ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು..! ಕೊಲೆಯಾದ ಸ್ಥಳದಲ್ಲಿ ಸಿಕ್ಕಿದ್ದೇನು ಗೊತ್ತೆ..?

ರೇಣುಕಾಸ್ವಾಮಿ ಕೊಲೆ ನಡೆದ ಪಟ್ಟಣಗೆರೆ ವಿನಯ್ ಶೆಡ್ ನಲ್ಲಿ ಪೊಲೀಸ್ರು ಮಹಜರು ನಡೆಸಿದ್ದಾರೆ. ದರ್ಶನ್, ಪವಿತ್ರಾಗೌಡ, ವಿನಯ್ ಪವನ್ ಸೇರಿದಂತೆ ಎಲ್ಲಾ ಆರೋಪಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ವಿನಯ್ ಶೆಡ್ ನಲ್ಲಿ ಸಾಕಷ್ಟು ಸೀಜಿಂಗ್ ವೆಹಿಕಲ್ ಗಳು ನಿಂತಿದ್ದು, ಈ ಹಿಂದೆ ದರ್ಶನ್ ಸಾಕಷ್ಟು ಬಾರಿ ಈ ಶೆಡ್ ಬಂದು ಹೋಗಿರೋ ಸಾಧ್ಯತೆ ಹೆಚ್ಚಿದೆ. 

Written by - VISHWANATH HARIHARA | Edited by - Krishna N K | Last Updated : Jun 12, 2024, 06:41 PM IST
    • ರೇಣುಕಾಸ್ವಾಮಿ ಶವ ಎಸೆದ ಮೋರಿ ಬಳಿ ಮಹಜರು
    • ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು
    • ವಿನಯ್ ಶೆಡ್ ನಲ್ಲಿ ಪೊಲೀಸ್ರು ಮಹಜರು ನಡೆಸಿದ್ದಾರೆ.
ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು..! ಕೊಲೆಯಾದ ಸ್ಥಳದಲ್ಲಿ ಸಿಕ್ಕಿದ್ದೇನು ಗೊತ್ತೆ..? title=

Darshan Renuka swamy murder case : ರೇಣುಕಾಸ್ವಾಮಿ ಕೊಲೆ ನಡೆದ ಪಟ್ಟಣಗೆರೆ ವಿನಯ್ ಶೆಡ್ ನಲ್ಲಿ ಪೊಲೀಸ್ರು ಮಹಜರು ನಡೆಸಿದ್ದಾರೆ. ದರ್ಶನ್, ಪವಿತ್ರಾಗೌಡ, ವಿನಯ್ ಪವನ್ ಸೇರಿದಂತೆ ಎಲ್ಲಾ ಆರೋಪಿಗಳ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ವಿನಯ್ ಶೆಡ್ ನಲ್ಲಿ ಸಾಕಷ್ಟು ಸೀಜಿಂಗ್ ವೆಹಿಕಲ್ ಗಳು ನಿಂತಿದ್ದು, ಈ ಹಿಂದೆ ದರ್ಶನ್ ಸಾಕಷ್ಟು ಬಾರಿ ಈ ಶೆಡ್ ಬಂದು ಹೋಗಿರೋ ಸಾಧ್ಯತೆ ಹೆಚ್ಚಿದೆ. 

ಅಷ್ಟೇ ಅಲ್ಲದೇ ವಿನಯ್ ಅಂಡ್ ಟೀಮ್ ಈ ಶೆಡ್ ನಲ್ಲಿ ಈ ಹಿಂದೆ ಇದೇ ರೀತಿ ಕೃತ್ಯಕ್ಕೆ ಕೈ ಹಾಕಿದ್ರಾ..? ಸೆಟಲ್ಮೆಂಟ್ ವಿಚಾರದಲ್ಲಿ ಈ ಶೆಡ್ ನಲ್ಲಿ ಯಾರಿಗಾದ್ರೂ ಹಲ್ಲೆ ನಡೆಸಿದ್ರಾ ಅನ್ನೋ ಮಾಹಿತಿಯನ್ನ ಪೊಲೀಸರು ಕೆದಕುತ್ತಿದ್ದಾರೆ. ಇನ್ನೂ ಶೆಡ್ ನಲ್ಲಿ ನಿನ್ನೆಯೇ ಸೋಕೋ ಟೀಮ್ ಮತ್ತು ಎಫ್ ಎಸ್ ಎಲ್ ಟೀಮ್ ಕೆಲ ಸಾಕ್ಷಗಳನ್ನ ಕಲೆ ಹಾಕಿದ್ದಾರೆ. ಶೆಡ್ ನಲ್ಲಿ ಸಿಕ್ಕ ಸಿಗರೇಟ್ ತುಂಡುಗಳು ಚೇರ್ ಮತ್ತ ಟೇಬಲ್ ಮೇಲಿರೋ ಫ್ರಿಂಗರ್ ಪ್ರಿಟ್. ಗೋಡೆ ಮೇಲೆ ರಕ್ತದ ಕಲೆ ಏನಾದ್ರು ಇದ್ಯಾ ಅನ್ನೋ ಬಗ್ಗೆ ಸಾಕ್ಷ್ಯ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ:11 ಗಂಟೆಗೆ ಕಿಡ್ನಾಪ್, 6.30 ಕೊಲೆ..! ನಾನು ಏನೂ ತಪ್ಪು ಮಾಡಿಲ್ಲ ಎಂದ ʼಡಿ ಬಾಸ್‌ʼ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪೈಕಿ ಮೂವರನ್ನ ಸ್ಥಳ ಮಹಜರಿಗೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕರೆದೊಯ್ದು ತಪಾಸಣೆ ನಡೆಸಿದರು.
ಆರೋಪಿಗಳಾದ ಕಾರ್ತಿಕ್, ನಿಖಿಲ್ ಹಾಗೂ ರಾಘವೇಂದ್ರ ಎಂಬುವರನ್ನು ಇಂದು ಮಧ್ಯಾಹ್ನ ಸುಮನಹಳ್ಳಿ ಬಿಡ್ಜ್ ಬಳಿ ಆರೋಪಿಗಳನ್ನ ಪೊಲೀಸರು ವಾಹನದಲ್ಲಿ ಕರೆತಂದರು. ರೇಣುಕಾಸ್ವಾಮಿಯ ಶವ ಬಿಸಾಕಿದ ಜಾಗವನ್ನ ಆರೋಪಿಗಳನ್ನ ತೋರಿಸಿದರು. ಮೊಬೈಲ್ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಸಂಗ್ರಹಿಸಿ ಮತ್ತೆ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದರು.

ಇನ್ನೂ ಪೊಲೀಸರ ಮುಂದೆ ಅಳಲು ತೋಡಿಕೊಂಡಿರುವ ದರ್ಶನ್, ನನಗೆ ಸಿಗರೇಟ್ ಸೇದಬೇಕು ಎನ್ನಿಸುತ್ತಿದೆ. ದಯವಿಟ್ಟು ಸಿಗರೇಟ್ ಕೊಡಿ ಎಂದು ಕೇಳಿಕೊಂಡಿದ್ದಾನೆ. ಆದರೆ ದರ್ಶನ್ ಮನವಿಗೆ ಪೊಲೀಸರು ಕ್ಯಾರೆ ಎಂದಿಲ್ಲ. ಒಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ  ಸೇರಿ 13 ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿ ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕಿ ಮುಂದಿನ ಹಂತಕ್ಕೆ ತನಿಖೆಯನ್ನು ತೆಗೆದುಕೊಂಡು ಹೋಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News