BBK 10: ಬಿಗ್‌ಬಾಸ್‌ ಆಟದಲ್ಲಿ ಸಿರಿ ಫೈನಲ್ಸ್‌ಗೆ ಹೋಗ್ತಾರಾ? ನಮ್ರತಾ ಹಾಗೂ ತುಕಾಲಿಗೆ ಸ್ಟಾರ್ಟಾಯ್ತು ಡೌಟ್!

Bigg Boss Kannada: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಶೋನಲ್ಲಿ ತುಕಾಲಿ ಸಂತು ಹಾಗೂ ನಮ್ರತಾ, ಈ ವಾರ ಯಾರು ಔಟ್ ಆಗಬಹುದು ಎಂಬುದರ ಬಗ್ಗೆ ಚರ್ಚೆ ಮಾಡಿದ್ದು ಆಗ ಸರಿ ಬಗ್ಗೆ ಮಾತುಕಥೆ ನಡೆದಿದೆ. ಹಾಗಾದ್ರೆ ಸಿರಿ ಬಗ್ಗೆ ಇವರಿಬ್ಬರ ಅಭಿಪ್ರಾಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Dec 15, 2023, 11:16 AM IST
  • ಬಿಗ್‌ಬಾಸ್‌ ಮನೆಯಲ್ಲಿ ಆರು ಮಂದಿ ಪೈಕಿ ಈ ವಾರ ಯಾರು ಔಟ್‌ ಆಗಬಹುದು ಎಂಬ ಚರ್ಚೆ ತುಕಾಲಿ ಸಂತು ಹಾಗೂ ನಮ್ರತಾ ಮಧ್ಯೆ ನಡೆಯಿತು.
  • ಆ ವೇಳೆ ಸಿರಿ ಬಗ್ಗೆ ನಮ್ರತಾ ಹಾಗೂ ತುಕಾಲಿ, ತಮಗಿರುವ ಅಭಿಪ್ರಾಯಗಳನ್ನ ಇಬ್ಬರೂ ಹೊರಹಾಕಿದರು.
  • ಸಿರಿ ಫೈನಲ್‌ವರೆಗೂ ಬಂದುಬಿಡ್ತಾರಾ ಎಂಬ ಅನುಮಾನ ಸದ್ಯ ತುಕಾಲಿ ಸಂತು ಹಾಗೂ ನಮ್ರತಾಗೆ ಕಾಡಿದೆ.
BBK 10: ಬಿಗ್‌ಬಾಸ್‌ ಆಟದಲ್ಲಿ ಸಿರಿ ಫೈನಲ್ಸ್‌ಗೆ ಹೋಗ್ತಾರಾ? ನಮ್ರತಾ ಹಾಗೂ ತುಕಾಲಿಗೆ ಸ್ಟಾರ್ಟಾಯ್ತು ಡೌಟ್! title=

Namratha And Siri Talks About Siri: ಬಿಗ್‌ಬಾಸ್ ಕನ್ನಡ  ಸೀಸನ್‌ 10ರ ಕಾರ್ಯಕ್ರಮದಲ್ಲಿ ಈ ವಾರ ಒಟ್ಟು 6 ಮಂದಿ ನಾಮಿನೇಟ್ ಆಗಿದ್ದು, ಅದರಲ್ಲಿ ಸಿರಿ, ಮೈಕಲ್, ಪವಿ ಪೂವಪ್ಪ, ಡ್ರೋನ್ ಪ್ರತಾಪ್, ಸಂಗೀತಾ ಹಾಗೂ ವಿನಯ್‌ ನಾಮಿನೇಟ್‌ ಆಗಿದ್ದಾರೆ. ಈ ಆರು ಮಂದಿ ಪೈಕಿ ಈ ವಾರ ಯಾರು ಔಟ್‌ ಆಗಬಹುದು ಎಂಬ ಚರ್ಚೆ ತುಕಾಲಿ ಸಂತು ಹಾಗೂ ನಮ್ರತಾ ಮಧ್ಯೆ ನಡೆಯಿತು. 

