ಪವಿತ್ರಾ ಲೋಕೇಶ್‌ ಭಾವಿ ಪತಿ ನರೇಶ್‌ ಮನೆ ಮೇಲೆ ಅಪರಿಚಿತರಿಂದ ದಾಳಿ..!

ಟಾಲಿವುಡ್‌ ನಟ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್‌ ಅವರು ಕಳೆದ ಕೆಲವು ವರ್ಷಗಳಿಂದ ಸುದ್ದಿಯಲ್ಲಿರುವುದು ಗೊತ್ತೇ ಇದೆ. ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ನಿವಾಸದ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ ಎಂದು ನಟ ನರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದಾಳಿಯಲ್ಲಿ ಅಪರಿಚಿತರ ದಾಳಿಯಿಂದ ನರೇಶ್ ಅವರ ಕ್ಯಾರಾವ್ಯಾನ್‌ ವಾಹನ ಮತ್ತು ಇತರ ಕಾರುಗಳು ಸಹ ಧ್ವಂಸಗೊಂಡಿವೆ. ಈ ಕುರಿತು ನರೇಶ್ ಗಚ್ಚಿಬೌಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ.

Written by - Krishna N K | Last Updated : Feb 19, 2023, 05:38 PM IST
  • ನಟ ನರೇಶ್ ಮತ್ತು ಪವಿತ್ರಾ ಲೋಕೇಶ್‌ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
  • ತಮ್ಮ ನಿವಾಸದ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ ಎಂದು ನಟ ನರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.
  • ನರೇಶ್ ಅವರ ಕ್ಯಾರಾವ್ಯಾನ್‌ ವಾಹನ ಮತ್ತು ಇತರ ಕಾರುಗಳು ಸಹ ಧ್ವಂಸಗೊಂಡಿವೆ.
ಪವಿತ್ರಾ ಲೋಕೇಶ್‌ ಭಾವಿ ಪತಿ ನರೇಶ್‌ ಮನೆ ಮೇಲೆ ಅಪರಿಚಿತರಿಂದ ದಾಳಿ..! title=

Pavitra Lokesh Naresh : ಟಾಲಿವುಡ್‌ ನಟ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್‌ ಅವರು ಕಳೆದ ಕೆಲವು ವರ್ಷಗಳಿಂದ ಸುದ್ದಿಯಲ್ಲಿರುವುದು ಗೊತ್ತೇ ಇದೆ. ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ನಿವಾಸದ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ ಎಂದು ನಟ ನರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದಾಳಿಯಲ್ಲಿ ಅಪರಿಚಿತರ ದಾಳಿಯಿಂದ ನರೇಶ್ ಅವರ ಕ್ಯಾರಾವ್ಯಾನ್‌ ವಾಹನ ಮತ್ತು ಇತರ ಕಾರುಗಳು ಸಹ ಧ್ವಂಸಗೊಂಡಿವೆ. ಈ ಕುರಿತು ನರೇಶ್ ಗಚ್ಚಿಬೌಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಹಲ್ಲೆಯ ಹಿಂದೆ ತಮ್ಮ ಪತ್ನಿ ರಮ್ಯಾ ರಘುಪತಿ ಕೈವಾಡವಿದೆ ಎಂದು ನರೇಶ್‌ ಶಂಕಿಸಿದ್ದಾರೆ. ಆಕೆ ಕಾರಿನಲ್ಲಿ ತಮ್ಮ ಮನೆಗೆ ಬಂದ ಸ್ವಲ್ಪ ಸಮಯದಲ್ಲೇ ಮನೆ ಮೇಲೆ ಹಲ್ಲೆ ನಡೆದಿದ್ದು, ಆಕೆಯೇ ಈ ಕೃತ್ಯವನ್ನು ಎಸಗಿದ್ದಾಳೆ ಎಂದು ಶಂಕಿಸಿದ್ದಾರೆ. ನರೇಶ್ ಗಚ್ಚಿಬೌಲಿ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ. 

ಇದನ್ನೂ ಓದಿ: Sonu Sood: ಸೋನು ಸೂದ್ ಹೆಸರಿನ ಭಾರತದ ಅತಿದೊಡ್ಡ ಪ್ಲೇಟ್

ಕೆಲವು ವರ್ಷಗಳ ಹಿಂದೆ ನರೇಶ್ ರಮ್ಯಾ ರಘುಪತಿ ವಿವಾಹವಾಗಿದ್ದು, ಅವರಿಗೆ ಒಬ್ಬ ಮಗನಿದ್ದಾನೆ. ಆದರೆ ಇವರಿಬ್ಬರ ನಡುವಿನ ಜಗಳದಿಂದ ದೂರ ಉಳಿದಿದ್ದಾರೆ. ಅಲ್ಲದೆ, ಮನಸ್ಸುಗಳು ದೂರವಾಗಿದ್ದರೂ ಒಂದೇ ಮನೆಯಲ್ಲಿ ಒಟ್ಟಿಗೆ ಇರುತ್ತಿದ್ದರು. ಆದರೆ ಪವಿತ್ರಾ ಲೋಕೇಶ್ ಅವರನ್ನು ನರೇಶ್ ನಾಲ್ಕನೇ ಮದುವೆಯಾಗಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ರಮ್ಯಾ ರಘುಪತಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದರು. ಪವಿತ್ರಾ ಜೊತೆ ನರೇಶ್ ಮೈಸೂರಿನ ಹೋಟೆಲ್ ರೂಂನಲ್ಲಿ ತಂಗಿದ್ದ ವೇಳೆ ರಮ್ಯಾ ರಘುಪತಿ ಅಲ್ಲಿಗೂ ಧಾವಿಸಿ ರಂಪಾಟ ನಡೆಸಿದ್ದರು.

ಇತ್ತೀಚೆಗಷ್ಟೇ ನರೇಶ್ ಪವಿತ್ರಾ ಲೋಕೇಶ್ ಅವರು ಹೊಸ ಜೀವನ ಆರಂಭಿಸುತ್ತಿದ್ದೇನೆ ಎಂದು ಹಾಕಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನರೇಶ್ ನಾಲ್ಕನೇ ಮದುವೆಯಾಗಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಿಜವಾಗಿ ವಿಚ್ಛೇದನ ಪಡೆಯದೆ ನಾಲ್ಕನೇ ಮದುವೆಯಾಗುವುದು ಹೇಗೆ ಎಂದು ನರೇಶ್ ಪತ್ನಿ ರಮ್ಯಾ ರಘುಪತಿ ಪ್ರಶ್ನಿಸುತ್ತಿದ್ದಾರೆ. ಈ ವಿಷಯ ಎಲ್ಲಿಯವರೆಗೆ ಹೋಗುತ್ತದೆ ಎಂದು ನೋಡೋಣ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News