ಸ್ಟಾರ್‌ ನಟನ ಮಗನ ಜೊತೆ ಅರ್ಜುನ್ ಸರ್ಜಾ ಮಗಳ ನಿಶ್ಚಿತಾರ್ಥ..! ಯಾರು ಆ ನಟ..?

Aishwarya arjun engagement : ಈ ಹಿಂದೆ ಆಕ್ಷನ್‌ ಕಿಂಗ್‌ ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಖ್ಯಾತ ನಟನ ಮಗನನ್ನು ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಪ್ರಸಾರವಾಗಿದ್ದವು. ಐಶ್ವರ್ಯಾ ಅವರನ್ನು ಮದುವೆಯಾಗಲಿರುವ ವ್ಯಕ್ತಿ ತಮಿಳಿನ ದೊಡ್ಡ ನಟರೊಬ್ಬರ ಪುತ್ರನಾಗಿದ್ದು, ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. 

Written by - Krishna N K | Last Updated : Oct 24, 2023, 07:31 PM IST
  • ಅರ್ಜುನ್ ಸರ್ಜಾ ಕನ್ನಡದ, ತಮಿಳು, ತೆಲುಗು ಜನಪ್ರಿಯ ನಟರಲ್ಲಿ ಒಬ್ಬರು.
  • ಅರ್ಜುನ್‌ ಮೊದಲ ಪುತ್ರಿ ಐಶ್ವರ್ಯ ಸರ್ಜಾ ಸಹ ಪ್ರತಿಭಾನ್ವಿತ ನಟಿ.
  • ಐಶ್ವರ್ಯ ನಿಶ್ಚಿತಾರ್ಥ ತಮಿಳು ಖ್ಯಾತ ನಟನ ಮಗನ ಜೊತೆ ನಡೆಯಲಿದೆ
ಸ್ಟಾರ್‌ ನಟನ ಮಗನ ಜೊತೆ ಅರ್ಜುನ್ ಸರ್ಜಾ ಮಗಳ ನಿಶ್ಚಿತಾರ್ಥ..! ಯಾರು ಆ ನಟ..? title=

Arjun Sarja daughter : ಅರ್ಜುನ್ ಸರ್ಜಾ ಭಾರತೀಯ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಅಭಿಮಾನಿಗಳಿಂದ 'ಆಕ್ಷನ್ ಕಿಂಗ್' ಅರ್ಜುನ್ ಎಂದೇ ಕರೆಸಿಕೊಳ್ಳುವ ಇವರು ಕನ್ನಡ ಸಿನಿರಂಗಕ್ಕೆ ಹಲವು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅಲ್ಲದೆ, ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಅವರ ಪ್ರೀತಿಯ ಮಾವನವರು. ಸಧ್ಯ ಅರ್ಜುನ್‌ ಮೊದಲ ಪುತ್ರಿ ಐಶ್ವರ್ಯ ನಿಶ್ಚಿತಾರ್ಥ ತಮಿಳು ಖ್ಯಾತ ನಟನ ಮಗನ ಜೊತೆ ನಡೆಯಲಿದೆ ಎಂದು ವರದಿಯಾಗಿದೆ.

ಹೌದು.. ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಸ್ಯಾಂಡಲ್‌ವುಡ್‌ ಬಹುಬೇಡಿಕೆಯ ನಟರಲ್ಲಿ ಒಬ್ಬರು. ತೆಲುಗು, ತಮಿಳಿನ ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ. ಸರ್ಜಾ ಪುತ್ರಿ ಐಶ್ವರ್ಯ ಸಹ ಕನ್ನಡ ಮತ್ತು ತಮಿಳಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ʼಪ್ರೇಮ ಬರಹʼ ಸಿನಿಮಾದ ಮೂಲಕ ಚಂದನವನಕ್ಕೆ ಐಶ್ವರ್ಯ ಅರ್ಜುನ್‌ ಕಾಲಿಟ್ಟರು.

ಇದನ್ನೂ ಓದಿ:ದಾಖಲೆ ಬರೆದ Ronny, ನಟ ಕಿರಣ್ ರಾಜ್ ರಿಂದ ಮತ್ತೊಂದು ಸಾಹಸ

ಕಳೆದ ಜೂನ್‌ನಲ್ಲಿ ಅರ್ಜುನ್ ಮಗಳು ಐಶ್ವರ್ಯಾ ಖ್ಯಾತ ನಟನ ಮಗನನ್ನು ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಪ್ರಸಾರವಾಗಿದ್ದವು. ಐಶ್ವರ್ಯಾ ಅವರನ್ನು ಮದುವೆಯಾಗಲಿರುವ ವ್ಯಕ್ತಿ ತಮಿಳಿನ ದೊಡ್ಡ ನಟರೊಬ್ಬರ ಪುತ್ರನಾಗಿದ್ದು, ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ ಎನ್ನಲಾಗಿದೆ. 

ಯಸ್‌.. ಕಾಲಿವುಡ್‌ನ ಖ್ಯಾತ ನಟ ತಂಬಿ ರಾಮಯ್ಯ ಅವರ ಹಿರಿಯ ಮಗ ಉಮಾಪತಿ ಕೂಡ ಚಿತ್ರರಂಗದಲ್ಲಿ ಉದಯೋನ್ಮುಖ ನಟ. ಮನಿಯಾರ್ ಕೊಟ್ಟಮುಲು, ತನ್ನಿ ವಂದಿ, ವಿರುವಣಿ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಉಮಾಪತಿ ಮತ್ತು ಐಶ್ವರ್ಯಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: ನಾಡ ಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್‌ವುಡ್‌ ತಾರೆಯರು..! ಫೋಟೋಸ್‌ ಇಲ್ಲಿವೆ

ಐಶ್ವರ್ಯ ಮತ್ತು ಉಮಾಪತಿ ಇಬ್ಬರು ತಮ್ಮ ಪ್ರೀತಿಯನ್ನು ಅವರ ಮನೆಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗಿದೆ. ಇದೀಗ ಅವರ ಮದುವೆ ನಡೆಸಲು ಎರಡೂ ಮನೆಯವರು ಒಪ್ಪಿಗೆ ಸೂಚಿಸಿದ್ದು, ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ನಟ ಅರ್ಜುನ್ ನಿರ್ಮಾಣದ ಆಂಜನೇಯ ದೇವಸ್ಥಾನದಲ್ಲಿ ಐಶ್ವರ್ಯ-ಉಮಾಪತಿ ನಿಶ್ಚಿತಾರ್ಥ ನಡೆಯಲಿದೆಯಂತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News