“ನಿನ್ನ ಮೇಲೆ ನನಗೆ ಪ್ರೀತಿ ಇಲ್ಲ-ಇದೆಲ್ಲಾ ಇಷ್ಟ ಆಗಲ್ಲ…”- ಮುಖಕ್ಕೆ ಹೊಡ್ದಂಗೆ ಹೇಳಿದ ಸಂಗೀತಾ…ಕೂಗಾಡಿದ ಕಾರ್ತಿಕ್!!

Sangeetha Sringeri-Karthik Mahesh: ಅಂದಹಾಗೆ ನನಗೆ ಕಾರ್ತಿಕ್ ಮೇಲೆ ಪ್ರೀತಿಯಂತಹ ಯಾವುದೇ ಭಾವನೆ ಇಲ್ಲ, ನಾವು ಫ್ರೆಂಡ್ಸ್ ಅಷ್ಟೇ ಎಂದು ಸಂಗೀತಾ ಅನೇಕ ಬಾರಿ ಹೇಳಿದ್ದುಂಟು. ಈ ಹೇಳಿಕೆಗಳು ಕಾರ್ತಿಕ್ ಅವರಿಗೆ ಬೇಸರ ತರಿಸಿದಂತಿದೆ.

Written by - Bhavishya Shetty | Last Updated : Nov 11, 2023, 06:19 PM IST
    • ಇಶಾನಿ ಮತ್ತು ಮೈಕಲ್ ಸ್ವತಃ ನಾವಿಬ್ಬರು ಲವ್ ಬರ್ಡ್ಸ್ ಎಂದು ಒಪ್ಪಿಕೊಂಡಿದ್ದಾರೆ.
    • ಕಾರ್ತಿಕ್ ಮತ್ತು ಸಂಗೀತಾ ಹೆಚ್ಚು ಆಪ್ತವಾಗಿದ್ದು, ಇವರಿಬ್ಬರ ಸಂಬಂಧವೇನು ಎಂಬುದೇ ಅರ್ಥವಾಗುತ್ತಿಲ್ಲ
    • ಇನ್ನು ಕಾರ್ತಿಕ್​ ಅವರ ಕೆಲ ಮಾತುಗಳು ಸಂಗೀತಾಗೆ ಇಷ್ಟ ಆಗುತ್ತಿಲ್ಲ
“ನಿನ್ನ ಮೇಲೆ ನನಗೆ ಪ್ರೀತಿ ಇಲ್ಲ-ಇದೆಲ್ಲಾ ಇಷ್ಟ ಆಗಲ್ಲ…”- ಮುಖಕ್ಕೆ ಹೊಡ್ದಂಗೆ ಹೇಳಿದ ಸಂಗೀತಾ…ಕೂಗಾಡಿದ ಕಾರ್ತಿಕ್!!  title=
Sangeeta Shringeri-Karthik Mahesh

Sangeetha Sringeri-Karthik Mahesh, Bigg Boss Kannada: ಬಿಗ್ ಬಾಸ್’ನ ಪ್ರತಿಯೊಂದು ಸೀಸನ್’ಗಳಲ್ಲೂ ಕೆಲವರ ಮಧ್ಯೆ ಪ್ರೀತಿ ಮೂಡುವುದನ್ನು ನೋಡಿರಬಹುದು. ಆದರೆ ಈ ಬಾರಿ ಕೊಂಚ ಡಿಫರೆಂಟ್ ಆಗಿದೆ. ಇಶಾನಿ ಮತ್ತು ಮೈಕಲ್ ಸ್ವತಃ ನಾವಿಬ್ಬರು ಲವ್ ಬರ್ಡ್ಸ್ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಈ ಎಲ್ಲದರ ಮಧ್ಯೆ ಕಾರ್ತಿಕ್ ಮತ್ತು ಸಂಗೀತಾ ಹೆಚ್ಚು ಆಪ್ತವಾಗಿದ್ದು, ಇವರಿಬ್ಬರ ಸಂಬಂಧವೇನು ಎಂಬುದೇ ಅರ್ಥವಾಗುತ್ತಿಲ್ಲ.

ಇದನ್ನೂ ಓದಿ: ನೆದರ್ಲ್ಯಾಂಡ್ ಪಂದ್ಯಕ್ಕೆ ಹೀಗಿರಲಿದೆ ಟೀಂ ಇಂಡಿಯಾದ ಪ್ಲೇಯಿಂಗ್ 11

ಅಂದಹಾಗೆ ನನಗೆ ಕಾರ್ತಿಕ್ ಮೇಲೆ ಪ್ರೀತಿಯಂತಹ ಯಾವುದೇ ಭಾವನೆ ಇಲ್ಲ, ನಾವು ಫ್ರೆಂಡ್ಸ್ ಅಷ್ಟೇ ಎಂದು ಸಂಗೀತಾ ಅನೇಕ ಬಾರಿ ಹೇಳಿದ್ದುಂಟು. ಈ ಹೇಳಿಕೆಗಳು ಕಾರ್ತಿಕ್ ಅವರಿಗೆ ಬೇಸರ ತರಿಸಿದಂತಿದೆ.

