ʼಅವರಿಂದಲೇ ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆʼ.. ನಟ ಚಿರಂಜೀವಿ ಸೆನ್ಸೇಷನಲ್‌ ಕಾಮೆಂಟ್!!‌

Actor Chiranjeevi: ಮೆಗಾಸ್ಟಾರ್ ಚಿರಂಜೀವಿ.. ತೆಲುಗು ಇಂಡಸ್ಟ್ರಿಯಲ್ಲಿ ನಂಬರ್ ಒನ್ ಹೀರೋ ಆಗಿ ಬೆಳಕು ಚೆಲ್ಲಿದರು. ಇಂಡಸ್ಟ್ರಿ ಹೀರೋಗಳ ಪುತ್ರರು ಉತ್ತರಾಧಿಕಾರಿಗಳಾಗಿ ಎಂಟ್ರಿ ಕೊಟ್ಟರೂ ಚಿರಂಜೀವಿ ಅವರನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ. 

Written by - Savita M B | Last Updated : Oct 13, 2024, 02:15 PM IST
  • ಚಿರಂಜೀವಿ ಸುಮಾರು 30 ವರ್ಷಗಳಿಂದ ತೆಲುಗಿನಲ್ಲಿ ಟಾಪ್ ಹೀರೋ ಆಗಿದ್ದಾರೆ
  • ಸಿನಿಮಾಗಳಲ್ಲಿನ ಕ್ರೇಜ್‌ನಿಂದ ಚಿರಂಜೀವಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು.
ʼಅವರಿಂದಲೇ ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆʼ.. ನಟ ಚಿರಂಜೀವಿ ಸೆನ್ಸೇಷನಲ್‌ ಕಾಮೆಂಟ್!!‌  title=

 Global Star Kamal Haasan-Actor Chiranjeevi: ಚಿರಂಜೀವಿ ಸುಮಾರು 30 ವರ್ಷಗಳಿಂದ ತೆಲುಗಿನಲ್ಲಿ ಟಾಪ್ ಹೀರೋ ಆಗಿದ್ದಾರೆ. ಒಂದು ಕಾಲದಲ್ಲಿ ಚಿರಂಜೀವಿ ದೇಶದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗಿದ್ದರು. ಸಿನಿಮಾಗಳಲ್ಲಿನ ಕ್ರೇಜ್‌ನಿಂದ ಚಿರಂಜೀವಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. 

ರಾಜಕೀಯದಲ್ಲಿ ಅನೇಕ ನಾಯಕರು ಸೋಲುವುದನ್ನು ನೋಡಿದ ನಂತರ ಅವರು ರಾಜಕೀಯಕ್ಕೆ ಪ್ರವೇಶಿಸಿದರು. 2009 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಚಿರಂಜೀವಿ ಪ್ರಜಾ ರಾಜ್ಯಂ ಪಕ್ಷವನ್ನು ಸ್ಥಾಪಿಸಿದರು. ಹಲವು ನಿರೀಕ್ಷೆಗಳಿಗೆ ವಿರುದ್ಧವಾಗಿ ಸ್ಪರ್ಧಿಸಿದ್ದ ಪ್ರಜಾರಾಜ್ಯವು ಕೇವಲ 18 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು, ನಂತರ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದರು. ರೀ ಎಂಟ್ರಿಯಲ್ಲೂ ಯಂಗ್ ಹೀರೋಗಳಿಗೆ ಸಖತ್ ಪೈಪೋಟಿ ನೀಡಿದ್ದಾರೆ.

ಇದನ್ನೂ ಓದಿ-ಬಾಯ್‌ ಫ್ರೆಂಡ್ಸ್‌ ಅಂತೂ ಲೆಕ್ಕನೇ ಇಲ್ಲ.. 48ನೇ ವಯಸ್ಸಿನಲ್ಲೂ ಹುಡುಗರ ಎದೆಯಲ್ಲಿ ಕಿಚ್ಚೆಬ್ಬಿಸುವಂತಿದ್ದಾಳೆ ಈ ಸುಂದ್ರಿ! ಯಾರು ಗೊತ್ತಾ ಈ ಹಾಟ್ ಬ್ಯೂಟಿ!?

