ಸಾವು!

ತದನಂತರ ಟ್ರೇಲರ್‌ನಲ್ಲಿ ನಾಯಕಿ ಕೀರ್ತಿ(ಶ್ರೀಲೀಲಾ) ಪರಿಚಯವಾಗಿದ್ದು, ಅಲ್ಲಿಂದ ಕೊಂಚ ಲವ್, ರೊಮ್ಯಾನ್ಸ್ ಸ್ಟಾರ್ಟ್‌ ಆಗುತ್ತದೆ. ಈಕೆಯನ್ನು ನೋಡುತ್ತಿದ್ದಂತೆ ರಮಣ ಪ್ರೀತಿಲಿ ಬಿದ್ದು, ಬಳಿಕ ಒಂದಷ್ಟು ಆಕ್ಷನ್ ಸೀಕ್ವೆನ್ಸ್, ಪಂಚಿಂಗ್ ಡೈಲಾಗ್ಸ್ ಬರುತ್ತದೆ. ಚಿತ್ರದಲ್ಲಿ ಜಗಪತಿ ಬಾಬು ಹಾಗೂ ಪ್ರಕಾಶ್ ರಾಜ್ ವಿಲನ್‌ಗಳಾಗಿ ನಟಿಸಿದ್ದು ಅವರಿಬ್ಬರು ಸವಾಲು ಹಾಕೋದು, ಅದಕ್ಕೆ ಮಹೇಶ್ ಬಾಬು ತಿರುಗೇಟು ನೀಡುವುದನ್ನು ಕಾಣಬಹುದು. ಬ್ರೇಕ್ ಇಲ್ಲದ ಲಾರಿ ರೀತಿ ಗುದ್ದಾಡುವ ರಮಣ ತಾಯಿಗೆ ಮಾತ್ರ ತಲೆ ಬಗ್ಗಿಸುತ್ತಾನೆ ಎಂದು ಹೇಳಿ ಮದರ್ ಸೆಂಟಿಮೆಂಟ್ ಇಟ್ಟು ಡೈರೆಕ್ಟರ್‌ ಕಥೆ ಹೇಳಿದ್ದಾರೆ. 

ಸಿನಿಮಾದಲ್ಲಿ ಗುಂಟೂರು ಭಾಗದ ರಾಜಕೀಯ ಅಂಶಗಳ ಸುತ್ತಾ  ಕಥೆ ಸಾಗುತ್ತದೆ ಅನ್ನೋದು ಟ್ರೇಲರ್ ನೋಡಿದರೆ ಅರ್ಥವಾಗುತ್ತಿದ್ದು, ಮಹೇಶ್ ಬಾಬು ನಯಾ ಮ್ಯಾನರಿಸಂನಲ್ಲಿ ಸಿನಿರಸಿಕರನ್ನು ರಂಜಿಸಲು ಬರ್ತಿದ್ದಾರೆ. ಟ್ರೇಲರ್‌ನಲ್ಲಿ ಪದೇ ಪದೇ ಬೀಡಿ ಸೇದುತ್ತಾ ಮಾಸ್ ಲುಕ್‌ನಲ್ಲಿ ಮಿಂಚಿದ್ದು, ಇನ್ನು ಶ್ರೀಲೀಲಾ ಲಂಗಾ ದಾವಣಿ ಮಾತ್ರವಲ್ಲ ವೆಸ್ಟರ್ನ್ ಡ್ರೆಸ್‌ನಲ್ಲೂ ಕಾಣಿಸಿಕೊಂಡು ರಂಗೇರಿಸಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಸಂಕ್ರಾಂತಿ ಸಂಭ್ರಮಕ್ಕೆ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಬೆರೆಸಿ ಅರೆದಿರುವ ಘಾಟು ಖಾರ ಇದು. ಈ ಚಿತ್ರಕ್ಕೆ ಎಸ್. ತಮನ್ ಸಂಗೀತಾ ನೀಡಿದ್ದರೇ, ಇತ್ತ ಮನೋಜ್ ಪರಮಹಂಸ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಸದ್ಯ ಈ ಸಿನಿಮಾ ಜನವರಿ 12ಕ್ಕೆ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News