ಆ ವೇಳೆ ಸಿರಿ ಬಗ್ಗೆ ನಮ್ರತಾ ಹಾಗೂ ತುಕಾಲಿ, ತಮಗಿರುವ ಅಭಿಪ್ರಾಯಗಳನ್ನ ಇಬ್ಬರೂ ಹೊರಹಾಕಿದರು. ತುಕಾಲಿ ಸಂತು ಈ ವಾರ ಬಿಗ್‌ಬಾಸ್‌ ಮನೆಯಿಂದ ಯಾರು ಹೋಗ್ತಾರೆ? ಎಂದು ಕೇಳಿದಕ್ಕೆ ನಮ್ರತಾ  ಸಿರಿ, ಮೈಕಲ್, ಪವಿ ಪೂವಪ್ಪ ಈ ಮೂರು ಜನರಲ್ಲಿ ಒಬ್ಬರು ಎಂದು ಹೇಳಿದರು. ಅದಕ್ಕೆ ತುಕಾಲಿ ಸಂತು, ಮತ್ತೆ ನಿಮ್ಮ ಟೀಮ್‌ಗೆ ಬಂತಾ.? ಕೊನೆಯಲ್ಲಿ ಯಾರು ಉಳಿಯುತ್ತಾರೆ? ಎಂದಿದಕ್ಕೆ ನಮ್ರತಾ,  - ಮೋಸ್ಟ್ಲಿ ಎಲ್ಲಾ ಹೋಗಿಬಿಡುತ್ತಾರೆ. ನಮ್ಮ ಟೀಮ್‌ನಿಂದಾನೇ ಜಾಸ್ತಿ ಹೋಗಿರೋದು ಇಲ್ಲಿಯವರೆಗೂ. ಅಂತಾ ಹೇಳಿದ್ದಾರೆ.

ಇದನ್ನೂ ಓದಿ: BBK 10: ಬಿಗ್‌ಬಾಸ್‌ನಲ್ಲಿ ಪಾಸಿಟೀವ್-‌ನೆಗೆಟೀವ್‌ ಎನರ್ಜಿ ಬಗ್ಗೆ ಪಾಠ: ವೀಕ್ಷಕರಿಂದ ಸಂಗೀತಾಗೆ ಬೆಸ್ಟ್‌ ಟೀಚರ್‌ ಅರ್ವಾಡ್!

ನಮ್ರತಾ ಮಾತು ಕೇಳಿದ ತುಕಾಲಿ ಸಂತು, ನಿಮ್ಮ ಟೀಮ್‌ನವರಿಗೆ ಯಾರೋ ಮಾಟ ಮಾಡಿಸಿದ್ದಾರೆ. ವಿನಯ್‌ಗೆ ಹೇಳಿ ಒಂದು ತಡೆ ಹೊಡಿಸು ಎಂದು ಹೇಳಿದರು. ಅದಕ್ಕೆ ನಮ್ರತಾ ನಿಮ್ಮ ಪ್ರಕಾರ ಯಾರು ಹೋಗಬಹುದು ಎಂದು ಪ್ರಶ್ನಿಸಿದಾಗ, ತುಕಾಲಿ ಸಂತು - ನನ್ನ ಪ್ರಕಾರ ಸಿರಿ ಎಂದರು. ಅದಕ್ಕೆ ನಮ್ರತಾ ಅಯ್ಯೋ.. ನಾನು ಹಾಗೆ ಅಂದುಕೊಂಡು, ಅಂದುಕೊಂಡೇ 3 ವಾರದಿಂದ ಅವರು ಹೋಗ್ತಾ ಇಲ್ಲ ಅಂತ ಅಂದಿದಕ್ಕೆ ತುಕಾಲಿ  ಫೈನಲ್‌ಗೆ ಬಂದು ಬಿಡ್ತಾರಾ ಅವರು? ಎಂದು ಕೇಳಿದಕ್ಕೆ, ನಮ್ರತಾ ಹೀಗೆ ಆಡಿ ಆಡಿ ಬರಬಹುದು ಎಂದು ಉತ್ತರಿಸಿದರು.

ಬಿಗ್‌ಬಾಸ್‌ಮನೆಯಲ್ಲಿ ಸಿರಿ ದೊಡ್ಡ ಮಟ್ಟದಲ್ಲಿ ಸದ್ದು - ಸುದ್ದಿ ಮಾಡದೇ, ಯಾವುದೇ ವಿವಾದಗಳಲ್ಲೂ ಸಿಲುಕಿಲ್ಲ. ಹೀಗಾಗಿಯೇ ಸಿರಿ ಬಹುಬೇಗ ಔಟ್ ಆಗಿಬಿಡುತ್ತಾರೆ ಎಂಬುದು ಇತರೆ ಸ್ಪರ್ಧಿಗಳ ಊಹೆಯಾಗಿದ್ದು, ಆದರೆ, 10 ವಾರಗಳು ಉರುಳಿದರೂ ಸಿರಿ ಇನ್ನೂ ದೊಡ್ಮನೆಯಲ್ಲಿ ಗಟ್ಟಿಯಾಗಿ ಇದ್ದಾರೆ. ಆದರಿಂದ ಹೀಗೇ ಇದ್ದರೆ, ಸಿರಿ ಫೈನಲ್‌ವರೆಗೂ ಬಂದುಬಿಡ್ತಾರಾ ಎಂಬ ಅನುಮಾನ ಸದ್ಯ ತುಕಾಲಿ ಸಂತು ಹಾಗೂ ನಮ್ರತಾಗೆ ಕಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News