ನವೆಂಬರ್​ 10ರ ಸಂಚಿಕೆಯಲ್ಲಿ ಸಂಗೀತಾ, ತುಕಾಲಿ ಸಂತೋಷ್ ಮತ್ತು ಕಾರ್ತಿಕ್​ ಅವರು ಒಂದೆಡೆ ಕುಳಿತುಕೊಂಡು ಮಾತನಾಡುತ್ತಿದ್ದರು.  ಆಗ ಕಾರ್ತಿಕ್ “ಹೇಗಿದೆ ನಮ್ಮಿಬ್ಬರ ಜೋಡಿ?” ಎಂದು ಸಂತೋಷ್ ಬಳಿ ಕೇಳಿದ್ದಾರೆ. ಇದಕ್ಕೆ ಅಸಮಾಧಾನಗೊಂಡ ಸಂಗೀತಾ, “ನೀವು ಹೀಗೆ ಮಾಡೋದ್ರಿಂದಲೇ ಜನರು ಆ ರೀತಿ ಅಂದುಕೊಂಡಿದ್ದು” ಎನ್ನುತ್ತಾರೆ. ಅದೇ ವೇಳೆ ಸಂತೋಷ್ ಅವರು ಕೂಡ, “ನಾವು ಇಷ್ಟು ದಿನ ನಿಮ್ಮನ್ನು ಲವ್ವರ್ಸ್ ಅಂದುಕೊಂಡಿದ್ದೆವು. 5 ವಾರದಲ್ಲಿ ನನಗೆ ಕಾಣಿಸಿದ್ದು ಅದೇ ರೀತಿ” ಎಂದಿದ್ದಾರೆ. ”ಆದರೆ ನನಗೆ ಆ ರೀತಿ ಏನೂ ಇಲ್ಲ. ಅವರದ್ದು ಒನ್​ ಸೈಡ್ ಲವ್​​. ಹಿಂಗೇ ಮಾಡಿದರೆ ಒದೆ ಬೀಳುತ್ತೆ” ಎಂದು ಸಂಗೀತಾ ಮುಖಕ್ಕೆ ಹೊಡೆದಂಗೆ ನೇರವಾಗಿ ಹೇಳಿದ್ದಾರೆ.

ಇನ್ನು ಕಾರ್ತಿಕ್​ ಅವರ ಕೆಲ ಮಾತುಗಳು ಸಂಗೀತಾಗೆ ಇಷ್ಟ ಆಗುತ್ತಿಲ್ಲ. ಇದೇ ವಿಚಾರಕ್ಕೆ ಅದೆಷ್ಟೋ ಬಾರಿ ಗಲಾಟೆಗಳು ಆಗಿದ್ದವು. ಇನ್ನು ಗಾರ್ಡನ್​ ಏರಿಯಾದಲ್ಲೂ ಕೂಡ ಕಳೆದ ದಿನ ಇಂತಹದ್ದೇ ಘಟನೆ ನಡೆದಿತ್ತು. “ನಾನು ಕೂಡ ಇಲ್ಲಿ ಕಂಟೆಂಟ್​ ಕೊಡೋಕೆ ಬಂದಿದ್ದೇನೆ. ನೀವು ಪದೇ ಪದೇ ಬಂದು ಸೈಡಿಗೆ ಹೋಗು ಅಂತಾ ಹೇಳಿದ್ರೆ ಅದು ಸರಿ ಎನಿಸುವುದಿಲ್ಲ” ಎಂದು ಸಂಗೀತಾ ಹೇಳಿದ್ದಾರೆ. ಅದಕ್ಕೆ ನಾನು ನಿನಗೆ ಹೇಳಿದ್ದಲ್ಲ ಎಂದು ಕಾರ್ತಿಕ್ ಹೇಳಿದ್ರೂ ಸಹ ಸಂಗೀತಾ ಅದನ್ನು ಒಪ್ಪಿಕೊಳ್ಳೋಕೆ ಸಿದ್ಧ ಇರಲಿಲ್ಲ.

ಇದನ್ನೂ ಓದಿ: ಕಿಚ್ಚನ ಚಪ್ಪಾಳೆ ಪಡೆದ ಡ್ರೋಣ್ ಪ್ರತಾಪ್ ಸುದೀಪ್ ಜೊತೆ ಮನಬಿಚ್ಚಿ ಹೇಳಿದ್ದು ಹೀಗೆ...

ಇದೇ ವಿಚಾರಕ್ಕೆ ಕೋಪಗೊಂಡ ಕಾರ್ತಿಕ್ ಕೈಯಲ್ಲಿದ್ದ ತಿಂಡಿಯನ್ನು ನೆಲಕ್ಕೆ ಎಸೆದು ಅಲ್ಲಿ ಹೊರಟು ಹೋಗಿದ್ದಾರೆ. ಇದೇ ಕೋಪದಿಂದ ಬಾಗಿಲನ್ನು ಜೋರಾಗಿ ತೆಗೆದು ಸದ್ದು ಮಾಡಿದ್ದರು. ಇನ್ನು ಊಟ ಎಸೆದಿದ್ದು ಸಂಗೀತಾಗೆ ಸರಿ ಎನಿಸಲಿಲ್ಲ. ಅಲ್ಲೇ ಇದ್ದ ವರ್ತೂರ್ ಸಂತೋಷ್ ಜೊತೆ ಅಸಮಾಧಾನ ಹೊರಹಾಕಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News