 ಚಿರಂಜೀವಿ ಅವರ ಇತ್ತೀಚಿನ ಚಿತ್ರ ‘ವಿಶ್ವಂಭರ’. ದಸರಾ ಹಬ್ಬದಂದು ಚಿರಂಜೀವಿ ಮೆಗಾ ಅಭಿಮಾನಿಗಳಿಗೆ ಟ್ರೀಟ್ ನೀಡಿದ್ದಾರೆ. ಹಬ್ಬದ ಪ್ರಯುಕ್ತ ಶನಿವಾರ 'ವಿಶ್ವಂಭರ' ಟೀಸರ್ ಬಿಡುಗಡೆಯಾಗಿದೆ. 1.33 ನಿಮಿಷದ ಟೀಸರ್ ಪ್ರೇಕ್ಷಕರನ್ನು ಸೆಳೆದಿದೆ. 

ಈ ಮಧ್ಯೆ, ಚಿರಂಜೀವಿ ನಾಯಕನ ಕಾರಣಕ್ಕಾಗಿ ಸಾಕಷ್ಟು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದರು ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. ಈ ವಿಷಯವನ್ನು ಸ್ವತಃ ಚಿರಂಜೀ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕಮಲ್ ಹಾಸನ್ ಅಭಿನಯದ ಸ್ವಾತಿಮುತ್ಯಂ ಆ ಕಾಲಕ್ಕೆ ಬ್ಲಾಕ್ ಬಸ್ಟರ್ ಚಿತ್ರವಾಗಿತ್ತು ಎಂಬುದು ಗೊತ್ತೇ ಇದೆ. ಈ ಸಿನಿಮಾದಲ್ಲಿ ಕಮಲ್ ಅಭಿನಯಕ್ಕೆ ಮೆಗಾಸ್ಟಾರ್ ಫಿದಾ ಆಗಿದ್ದಾರೆ. ಇಷ್ಟು ಚೆನ್ನಾಗಿ ನಟಿಸಿದ್ದು ಹೇಗೆ ಎಂದು ಚಿರಂಜೀವಿ ತಮ್ಮನ್ನೇ ತಾವು ಕೇಳಿಕೊಂಡು.. ಕಮಲ್ ಹಾಸನ್ ಅವರೇ ಈ ಸಿನಿಮಾದಲ್ಲಿ ನಟಿಸಿದ್ದಾರಾ ಎಂಬ ಅನುಮಾನ ಚಿರಂಜೀವಿ ಅವರಿಗೆ ಇತ್ತು. ಚಿರಂಜೀವಿ ಈ ಸಿನಿಮಾ ನೋಡಿ ಎಷ್ಟೋ ದಿನ ನಿದ್ದೆ ಬರಲಿಲ್ಲ ಎಂದಿದ್ದಾರೆ.. ಈ ವಿಷಯವನ್ನು ಸ್ವತಃ ಚಿರಂಜೀವಿಯೇ ಕಮಲ್ ಹಾಸನ್ ಅವರಿಗೆ ತಿಳಿಸಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ-ನನಗೂ ಆ ಕೆಟ್ಟ ಅನುಭವ ಆಗಿದೆ.. ನಯನತಾರಾ ಕಾಸ್ಟಿಂಗ್ ಕೌಚ್ ಬಗ್ಗೆ ಬಿಚ್ಚಿಟ್ರು ಬಿಗ್‌ ಸೀಕ್ರೇಟ್! ಇಂಥ ನರಕ ಅನುಭವಿಸಿದ್ದಾರಾ ಸೌತ್‌ ನಟಿಯರು?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

 

Trending News